ಆ್ಯಪ್ನಗರ

ನಿರ್ಮಿತಿ ಕೇಂದ್ರ ಮೇಲ್ವಿಚಾಕರನ ವಿರುದ್ಧ ಪ್ರಕರಣ

ಇಲ್ಲಿನ ನಿರ್ಮಿತಿ ಕೇಂದ್ರದ ಮೇಲ್ವಿಚಾರಕ ಶಿವಯೋಗಿ ಯಳವಾರ ಒಟ್ಟು 33 ಕಾಮಗಾರಿಗಳಲ್ಲಿ 1.52 ಕೋಟಿ ರೂ.ಗಳಷ್ಟು ಸರಕಾರಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ನಗರದ ರಾಘವೇಂದ್ರ ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್‌ ದೂರು ದಾಖಲಿಸಲಾಗಿದೆ.

Vijaya Karnataka 27 May 2019, 9:29 pm
ಕಲಬುರಗಿ:ಇಲ್ಲಿನ ನಿರ್ಮಿತಿ ಕೇಂದ್ರದ ಮೇಲ್ವಿಚಾರಕ ಶಿವಯೋಗಿ ಯಳವಾರ ಒಟ್ಟು 33 ಕಾಮಗಾರಿಗಳಲ್ಲಿ 1.52 ಕೋಟಿ ರೂ.ಗಳಷ್ಟು ಸರಕಾರಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ನಗರದ ರಾಘವೇಂದ್ರ ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್‌ ದೂರು ದಾಖಲಿಸಲಾಗಿದೆ.
Vijaya Karnataka Web case against the central supervisor
ನಿರ್ಮಿತಿ ಕೇಂದ್ರ ಮೇಲ್ವಿಚಾಕರನ ವಿರುದ್ಧ ಪ್ರಕರಣ


ಹೆಚ್‌ಕೆಡಿಬಿ ಕಾರ್ಯದರ್ಶಿ ಸುಬೋಧ ಯಾದವ್‌ ಅವರ ಆದೇಶ ಮೇರೆಗೆ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಅವರ ಸೂಚನೆಯಂತೆ ನಿರ್ಮಿತಿಕೇಂದದ ಎಂಜಿನಿಯರ್‌ ವಾಮನರಾವ್‌ ದೇಶಪಾಂಡೆ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

ನಿರ್ಮಿತಿ ಕೇಂದ್ರವೂ ನೋಂದಾಯಿತ ಸಂಸ್ಥೆಯಾಗಿದೆ. ಸುಮಾರು 33 ಕಾಮಗಾರಿಗಳಲ್ಲಿ ಸಾಮಾಗ್ರಿಗಳ ಖರೀದಿ ಮತ್ತು ಕೂಲಿ ಕಾರ್ಮಿಕರ ಓಚರಗಳನ್ನು ಸಲ್ಲಿಸಿ ಹಣ ಸಂದಾಯಿಸಲಾಗಿದೆ. ಆದರೆ, ಕೆಲಸ ಪೂರ್ಣಗೊಂಡಿಲ್ಲ. ಜಿಲ್ಲಾಧಿಕಾರಿಗಳ ಕಾರ್ಯಾಲಯದ ಡಿಎಂಎಫ್‌ ಕೋಶದ ತಾಂತ್ರಿಕ ಸಲಹೆಗಾರರು ಮತ್ತು ತಾಂತ್ರಿಕ ಅಧಿಕಾರಿಗಳಿಂದ ಖುದ್ದಾಗಿ ಪರಿಶೀಲನೆ ನಡೆಸಲು ಹೆಚ್‌ಕೆಡಿಬಿ ಕಾರ್ಯದರ್ಶಿ ಸೂಚನೆ ನೀಡಿದ್ದರು. ಅಧಿಕಾರಿಗಳು ಪರಿಶೀಲನೆ ಮಾಡಿ,ಮಾಡಿರುವ ಕಾಮಗಾರಿಗೂ ಪಾವತಿ ಮಾಡಿರುವ ಹಣಕ್ಕೂ ವ್ಯತ್ಯಾಸವಿದೆ. ಅಲ್ಲದೆ, ಕಾಮಗಾರಿಗಳು ಕೂಡ ಸಮರ್ಪಕವಾಗಿ ನಿರ್ಮಾಣಗೊಂಡಿಲ್ಲ ಎಂದು ವರದಿ ನೀಡಿದ್ದರು. ಅಲ್ಲದೆ, 1,52,58,430 ರೂ ಹಣ ದುರ್ಬಳಕೆ ಆಗಿದೆ ಎಂದು ತಿಳಿಸಿದ್ದರು. ಅಲ್ಲದೆ, ಸಾಕಷ್ಟು ಬಾರಿ ಎಚ್ಚರಿಸಿದ್ದರೂ, ಯಾಳವಾರ ದುರ್ಬಳಕೆ ಹಣವನ್ನು ಮರು ಪಾವತಿ ಮಾಡಿರಲಿಲ್ಲ ಅಲ್ಲದೆ, ಕಾಮಗಾರಿಗಳನ್ನು ಪೂರ್ಣಗೊಳಿಸಿರಲಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಸುಬೋಧ ಯಾದವ್‌ ಅವರು ಶಿವಯೋಗಿ ಯಾಳವಾರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ