ದೇವಯ್ಯ ಗುತ್ತೇದಾರ್, ಕಲಬುರಗಿ
ನೆರೆ ಹಾನಿ ಪರಿಹಾರ ತ್ವರಿತವಾಗಿ ನೀಡಬೇಕು ಎಂಬ ಒತ್ತಡ ಪ್ರಬಲವಾಗುತ್ತಿರುವ ಮಧ್ಯೆಯೇ, ಜಿಲ್ಲೆಯಲ್ಲಿಪ್ರ ವಾಹದಿಂದ ಆಗಿರುವ ಹಾನಿ ಸಮೀಕ್ಷೆ ನಡೆಸಲು ಕೇಂದ್ರ ಅಧ್ಯಯನ ತಂಡ ಡಿ. 14 ರಂದು ಕಲಬುರಗಿಗೆ ಭೇಟಿ ನೀಡಲಿದೆ. ಗೃಹ ಇಲಾಖೆಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ಡಿಎಂಎ) ಜಂಟಿ ಕಾರ್ಯದರ್ಶಿ ರಮೇಶಕುಮಾರ್ ಗಂಟಾ ನೇತೃತ್ವದ ತಂಡ ಆಗಮಿಸಿ ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪ್ರವಾಹದಿಂದ ಆಗಿರುವ ಹಾನಿಯನ್ನು ಸಾಕ್ಷಾತ್ ಪರಿಶೀಲಿಸಲಿದೆ.
ಈ ತಂಡದಲ್ಲಿ ಹಣಕಾಸು ಇಲಾಖೆಯ ಇಂಡಿಯನ್ ಡಿಫೆನ್ಸ್ ಅಕೌಂಟ್ಸ್ನ ನಿರ್ದೇಶಕ ಡಾ. ಭರತೇಂದ್ರಕುಮಾರ್ ಸಿಂಗ್, ಕರ್ನಾಟಕ ಸರಕಾರದಿಂದ ಕಂದಾಯ ಇಲಾಖೆಯ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಡಾ. ಮನೋಜ್ ರಾಜನ್ ಇರಲಿದ್ದಾರೆ.
14ರಂದು ಬೆಂಗಳೂರಿನಿಂದ ಬೆಳಗ್ಗೆ ಸ್ಟಾರ್ ಏರ್ ಮೂಲಕ ಕಲಬುರಗಿ ಏರ್ಪೋರ್ಟ್ಗೆ ಬಂದಿಳಿಯಲಿದೆ. ಬಳಿಕ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ನಗರದಲ್ಲಿ ವಾಸ್ತವ್ಯ ಮಾಡಲಿದೆ. ಮರುದಿನ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಅವರನ್ನು ಭೇಟಿಯಾಗಲಿದೆ. ಯಾವ ಸ್ಥಳಗಳಿಗೆ ಭೇಟಿ ನೀಡಲಿದೆ ಎನ್ನುವುದು ಇನ್ನೂ ಗೊತ್ತಾಗಿಲ್ಲ.
ವರದಿ ಬಳಿಕ ಪರಿಹಾರ
ಕೇಂದ್ರ ತಂಡ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿ ಕೇಂದ್ರಕ್ಕೆ ಸಲ್ಲಿಸಿದ ಬಳಿಕ ರಾಜ್ಯ ಮತ್ತು ಜಿಲ್ಲೆಗೆ ನೆರೆ ಪರಿಹಾರ ಸಿಗಲಿದೆ. ಪರಿಹಾರ ನೀಡುವಂತೆ ವ್ಯಾಪಕ ಆಗ್ರಹ ಕೇಳಿ ಬರುತ್ತಿರುವ ಮಧ್ಯೆಯೇ ಕೇಂದ್ರ ತಂಡ ಜಿಲ್ಲೆಗೆ ಆಗಮಿಸುತ್ತಿರುವುದು ಹೆಚ್ಚು ಮಹತ್ವ ಪಡೆದುಕೊಂಡಿದೆ.
ಎಷ್ಟು ಹಾನಿ?
ಜಿಲ್ಲೆಯಲ್ಲಿ ಸುರಿದ ಭಾರಿ ಮಳೆ ಮತ್ತು ಪ್ರವಾಹಕ್ಕೆ 4.43 ಲಕ್ಷ ಹೆಕ್ಟೇರ್ ಬೆಳೆಹಾನಿಯಾಗಿ 328 ಕೋಟಿ ರೂ. ಹಾನಿಯಾಗಿರುವುದು ಜಂಟಿ ಸಮೀಕ್ಷೆಯಿಂದ ದೃಢಪಟ್ಟಿದೆ. ಮಳೆಯಿಂದ ತೊಗರಿ ಬೆಳೆಗೆ ಹೆಚ್ಚು ಹೊಡೆತ ಬಿದ್ದಿದೆ. ಜುಲೈನಿಂದ ಅಕ್ಟೋಬರ್ನಲ್ಲಿ ಸುರಿದ ಭಾರಿ ಮಳೆಯಿಂದ ಆಗಿರುವ ಬೆಳೆ ಹಾನಿ ಬಗ್ಗೆ ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿದ್ದರಿಂದ ಹಾನಿಯಾದ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿದೆ.
ಒಟ್ಟು 29, 5424 ರೈತರ ಬೆಳೆ ಹಾನಿಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹಾನಿಯಾದ ಬಗ್ಗೆ ನಿಖರ ಮಾಹಿತಿ ಸಿಕ್ಕಿದ್ದು, ಇನ್ನು ಪರಿಹಾರ ನೀಡುವಂತೆ ರೈತ ವಲಯದಿಂದ ಒತ್ತಡ ಹೆಚ್ಚಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ, ಜೇವರ್ಗಿ, ಚಿತ್ತಾಪುರ, ಶಹಾಬಾದ್,ಸೇಡಂ ತಾಲೂಕಿನ ನದಿ ತೀರದ ಬೆಳೆಗಳು ಜಲಾವೃತಗೊಂಡು ಅಪಾರ ಹಾನಿಯಾಗಿತ್ತು. ಭಿಮಾ ಮತ್ತು ಕಾಗಿಣಾ ಪ್ರವಾಹ ಜನಜೀವನ ಹೈರಾಣ ಮಾಡಿತ್ತು. ಕೇಂದ್ರ ತಂಡ ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಡಿಸಿ ಜ್ಯೋತ್ಸ್ಯಾ ಅವರು ಅಧಿಕಾರಿಗಳ ಸಭೆ ನಡೆಸಿ ಸಿದ್ಧತೆಗೆ ಸೂಚಿಸಿದ್ದಾರೆ.
ಎಲ್ಲೆಲ್ಲಿ ಭೇಟಿ
ಒಟ್ಟು ಮೂರು ತಂಡಗಳಲ್ಲಿ ಕೇಂದ್ರದ ನೆರೆ ಅಧ್ಯಯನ ತಂಡ ಪ್ರವಾಸ ಮಾಡಲಿದೆ. ಡಿ. 14ರಂದು ಕಲಬುರಗಿ, ವಿಜಯಪುರ ಮತ್ತು ಉಡುಪಿ ಜಿಲ್ಲೆಗಳಿಗೆ ಭೇಟಿ ನೀಡಲಿದೆ. 15ರಂದು ಸಿಎಂ ಯಡಿಯೂರಪ್ಪ ಅವರನ್ನು ಬೆಂಗಳೂರಲ್ಲಿಭೇಟಿಯಾಗಿ ಹಾನಿ ಬಗ್ಗೆ ಚರ್ಚಿಸಿ ಅಂಕಿ ಅಂಶ ಸಂಗ್ರಹಿಸಿ ಹೊಸದಿಲ್ಲಿಗೆ ತೆರಳಲಿದೆ.
ನೆರೆ ಹಾನಿ ಪರಿಹಾರ ತ್ವರಿತವಾಗಿ ನೀಡಬೇಕು ಎಂಬ ಒತ್ತಡ ಪ್ರಬಲವಾಗುತ್ತಿರುವ ಮಧ್ಯೆಯೇ, ಜಿಲ್ಲೆಯಲ್ಲಿಪ್ರ ವಾಹದಿಂದ ಆಗಿರುವ ಹಾನಿ ಸಮೀಕ್ಷೆ ನಡೆಸಲು ಕೇಂದ್ರ ಅಧ್ಯಯನ ತಂಡ ಡಿ. 14 ರಂದು ಕಲಬುರಗಿಗೆ ಭೇಟಿ ನೀಡಲಿದೆ. ಗೃಹ ಇಲಾಖೆಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ಡಿಎಂಎ) ಜಂಟಿ ಕಾರ್ಯದರ್ಶಿ ರಮೇಶಕುಮಾರ್ ಗಂಟಾ ನೇತೃತ್ವದ ತಂಡ ಆಗಮಿಸಿ ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪ್ರವಾಹದಿಂದ ಆಗಿರುವ ಹಾನಿಯನ್ನು ಸಾಕ್ಷಾತ್ ಪರಿಶೀಲಿಸಲಿದೆ.
ಈ ತಂಡದಲ್ಲಿ ಹಣಕಾಸು ಇಲಾಖೆಯ ಇಂಡಿಯನ್ ಡಿಫೆನ್ಸ್ ಅಕೌಂಟ್ಸ್ನ ನಿರ್ದೇಶಕ ಡಾ. ಭರತೇಂದ್ರಕುಮಾರ್ ಸಿಂಗ್, ಕರ್ನಾಟಕ ಸರಕಾರದಿಂದ ಕಂದಾಯ ಇಲಾಖೆಯ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಡಾ. ಮನೋಜ್ ರಾಜನ್ ಇರಲಿದ್ದಾರೆ.
14ರಂದು ಬೆಂಗಳೂರಿನಿಂದ ಬೆಳಗ್ಗೆ ಸ್ಟಾರ್ ಏರ್ ಮೂಲಕ ಕಲಬುರಗಿ ಏರ್ಪೋರ್ಟ್ಗೆ ಬಂದಿಳಿಯಲಿದೆ. ಬಳಿಕ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ನಗರದಲ್ಲಿ ವಾಸ್ತವ್ಯ ಮಾಡಲಿದೆ. ಮರುದಿನ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಅವರನ್ನು ಭೇಟಿಯಾಗಲಿದೆ. ಯಾವ ಸ್ಥಳಗಳಿಗೆ ಭೇಟಿ ನೀಡಲಿದೆ ಎನ್ನುವುದು ಇನ್ನೂ ಗೊತ್ತಾಗಿಲ್ಲ.
ವರದಿ ಬಳಿಕ ಪರಿಹಾರ
ಕೇಂದ್ರ ತಂಡ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿ ಕೇಂದ್ರಕ್ಕೆ ಸಲ್ಲಿಸಿದ ಬಳಿಕ ರಾಜ್ಯ ಮತ್ತು ಜಿಲ್ಲೆಗೆ ನೆರೆ ಪರಿಹಾರ ಸಿಗಲಿದೆ. ಪರಿಹಾರ ನೀಡುವಂತೆ ವ್ಯಾಪಕ ಆಗ್ರಹ ಕೇಳಿ ಬರುತ್ತಿರುವ ಮಧ್ಯೆಯೇ ಕೇಂದ್ರ ತಂಡ ಜಿಲ್ಲೆಗೆ ಆಗಮಿಸುತ್ತಿರುವುದು ಹೆಚ್ಚು ಮಹತ್ವ ಪಡೆದುಕೊಂಡಿದೆ.
ಪ್ರವಾಹ ಮತ್ತು ಅತಿವೃಷ್ಟಿಗೆ ಜಿಲ್ಲೆಯಲ್ಲಿ 328 ಕೋಟಿ ರೂ. ಬೆಳೆ ಹಾನಿಯಾಗಿರುವ ಬಗ್ಗೆ ಜಂಟಿ ಸಮೀಕ್ಷೆಯಿಂದ ದೃಢಪಟ್ಟಿದೆ. ಈ ಬಗ್ಗೆ ವರದಿ ಸಲ್ಲಿಸಲಾಗಿದೆ.
ಎಷ್ಟು ಹಾನಿ?
ಜಿಲ್ಲೆಯಲ್ಲಿ ಸುರಿದ ಭಾರಿ ಮಳೆ ಮತ್ತು ಪ್ರವಾಹಕ್ಕೆ 4.43 ಲಕ್ಷ ಹೆಕ್ಟೇರ್ ಬೆಳೆಹಾನಿಯಾಗಿ 328 ಕೋಟಿ ರೂ. ಹಾನಿಯಾಗಿರುವುದು ಜಂಟಿ ಸಮೀಕ್ಷೆಯಿಂದ ದೃಢಪಟ್ಟಿದೆ. ಮಳೆಯಿಂದ ತೊಗರಿ ಬೆಳೆಗೆ ಹೆಚ್ಚು ಹೊಡೆತ ಬಿದ್ದಿದೆ. ಜುಲೈನಿಂದ ಅಕ್ಟೋಬರ್ನಲ್ಲಿ ಸುರಿದ ಭಾರಿ ಮಳೆಯಿಂದ ಆಗಿರುವ ಬೆಳೆ ಹಾನಿ ಬಗ್ಗೆ ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿದ್ದರಿಂದ ಹಾನಿಯಾದ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿದೆ.
ಒಟ್ಟು 29, 5424 ರೈತರ ಬೆಳೆ ಹಾನಿಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹಾನಿಯಾದ ಬಗ್ಗೆ ನಿಖರ ಮಾಹಿತಿ ಸಿಕ್ಕಿದ್ದು, ಇನ್ನು ಪರಿಹಾರ ನೀಡುವಂತೆ ರೈತ ವಲಯದಿಂದ ಒತ್ತಡ ಹೆಚ್ಚಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ, ಜೇವರ್ಗಿ, ಚಿತ್ತಾಪುರ, ಶಹಾಬಾದ್,ಸೇಡಂ ತಾಲೂಕಿನ ನದಿ ತೀರದ ಬೆಳೆಗಳು ಜಲಾವೃತಗೊಂಡು ಅಪಾರ ಹಾನಿಯಾಗಿತ್ತು. ಭಿಮಾ ಮತ್ತು ಕಾಗಿಣಾ ಪ್ರವಾಹ ಜನಜೀವನ ಹೈರಾಣ ಮಾಡಿತ್ತು. ಕೇಂದ್ರ ತಂಡ ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಡಿಸಿ ಜ್ಯೋತ್ಸ್ಯಾ ಅವರು ಅಧಿಕಾರಿಗಳ ಸಭೆ ನಡೆಸಿ ಸಿದ್ಧತೆಗೆ ಸೂಚಿಸಿದ್ದಾರೆ.
ಎಲ್ಲೆಲ್ಲಿ ಭೇಟಿ
ಒಟ್ಟು ಮೂರು ತಂಡಗಳಲ್ಲಿ ಕೇಂದ್ರದ ನೆರೆ ಅಧ್ಯಯನ ತಂಡ ಪ್ರವಾಸ ಮಾಡಲಿದೆ. ಡಿ. 14ರಂದು ಕಲಬುರಗಿ, ವಿಜಯಪುರ ಮತ್ತು ಉಡುಪಿ ಜಿಲ್ಲೆಗಳಿಗೆ ಭೇಟಿ ನೀಡಲಿದೆ. 15ರಂದು ಸಿಎಂ ಯಡಿಯೂರಪ್ಪ ಅವರನ್ನು ಬೆಂಗಳೂರಲ್ಲಿಭೇಟಿಯಾಗಿ ಹಾನಿ ಬಗ್ಗೆ ಚರ್ಚಿಸಿ ಅಂಕಿ ಅಂಶ ಸಂಗ್ರಹಿಸಿ ಹೊಸದಿಲ್ಲಿಗೆ ತೆರಳಲಿದೆ.