ಆ್ಯಪ್ನಗರ

ಅಲುಗಾಡುತ್ತಿದೆ ಗೋರಿಗಳ ಮೇಲಿನ ಚಾದರ್‌

ಪಟ್ಟಣದ ಲಾಲ್‌ ಅಹ್ಮದ್‌ ದರ್ಗಾದಲ್ಲಿವಿಚಿತ್ರ, ವಿಸ್ಮಯಕಾರಿ ಘಟನೆಗಳು ನಡೆಯುತ್ತಿವೆ. ದರ್ಗಾದಲ್ಲಿರುವ ಎರಡು ಗೋರಿಗಳ ಮೇಲೆ ಹೊದಿಸಿರುವ ಚಾದರ್‌ ಮೇಲೆ ಕೆಳಗೆ ಅಲುಗಾಡುತ್ತಿದ್ದು, ಈ ದೃಶ್ಯ ಕಂಡ ಜನರು ಅಚ್ಚರಿಗೊಂಡಿದ್ದಾರೆ.

Vijaya Karnataka 7 Nov 2019, 9:21 pm
ಕಾಳಗಿ:ಪಟ್ಟಣದ ಲಾಲ್‌ ಅಹ್ಮದ್‌ ದರ್ಗಾದಲ್ಲಿವಿಚಿತ್ರ, ವಿಸ್ಮಯಕಾರಿ ಘಟನೆಗಳು ನಡೆಯುತ್ತಿವೆ. ದರ್ಗಾದಲ್ಲಿರುವ ಎರಡು ಗೋರಿಗಳ ಮೇಲೆ ಹೊದಿಸಿರುವ ಚಾದರ್‌ ಮೇಲೆ ಕೆಳಗೆ ಅಲುಗಾಡುತ್ತಿದ್ದು, ಈ ದೃಶ್ಯ ಕಂಡ ಜನರು ಅಚ್ಚರಿಗೊಂಡಿದ್ದಾರೆ.
Vijaya Karnataka Web chador on shaky tombs
ಅಲುಗಾಡುತ್ತಿದೆ ಗೋರಿಗಳ ಮೇಲಿನ ಚಾದರ್‌

ಕಾಳಗಿ ಪಟ್ಟಣದ ಲಾಲ್‌ ಅಹ್ಮದ್‌ ದರ್ಗಾದಲ್ಲಿಭಾನುವಾರ ಸರ್ವ ಸಮುದಾಯದ ಮುಖಂಡರು ಸಭೆ ನಡೆಸಿದರು.


ಗೋರಿಯ ಮೇಲೆ ಹಾಕಿರುವ ಚಾದರದಲ್ಲಿಚಲನೆ ಕಂಡು ಬಂದಿದ್ದು, ಅಕ್ಟೋಬರ್‌ 28ರಂದು ಅಮಾವಾಸ್ಯೆ ದಿನ. ಬಳಿಕ ನ.2ರಂದು ಶನಿವಾರ ಸಹ ರಾತ್ರಿ 8 ಗಂಟೆಗೆ ಪುನಃ ಎರಡು ಗೋರಿಗಳ ಮೇಲಿರುವ ಚಾದರ್‌ ಹೆಚ್ಚಿನ ಪ್ರಮಾಣದಲ್ಲಿಮೇಲೆ ಕೆಳಗೆ ಅಲುಗಾಡಿದೆ. ಈ ಸುದ್ದಿ ಪಟ್ಟಣದಾದ್ಯಂತ ಪಸರಿಸಿದ್ದು, ಜನರು ದರ್ಗಾದಲ್ಲಿನಡೆಯುತ್ತಿರುವ ಈ ವಿಸ್ಮಯ ನೋಡಲು ತಂಡೋಪ ತಂಡವಾಗಿ ಬರುತ್ತಿದ್ದಾರೆ. ಲಾಲ್‌ ಅಹ್ಮದ್‌ ದರ್ಗಾದಲ್ಲಿಇದೇ ಮೊದಲ ಬಾರಿಗೆ ಈ ರೀತಿಯ ವಿಸ್ಮಯ ನಡೆದಿದೆ ಎಂದು ಸ್ಥಳೀಯರು ಹೇಳುತ್ತಾರೆ. ದರ್ಗಾದಲ್ಲಿಗೋರಿಯ ಮೇಲಿನ ಚಾದರ್‌ ಅಲುಗಾಡುತ್ತಿರುವುದು ಎಲ್ಲರ ಕುತೂಹಲ ಕೆರಳಿಸಿದೆ.

ಕಂದೂರಿ ಕೈಗೊಳ್ಳಲು ನಿರ್ಧಾರ

ಸರ್ವ ಸಮುದಾಯದ ಮುಖಂಡರು ಗ್ರಾಮದ ಒಳಿತಿಗಾಗಿ ಎಲ್ಲರೂ ಒಗ್ಗೂಡಿ ನ.14 ರಂದು ಮಲಘಾಣ ಹತ್ತಿರವಿರುವ ಚೌಸೇನ್‌ ಸಾಬ ದರ್ಗಾದಲ್ಲಿಕಂದೂರಿ ಹಾಗೂ ಕಾಳಗಿ ಪಟ್ಟಣದ ನೀಲಕಂಠ ಕಾಳೇಶ್ವರ ದೇವರಿಗೆ ಅಭಿಷೇಕ ಹಾಗೂ ನ.17 ರಂದು ಲಾಲ್‌ ಅಹ್ಮದ್‌ ದರ್ಗಾದಲ್ಲಿಯೂ ಕಂದೂರಿ ಮಾಡುವ ನಿರ್ಧಾರ ಕೈಗೊಳ್ಳಲಾಯಿತು.

ಸುಭಾಷ ಕದಂ, ಶರಣಗೌಡ ಪೊಲೀಸ್‌ ಪಾಟೀಲ್‌, ಪರಮೇಶ್ವರ ಮಡಿವಾಳ, ರಾಘವೆಂದ್ರ ಗುತ್ತೇದಾರ್‌, ರವಿದಾಸ ಪತಂಗೆ, ಖಾಜಾ ಮಾಸ್ಟರ್‌ ಗೋಟೂರ ಮಾತನಾಡಿದರು. ಸಭೆಯಲ್ಲಿಸರ್ವ ಸಮುದಾಯದ ಪ್ರಮುಖರು ಭಾಗವಹಿಸಿದ್ದರು.

ಸರ್ವ ಸಮುದಾಯದವರ ಸಭೆ

ಭಾನುವಾರ ಬೆಳಗ್ಗೆ ಲಾಲ್‌ ಅಹ್ಮದ್‌ ದರ್ಗಾದಲ್ಲಿಪಟ್ಟಣದ ಸರ್ವ ಸಮುದಾಯದ ಪ್ರಮುಖರು ಸಭೆ ಸೇರಿದ್ದರು. ಸಭೆಯಲ್ಲಿಮಾತನಾಡಿದ ಸಾಧಿಕ್‌ ಮಿಯಾ ಗಾಡಿವಾನ್‌, ಅ.28 ರಂದು ಅಮಾವಾಸ್ಯೆ ದಿನದಂದು ಸಹ ಇದೇ ರೀತಿ ಆಗಿತ್ತು, ಪುನಃ ನಿನ್ನೆ ನ.2ರಂದು ಶನಿವಾರ ರಾತ್ರಿ 8 ಗಂಟೆಗೆ ಸಹ ಗೋರಿಯ ಮೇಲಿನ ಚಾದರ್‌ ಅಲುಗಾಡಿದೆ. ಇದು ಒಳ್ಳೆಯದಕ್ಕಾ ಅಥವಾ ಗ್ರಾಮಕ್ಕೆ ಏನಾದರೂ ಕಂಟಕ ಎದುರಾಗಲಿದೆಯಾ ಎಂಬ ಆತಂಕ ಮೂಡಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ