ಆ್ಯಪ್ನಗರ

‘ಚಿಂಚೋಳಿ ಲಿಂಗಾಯತರು ಬಿಜೆಪಿಗೆ ಮತ ಹಾಕಿಲ್ಲ’

ಚಿಂಚೋಳಿ ಉಪ ಚುನಾವಣೆಯಲ್ಲಿ ಲಿಂಗಾಯತರು ಅವಿನಾಶ ಜಾಧವಗೆ ಮತ ಹಾಕಿಲ್ಲ, ಅವರು ಕಾಂಗ್ರೆಸ್ಸಿಗರಿಂದ ಹಣ ಪಡೆದು ಅವರಿಗೇ ಬೆಂಬಲಿಸಿದ್ದಾರೆ. ಜಾಧವ ಈ ಬಾರಿ ಗೆದ್ದಿದ್ದು ಬಂಜಾರಾ ಹಾಗೂ ಕೋಲಿ ಸಮಾಜದ ಮತಗಳಿಂದ' ಈ ರೀತಿ ವಿವಾದಿತ ಹೇಳಿಕೆ ನೀಡಿದವರು ಬೇರಾರೂ ಅಲ್ಲ, ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಬಾಬುರಾವ ಚಿಂಚನಸೂರ.

Vijaya Karnataka 29 May 2019, 10:25 pm
ಕಲಬುರಗಿ :' ಚಿಂಚೋಳಿ ಉಪ ಚುನಾವಣೆಯಲ್ಲಿ ಲಿಂಗಾಯತರು ಅವಿನಾಶ ಜಾಧವಗೆ ಮತ ಹಾಕಿಲ್ಲ, ಅವರು ಕಾಂಗ್ರೆಸ್ಸಿಗರಿಂದ ಹಣ ಪಡೆದು ಅವರಿಗೇ ಬೆಂಬಲಿಸಿದ್ದಾರೆ. ಜಾಧವ ಈ ಬಾರಿ ಗೆದ್ದಿದ್ದು ಬಂಜಾರಾ ಹಾಗೂ ಕೋಲಿ ಸಮಾಜದ ಮತಗಳಿಂದ' ಈ ರೀತಿ ವಿವಾದಿತ ಹೇಳಿಕೆ ನೀಡಿದವರು ಬೇರಾರೂ ಅಲ್ಲ, ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಬಾಬುರಾವ ಚಿಂಚನಸೂರ.
Vijaya Karnataka Web chincholi lingayataru not voted for bjp
‘ಚಿಂಚೋಳಿ ಲಿಂಗಾಯತರು ಬಿಜೆಪಿಗೆ ಮತ ಹಾಕಿಲ್ಲ’


ಫಲಿತಾಂಶ ಪ್ರಕಟಗೊಂಡ ನಂತರ ಚಿಂಚನಸೂರ ನಿವಾಸದಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಬಾಬುರಾವ ಈ ರೀತಿ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.

ಈ ಹಿಂದೆ ಉಮೇಶ ಜಾಧವ ಸ್ಪರ್ಧಿಸಿದ್ದಾಗ ಅವರು 14 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಆದರೆ ಅವರ ಪುತ್ರ 8 ಸಾವಿರ ಮತಗಳ ಲೀಡ್‌ನಲ್ಲಿ ಗೆದ್ದಿದ್ದಾರೆ. ಉಮೇಶ ಜಾಧವಗೆ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿದ್ದರು. ಆದರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ಸಿಗರ ಮಾತು ಕೇಳಿ ಬಿಜೆಪಿಗೆ ಕೈ ಕೊಟ್ಟಿದ್ದಾರೆ. ಅವಿನಾಶ ಗೆಲುವಿಗೆ ಬಂಜಾರಾ ಹಾಗೂ ಕೋಲಿ ಸಮಾಜ ಕಾರಣವಾಗಿವೆ. ಕೋಲಿ ಸಮಾಜದ ಜನರು ನನ್ನ ಮುಖ ನೋಡಿ ಬಿಜೆಪಿಗೆ ಬೆಂಬಲಿಸಿದ್ದಾರೆ ಎಂದು ಚಿಂಚನಸೂರ ಬೆಂಬಲಿಗರ ಸಭೆಯಲ್ಲಿ ಬಹಿರಂಗವಾಗಿಯೇ ಮಾತನಾಡಿದ್ದಾರೆ.

ಸದಾ ಒಂದಿಲ್ಲೊಂದು ವಿವಾದಿತ ಹೇಳಿಕೆ, ಹಾಸ್ಯ ಮಾತಿನ ಮೂಲಕ ಗಮನ ಸೆಳೆಯುವ ಚಿಂಚನಸೂರ, ಇದೀಗ ಲಿಂಗಾಯತ ಮತಗಳು ಬಿಜೆಪಿಗೆ ಬಂದಿಲ್ಲ ಎಂಬ ಹೇಳಿಕೆ ನೀಡುವ ಮೂಲಕ ಲಿಂಗಾಯತರ ಆಕ್ರೋಶಕ್ಕೆ ತುತ್ತಾಗುವ ಸಾಧ್ಯತೆಗಳಿವೆ.

ಖರ್ಗೆ ಸೋಲಿಸಲು ಬಿಜೆಪಿಗೆ ಸೇರ್ಪಡೆ

ನಾನು ಬಿಜೆಪಿಗೆ ಸೇರ್ಪಡೆಗೊಳ್ಳಲು ಮೂರು ಕಾರಣಗಳಿದ್ದು, ಅದರಲ್ಲಿ ಪ್ರಮುಖವಾದದ್ದು ಖರ್ಗೆ ಸೋಲಿಸುವುದಾಗಿತ್ತು. ಎರಡನೇಯದು ಯಡಿಯೂರಪ್ಪನವರನ್ನು ಸಿಎಂ ಮಾಡುವುದು ಹಾಗೂ ಮೂರನೇಯದು ಕೋಲಿ ಸಮಾಜ ಎಸ್ಟಿಗೆ ಸೇರ್ಪಡೆ ಮಾಡುವುದು. ಈಗಾಗಲೇ ಖರ್ಗೆ ಅವರನ್ನು ಸೋಲಿಸಿದ್ದಾಗಿದ್ದು, ಇನ್ನೂ ಬಿಎಸ್‌ವೈ ಅವರನ್ನು ಸಿಎಂ ಮಾಡಿ, ಕೋಲಿ ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡುತ್ತೇನೆ ಎಂದು ಬೆಂಬಲಿಗರ ಸಭೆಯಲ್ಲಿ ಚಿಂಚನಸೂರ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ