ಆ್ಯಪ್ನಗರ

ಚೌಕಿದಾರ ಚೋರ್‌ ಹೈ: ಪ್ರಧಾನಿ ವಿರುದ್ಧ ಖರ್ಗೆ ವಾಗ್ದಾಳಿ

ದೇಶದ ಚೌಕಿದಾರನೆಂದು ಹೇಳಿಕೊಳ್ಳುತ್ತಿರುವವನು ಏನಿದ್ದಾನೆ ಎನ್ನುವುದು ಜನರಿಗೆ ಗೊತ್ತಿದೆ. ಪ್ರಧಾನಮಂತ್ರಿ ಅಲ್ಲ, ಪ್ರಧಾನ ಸೇವಕ್‌ ಅನ್ನುತ್ತಿದ್ದ ಬಿಜೆಪಿ ಸರಕಾರದ ಈ ಚೌಕಿದಾರ ಈಗ ದೇಶದಲ್ಲಿ ಆಗುವ ದೊಡ್ಡ ಹಗರಣಗಳಿಗೆ ರಕ್ಷ ಣೆ ಕೊಡ್ತಿದಾನೆ ಎಂದು ಲೋಕಸಭೆ ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಏಕ ವಚನದಲ್ಲಿಯೇ ಹರಿಹಾಯ್ದರು.

Vijaya Karnataka 18 Mar 2019, 10:44 pm
ಕಲಬುರಗಿ :ದೇಶದ ಚೌಕಿದಾರನೆಂದು ಹೇಳಿಕೊಳ್ಳುತ್ತಿರುವವನು ಏನಿದ್ದಾನೆ ಎನ್ನುವುದು ಜನರಿಗೆ ಗೊತ್ತಿದೆ. ಪ್ರಧಾನಮಂತ್ರಿ ಅಲ್ಲ, ಪ್ರಧಾನ ಸೇವಕ್‌ ಅನ್ನುತ್ತಿದ್ದ ಬಿಜೆಪಿ ಸರಕಾರದ ಈ ಚೌಕಿದಾರ ಈಗ ದೇಶದಲ್ಲಿ ಆಗುವ ದೊಡ್ಡ ಹಗರಣಗಳಿಗೆ ರಕ್ಷ ಣೆ ಕೊಡ್ತಿದಾನೆ ಎಂದು ಲೋಕಸಭೆ ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಏಕ ವಚನದಲ್ಲಿಯೇ ಹರಿಹಾಯ್ದರು.
Vijaya Karnataka Web chore high defeat khur against prime minister
ಚೌಕಿದಾರ ಚೋರ್‌ ಹೈ: ಪ್ರಧಾನಿ ವಿರುದ್ಧ ಖರ್ಗೆ ವಾಗ್ದಾಳಿ


ಭಾನುವಾರ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಚೌಕಿದಾರ ದೇಶದ ಸಂಪತ್ತು ರಕ್ಷ ಣೆ ಮಾಡೋದು ಬಿಟ್ಟು ಬೇರೆಯವರಿಗೆ ದುಡ್ಡು ಮಾಡಿ ಕೊಡೋದು ಸರಿಯಲ್ಲ. ರಫೇಲ್‌ ಡೀಲ್‌, ದೊಡ್ಡ ದೊಡ್ಡ ಶ್ರೀಮಂತರು, ಖಾಸಗಿ ಕಂಪನಿಗಳ ಸುಮಾರು ಮೂರು ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದರು. ಈ ದುಡ್ಡು ಜನರದ್ದು. ಆದರೆ ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರೆ ಆಗಲ್ಲ ಎನ್ನುತ್ತಾರೆ,'' ಎಂದು ತರಾಟೆಗೆ ತೆಗೆದುಕೊಂಡರು.

''ರೈತರನ್ನು ಋುಣಮುಕ್ತ ಮಾಡಬೇಕಿದ್ದ ಸರಕಾರ ಈಗ ಚುನಾವಣಾ ಸಮಯದಲ್ಲಿ ಎರಡೆರಡು ಸಾವಿರ ರೂ ಮೊದಲ ಕಂತು ಬಿಡುಗಡೆ ಮಾಡುತ್ತಿದ್ದಾರೆ. ಈಗ ಒಬ್ಬ ರೈತನಿಗೆ ದಿನಕ್ಕೆ 16.40 ರೂಪಾಯಿ ಕೊಟ್ಟಂತಾಗುತ್ತಿದೆ. ಮನೆಯಲ್ಲಿ ಇಬ್ಬರು ರೈತರಿದ್ದರೆ 8 ರೂಪಾಯಿ ಬಂದಂತಾಗುತ್ತದೆ,'' ಎಂದು ವ್ಯಂಗ್ಯವಾಡಿದರು.

''ದೇಶದ ಅಭಿವೃದ್ಧಿ ಮಾಡುತ್ತಿರುವುದಾಗಿ ಹೇಳುವವರು ದೇಶದ ದಿಕ್ಕು ತಪ್ಪಿಸುತ್ತಿದ್ದಾರೆ. ಈ ಚೌಕಿದಾರ ಸಾವಿರಾರು ಕೋಟಿ ರೂಪಾಯಿ ಬೇರೆಯವರಿಗೆ ಲಾಭ ಮಾಡಿ ಕೊಡ್ತಿದ್ದಾನೆ,'' ಎಂದು ಆರೋಪಿಸಿದರು.

''ಜನರ ದುಡ್ಡು ಕದ್ದು ಬೇರೆಯವರಿಗೆ ಹಂಚುತ್ತಿದ್ದಾರೆ. ಹೀಗಾಗಿ ಚೌಕಿದಾರ್‌ ಚೋರ್‌ ಹೈ ಎಂದು ಹೇಳಿದ್ದು. ಈಗ ತಾವೇ ಮರುನಾಮಕರಣ ಮಾಡಿಕೊಂಡಿದ್ದು ಜನರು ಉತ್ತರ ಕೊಡುತ್ತಾರೆ,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ