ಆ್ಯಪ್ನಗರ

ಬಿಜೆಪಿ ಶಾಸಕ ಗುತ್ತೇದಾರ್‌ಗೆ ಸಿಎಂ ಗಾಳ

ಆಪರೇಷನ್‌ ಕಮಲ ವದಂತಿ ಮಧ್ಯೆಯೇ, ಬಿಜೆಪಿ ಶಾಸಕ ಸುಭಾಷ ಗುತ್ತೇದಾರ್‌ಗೆ ಜೆಡಿಎಸ್‌ಗೆ ಬಂದರೆ ಎಲ್ಲ ಕೆಲಸ ಮಾಡಿಕೊಡುವುದಾಗಿ ಸಿಎಂ ಆಮಿಷ ನೀಡಿರುವುದು ಬಹಿರಂಗವಾಗಿದೆ.

Vijaya Karnataka 19 Sep 2018, 5:57 pm
ಕಲಬುರಗಿ : ಆಪರೇಷನ್‌ ಕಮಲ ವದಂತಿ ಮಧ್ಯೆಯೇ, ಬಿಜೆಪಿ ಶಾಸಕ ಸುಭಾಷ ಗುತ್ತೇದಾರ್‌ಗೆ ಜೆಡಿಎಸ್‌ಗೆ ಬಂದರೆ ಎಲ್ಲ ಕೆಲಸ ಮಾಡಿಕೊಡುವುದಾಗಿ ಸಿಎಂ ಆಮಿಷ ನೀಡಿರುವುದು ಬಹಿರಂಗವಾಗಿದೆ.
Vijaya Karnataka Web cm invites bjp mla guttedar to join jds
ಬಿಜೆಪಿ ಶಾಸಕ ಗುತ್ತೇದಾರ್‌ಗೆ ಸಿಎಂ ಗಾಳ


ಆಳಂದ ಬಿಜೆಪಿ ಶಾಸಕ ಗುತ್ತೇದಾರ್‌ ಅವರೇ ಇದನ್ನು ಖುದ್ದಾಗಿ ಬಹಿರಂಗಪಡಿಸಿದ್ದಾರೆ. ''ಮಳೆಯ ಕೊರತೆಯಿಂದ ಸಂಕಷ್ಟದಲ್ಲಿರುವ ಆಳಂದ ತಾಲೂಕನ್ನು ಬರ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಸೇರಿಸುವಂತೆ ಮನವಿ ಸಲ್ಲಿಸಲು ಹೋದಾಗಿ ಕುಮಾರಸ್ವಾಮಿ ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ,'' ಎಂದು ಗುತ್ತೇದಾರ್‌ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಆಳಂದದಲ್ಲಿ ಮಳೆ ಕೊರತೆ ಇದೆ. ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದೇನೆ. ಆದರೆ ಅವರು ನಮ್ಮ ಪಕ್ಷಕ್ಕೆ ಬನ್ನಿ ಎಲ್ಲ ವ್ಯವಸ್ಥೆ ಮಾಡುತ್ತೇವೆ. ಬೆಂಗಳೂರಿಗೆ ಬಂದು ಭೇಟಿಯಾಗಿ, ಅಲ್ಲೆ ಕುಳಿತು ಚರ್ಚಿಸೋಣ ಎಂದಿದ್ದಾರೆ,'' ಎಂದರು.

ಜೆಡಿಎಸ್‌ ಪಕ್ಷಕ್ಕೆ ಸೇರುತ್ತಿರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಗುತ್ತೇದಾರ್‌, ''ಸೋಮವಾರ ಮುಖ್ಯಮಂತ್ರಿಯವರನ್ನು ಭೇಟಿಯಾದ ಸಂದರ್ಭದಲ್ಲಿ ಪಕ್ಷ ಸೇರುವಂತೆ ಆಹ್ವಾನಿಸಿದ್ದಾರೆ ನಿಜ. ಆದರೆ, ತಾವು ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಜೆಡಿಎಸ್‌ ಸೇರುವ ಪ್ರಶ್ನೆಯೇ ಇಲ್ಲ. ನಾನು ಈ ಹಿಂದೆ ಜೆಡಿಎಸ್‌ನಲ್ಲಿದ್ದೆ. ಹಳೆಯ ಸ್ನೇಹಿತರಾಗಿದ್ದು, ಪ್ರೀತಿಯಿಂದ ಹಾಗೆ ಹೇಳಿರಬಹುದು,'' ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್‌ ನರಿಬೋಳ, ಮಾಜಿ ಶಾಸಕ ವಾಲ್ಮೀಕಿ ನಾಯಕ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ