ಆ್ಯಪ್ನಗರ

ಸಿಎಂ ಕುಮಾರಸ್ವಾಮಿ ರಾಜೀನಾಮೆಗೆ ಆಗ್ರಹ

ಜೆಡಿಎಸ್‌-ಕಾಂಗ್ರೆಸ್‌ ನೇತೃತ್ವದ ಮೈತ್ರಿ ಸರಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಸರಕಾರ ಬಹುಮತ ಕಳೆದುಕೊಂಡಿರುವುದರಿಂದ ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ಕಲಬುರಗಿ ಗ್ರಾಮೀಣ ಹಾಗೂ ನಗರ ಘಟಕದ ಕಾರ್ಯಕರ್ತರು ಮಂಗಳವಾರ ನಗರದ ಸರದಾರ ವಲ್ಲಭಬಾಯಿ ಪಟೇಲ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

Vijaya Karnataka 11 Jul 2019, 9:10 pm
ಕಲಬುರಗಿ:ಜೆಡಿಎಸ್‌-ಕಾಂಗ್ರೆಸ್‌ ನೇತೃತ್ವದ ಮೈತ್ರಿ ಸರಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಸರಕಾರ ಬಹುಮತ ಕಳೆದುಕೊಂಡಿರುವುದರಿಂದ ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ಕಲಬುರಗಿ ಗ್ರಾಮೀಣ ಹಾಗೂ ನಗರ ಘಟಕದ ಕಾರ್ಯಕರ್ತರು ಮಂಗಳವಾರ ನಗರದ ಸರದಾರ ವಲ್ಲಭಬಾಯಿ ಪಟೇಲ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
Vijaya Karnataka Web cm kumaraswamy demands resignation
ಸಿಎಂ ಕುಮಾರಸ್ವಾಮಿ ರಾಜೀನಾಮೆಗೆ ಆಗ್ರಹ


ರಾಜ್ಯ ಸರಕಾರಕ್ಕೆ ಬಹುಮತ ಇಲ್ಲ. ಹೀಗಾಗಿ ವ್ಯರ್ಥವಾಗಿ ಸಮಯ ಕಳೆಯದೆ ರಾಜ್ಯದ 6.5ಕೋಟಿ ಜನರಿಗೋಸ್ಕರ ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. ಒಂದು ವೇಳೆ ರಾಜೀನಾಮೆ ಕೊಡದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್‌ ನರಿಬೋಳ ಎಚ್ಚರಿಕೆ ನೀಡಿದರು.

ಮಾಜಿ ಶಾಸಕ ವಾಲ್ಮೀಕಿ ನಾಯಕ, ಸುಭಾಷ್‌ ಬಿರಾದಾರ, ಸಂಗಮೇಶ್‌ ನಾಗನಹಳ್ಳಿ, ಸಂಜಯ್‌ ಮಿಸ್ಕಿನ್‌, ಶಿವಯೋಗಿ ನಾಗನಹಳ್ಳಿ, ರಾಜೇಂದ್ರ ಕರೆಕಲ್‌, ರಾಣೋಜಿ ದೊಡ್ಮನಿ, ಪ್ರಭು ಹಾದಿಮನಿ, ಈರಣ್ಣ ಹೊನ್ನಳ್ಳಿ, ಚಂದ್ರಕಾಂತ ಕೆಸರಟ್ಟಿ, ರಾಜು ನರುಣಿ, ಅಶೋಕ,ಮಹಾದೇವ ಬೆಳಮಗಿ, ಸಂಗಮೇಶ್ವರ ರಾಜೋಳಿ, ಶ್ವೇತಾ ಸಿಂಗ್‌, ವಿಜಯಲಕ್ಷ್ಮಿಗೊಬ್ಬುರ್‌, ಅರವಿಂದ ನವುಲೆ, ಸಾಹೇಬ್‌ ಗೌಡ ಪಾಟೀಲ್‌, ಮಲ್ಲು, ಸಂತೋಷ್‌ ಹರಸುರ್‌, ಸಂತೋಷ್‌ ಹಾದಿಮನಿ,ಎಸ್‌.ಜಿ.ಭಾರತಿ, ಅನೀಲ್‌ ಜಾಧವ್‌, ಸಂಗಣ್ಣ ಈಜೇರಿ, ರಾಕೇಶ್‌ ವಾಡೇಕರ್‌,ವೀರಬಸಯ್ಯ ಚಿಕ್ಕಮಠ, ಶರಣಪ್ಪ ಹದನೂರು, ರಾಜುಗೌಡ ನಾಗನಹಳ್ಳಿ ಹಾಗೂ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ