ಆ್ಯಪ್ನಗರ

ತಾಕತ್‌ ಇದ್ದರೆ ಚಿಂಚೋಳಿ ಬೈ ಎಲೆಕ್ಷನ್‌ಗೆ ಬನ್ನಿ: ಪ್ರಿಯಾಂಕ್‌ಗೆ ಸವಾಲ್‌

ನಾನು ಮಾರಾಟವಾಗಿರುವೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಪದೇ ಪದೇ ಆರೋಪಿಸುತ್ತಿದ್ದಾರೆ. ಒಂದು ವೇಳೆ ಹೀಗೆ ಮುಂದುವರಿದರೆ ಕಾನೂನಿನ ಮೂಲಕ ಉತ್ತರ ಕೊಡಬೇಕಾಗುತ್ತದೆ. ಇನ್ನೊಮ್ಮೆ ಈ ಶಬ್ದ ಪ್ರಯೋಗಿಸಿದರೆ ಹುಷಾರ್‌ ಎಂದು ಶಾಸಕ ಡಾ. ಉಮೇಶ್‌ ಜಾಧವ್‌ ತಿರುಗೇಟು ನೀಡಿದ್ದಾರೆ.

Vijaya Karnataka 14 Mar 2019, 4:41 pm
ಕಲಬುರಗಿ:ನಾನು ಮಾರಾಟವಾಗಿರುವೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಪದೇ ಪದೇ ಆರೋಪಿಸುತ್ತಿದ್ದಾರೆ. ಒಂದು ವೇಳೆ ಹೀಗೆ ಮುಂದುವರಿದರೆ ಕಾನೂನಿನ ಮೂಲಕ ಉತ್ತರ ಕೊಡಬೇಕಾಗುತ್ತದೆ. ಇನ್ನೊಮ್ಮೆ ಈ ಶಬ್ದ ಪ್ರಯೋಗಿಸಿದರೆ ಹುಷಾರ್‌ ಎಂದು ಶಾಸಕ ಡಾ. ಉಮೇಶ್‌ ಜಾಧವ್‌ ತಿರುಗೇಟು ನೀಡಿದ್ದಾರೆ.
ವಿಜಯ ಕರ್ನಾಟಕದೊಂದಿಗೆ ಮಾತನಾಡಿದ ಅವರು, ''ಪ್ರಿಯಾಂಕ್‌ ಅವರು ದತ್ತು ಪುತ್ರನಾಗಿ ಚಿಂಚೋಳಿಗೆ ಬರಲು ಸಿದ್ಧ ಎಂದಿದ್ದಾರೆ. ಆದರೆ ಅವರು ದತ್ತು ಪುತ್ರಾಗಿ ಬರುವ ಬದಲು ರಾಜನಾಗಿ ಬರಲಿ. ತಾಕತ್‌ ಇದ್ದರೆ ಮುಂಬರುವ ಚಿಂಚೋಳಿ ಬೈ ಎಲೆಕ್ಷನ್‌ಗೆ ನಿಲ್ಲಲ್ಲಿ. ನಾನೂ ನಿಲ್ಲುತ್ತೇನೆ ಒಂದು ಕೈ ನೋಡಿಯೇ ಬಿಡೋಣ,'' ಎಂದರು.
Vijaya Karnataka Web come to chincholi bye election challenge to priyank
ತಾಕತ್‌ ಇದ್ದರೆ ಚಿಂಚೋಳಿ ಬೈ ಎಲೆಕ್ಷನ್‌ಗೆ ಬನ್ನಿ: ಪ್ರಿಯಾಂಕ್‌ಗೆ ಸವಾಲ್‌


''ಅಭಿವೃದ್ಧಿ ಕೆಲಸಗಳಿಗೆ ಉದ್ಘಾಟನೆಗೆ ಬರುವಂತೆ ಹಲವು ಬಾರಿ ಪ್ರಿಯಾಂಕ್‌ಗೆ ಆಹ್ವಾನಿಸಿದ್ದೆ. ಆದರೆ ಬಂದಿರಲಿಲ್ಲ. ಈಗ ರಾಜಕೀಯ ಮಾಡಲು ಬಂದಿದ್ದಾರೆ. ಚಿಂಚೋಳಿ ಜನರು ಮುಗ್ಧರು. ಅವರಿಗೆ ಮರಳು ಮಾಡಬೇಡಿ. ಶಾಸಕರು ಮಾರಾಟದ ವಸ್ತು ಅಲ್ಲ. ಜನರು ನನ್ನ ಮೇಲೆ ವಿಶ್ವಾಸ ಇದೆ. ಅದಕ್ಕಾಗಿಯೇ ಪ್ರಿಯಾಂಕ್‌ಗಿಂತಲೂ ಹತ್ತು ಪಟ್ಟು ಮತಗಳ ಲೀಡ್‌ನಿಂದ ಆಯ್ಕೆ ಮಾಡಿದ್ದಾರೆ,'' ಎಂದರು.

''ಪಕ್ಷಕ್ಕಾಗಿ 25 ವರ್ಷ ದುಡಿದಿರುವೆ. ಎನ್‌ಎಸ್‌ಯುಐನಲ್ಲಿ ಕೆಲಸ ಮಾಡಿರುವೆ. ಅದಕ್ಕಾಗಿ ಮಂತ್ರಿ ಸ್ಥಾನ ಕೊಡಲಾಗಿದೆ ಎಂದು ಪ್ರಿಯಾಂಕ್‌ ಹೇಳುತ್ತಾರೆ. ಆದರೆ ಡಾ. ಅಜಯಸಿಂಗ್‌ ಸಹ ದುಡಿದಿದ್ದಾರೆ. ಅವರಿಗೇಕೆ ಮಂತ್ರಿ ಸ್ಥಾನ ಕೊಡಲಿಲ್ಲ,''ಎಂದು ಪ್ರಶ್ನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ