Please enable javascript.N Ravikumar,ಕಲ್ಯಾಣ ಕನಾ೯ಟಕಕ್ಕೆ ಖಗೆ೯ ಕೊಡುಗೆ ಶೂನ್ಯ: ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ - contribution to kalyana karnataka by mallikarjun kharge and priyank kharge is nil says karnataka bjp secretary n ravikumar in kalaburagi - Vijay Karnataka

ಕಲ್ಯಾಣ ಕನಾ೯ಟಕಕ್ಕೆ ಖಗೆ೯ ಕೊಡುಗೆ ಶೂನ್ಯ: ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್

Edited byಚೇತನ್ ಓ.ಆರ್. | Vijaya Karnataka Web 10 Feb 2023, 3:57 pm
Subscribe

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ಕಲ್ಯಾಣ ಕನಾ೯ಟಕಕ್ಕೆ ಅಭಿವೃದ್ಧಿಗೆ ಬಂದ ಹಣವನ್ನು ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪುತ್ರ ಪ್ರಿಯಾಂಕ್ ಖಗೆ೯ ತಿಂದಿದ್ದಾರೆ. ಹಾಗಾಗಿ, ಕಲ್ಯಾಣ ಕನಾ೯ಟಕದ ಭಾಗಕ್ಕೆ ಖಗೆ೯ದ್ವಯರ ಕೊಡುಗೆ ಏನೂ ಇಲ್ಲ ಎಂದರು. ಪ್ರಿಯಾಂಕ್ ಖರ್ಗೆಯವರಂತೂ ಬಾಯಿಗೆ ಬಂದಂತೆ ಮಾತನಾಡುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ಅಪ್ಪ ಖರ್ಗೆಗೆ ಆದ ಗತಿಯೇ ಮಗ ಖರ್ಗೆಗೂ ಆಗುತ್ತೆ ಎಂದರು.

ಹೈಲೈಟ್ಸ್‌:

  • ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್.
  • ಕಲ್ಯಾಣ ಕನಾ೯ಟಕಕ್ಕೆ ಅಭಿವೃದ್ಧಿಗೆ ಬಂದ ಹಣವನ್ನು ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪುತ್ರ ಪ್ರಿಯಾಂಕ್ ಖಗೆ೯ ತಿಂದಿದ್ದಾರೆ ಎಂದು ಆರೋಪ.
  • ಮುಂಬರುವ ಚುನಾವಣೆಯಲ್ಲಿ ಅಪ್ಪ ಖರ್ಗೆಗೆ ಆದ ಗತಿಯೇ ಮಗ ಖರ್ಗೆಗೂ ಆಗುತ್ತೆ ಎಂದು ಭವಿಷ್ಯ.
N Ravikumar
ಕಲಬುರಗಿ: ಕಲ್ಯಾಣ ಕರ್ನಾಟಕಕ್ಕೆ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರ ಕೊಡುಗೆ ಶೂನ್ಯ ಎಂದು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಹೇಳಿದ್ದಾರೆ. ಕಲ್ಯಾಣ ಕನಾ೯ಟಕಕ್ಕೆ ಅಭಿವೃದ್ಧಿಗೆ ಬಂದ ಅನುದಾನಗಳನ್ನು ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪುತ್ರ ಪ್ರಿಯಾಂಕ್ ಖಗೆ೯ ನುಂಗಿ ನೀರು ಕುಡಿದಿದ್ದಾರೆ. ಹಾಗಾಗಿ, ಕಲ್ಯಾಣ ಕನಾ೯ಟಕದ ಭಾಗಕ್ಕೆ ಖಗೆ೯ದ್ವಯರ ಕೊಡುಗೆ ಶೂನ್ಯ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಶಾಸಕ ಪ್ರಿಯಾಂಕ್ ಖಗೆ೯ ಲಂಗು ಲಗಾಮವಿಲ್ಲದೆ ಮಾತನಾಡುತ್ತಿದ್ದಾರೆ. ತಂದೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆದ ಶಾಸ್ತಿ, ಕೆಲವೇ ದಿನಗಳಲ್ಲಿ ಪುತ್ರ ಪ್ರಿಯಾಂಕ್ ಖಗೆ೯ಗೂ ಆಗಲಿದೆ. ವಿಧಾನಸಭಾ ಚುನಾವಣೆ ನಂತರ ಮರಿ ಖಗೆ೯ ಬಾಯಿ ಬಂದಾಗಲಿದೆ. ಕಲ್ಯಾಣ ಕನಾ೯ಟಕದ ಭಾಗಕ್ಕೆ ಬಂದಂತಹ ಅನುದಾನವನ್ನು ನುಂಗಿ ನೀರಾಗಿಸಿದ ತಂದೆ-ಮಗ ಹಾಗೂ ಕಾಂಗ್ರೆಸ್ ಪಕ್ಷ, ಈ ಭಾಗದಲ್ಲಿ ಅಭಿವೃದ್ಧಿ ಕಾಯ೯ಗಳಾಗದೇ ಇರುವುದಕ್ಕೆ ಇವರೇ ಮೂಲ ಕಾರಣರು'' ಎಂದರು.

ಮಾರಕಾಸ್ತ್ರ ಹಿಡಿದು ಹೆದರಿಸುತ್ತಿದ್ದ ವ್ಯಕ್ತಿಗೆ ಫೈರಿಂಗ್‌: ಕಲಬುರಗಿ ದೃಶ್ಯ ವೈರಲ್
ಕ್ರಿಕೆಟ್ ಮ್ಯಾಚ್ ಆಡಲು ಮೈದಾನ ಸಿದ್ದಪಡಿಸಿಕೊಳ್ಳಿ ಎಂಬ ಶಾಸಕ ಖಗೆ೯ ಅವರ ಹೇಳಿಕೆಗೆ ತಿರುಗೇಟು ನೀಡಿದ ಅವರು,ಇನ್ನೂ ಮ್ಯಾಚ್ ಆರಂಭವಾಗಿಲ್ಲ.ಚುನಾವಣೆ ನಿಗಧಿಯಾಗಲಿ ಆಗ ಅವರಿಗೆ ಗೊತ್ತಾಗುತ್ತದೆ ಯಾರು ಬೌಲರ್,ಮತ್ತೆ ಯಾವುದು ಪಿಚ್ ಅಂತ ಎಂದ ಆವರು,ಈ ಬಾರಿ ಚಿತಾಪುರ ಕ್ಷೇತ್ರದಲ್ಲಿ 25 ಸಾವಿರ ಮತಗಳ ಅಂತರದಿಂದ ಪ್ರಿಯಾಂಕ್ ಖಗೆ೯ ಅವರನ್ನು ಸೋಲಿಸಲಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಕೊರತೆಯಿದೆ ಎಂಬ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನಾಯಕತ್ವದ ಕೊರತೆ ಕಾಂಗ್ರೆಸ್ ಪಕ್ಷದಲ್ಲಿದೆ ಹೊರತು, ನಮ್ಮ ಬಿಜೆಪಿ ಪಕ್ಷದಲ್ಲಿಲ್ಲ.ಸಿದ್ದರಾಮಯ್ಯ ಮೊದಲು ತಮ್ಮ ಕ್ಷೇತ್ರ ಹುಡುಕಿಕೊಳ್ಳಲಿ.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಹುಡುಕಿಕೊಳ್ಳುವ ಪರಿಸ್ಥಿತಿ ಬರಬಾರದಾಗಿತ್ತು.ಕೋಲಾರದಲ್ಲಿ ಸೋಲುವ ಭಯ ಕಾಡುತ್ತಿದ್ದ ಕೂಡಲೇ, ಇದೀಗ ಸವದತ್ತಿ ಕ್ಷೇತ್ರದ ಕಡೆ ಹೋಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ ಎಂದು ಹೇಳಿದರು.

Siddaramaiah- ಕಲಬುರಗಿಯಲ್ಲಿ ಸಿದ್ದರಾಮಯ್ಯ ಭಾಷಣ ಮಾಡುತ್ತಿರುವಾಗಲೇ ಪವರ್ ಕಟ್: ಬಿಜೆಪಿಯವರೇ ಬೇಕಂತಲೇ ತೆಗಿಸಿದ್ದಾರೆ ಎಂದ ವಿಪಕ್ಷ ನಾಯಕ!
'ಪ್ರಜಾಧ್ವನಿ ಯಾತ್ರೆ,ಪ್ರಜೆಗಳೆ ಇಲ್ಲ'

ರಾಜ್ಯಾದ್ಯಂತ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಪ್ರಜಾಧ್ವನಿ ಯಾತ್ರೆಯನ್ನು ಮಾಡುತ್ತಿದ್ದು,ದುದೈ೯ವದ ಸಂಗತಿಯೆಂದರೆ ಪ್ರಜಾಧ್ವನಿ ಯಾತ್ರೆಯಲ್ಲಿ ಪ್ರಜೆಗಳೆ ಕಂಡುಬರುತ್ತಿಲ್ಲ.ಸಿದ್ದರಾಮಯ್ಯ ಹೋದ ಕಡೆಗಳಲ್ಲಿ ಖಾಲಿ ಡಬ್ಬಾ,ಖಾಲಿ ಖುಚಿ೯ ಹೆಚ್ಚು ಸೌಂಡ್ ಮಾಡುತ್ತಿವೆ ಎಂದರು.

ಕುಮಾರಸ್ವಾಮಿಗೆ ಟಾಂಗ್

"ಕುಮಾರಸ್ವಾಮಿ ಬ್ರಾಹ್ಮಣ ಸಮುದಾಯಕ್ಕೆ ಅವಹೇಳನಕಾರಿ ಹೇಳಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಕುಮಾರಸ್ವಾಮಿ ಬ್ರಾಹ್ಮಣ ಸಮುದಾಯಕ್ಕೆ ಅಪಮಾನ ಮಾಡುವುದು ಸರಿಯಲ್ಲ.ಹೀಗಾಗಿ ಕೂಡಲೇ ಬ್ರಾಹ್ಮಣ ಸಮುದಾಯಕ್ಕೆ ಕ್ಷಮೆ ಕೇಳಬೇಕು. ಯಾಕೆ ಬ್ರಾಹ್ಮಣರು ಸಿಎಂ ಆಗಬಾರದಾ ? ಎಂದು ಪ್ರಶ್ನಿಸಿದ ಅವರು, ದೇಶವನ್ನು ಮತ್ತು ರಾಜ್ಯವನ್ನು ಒಡೆದವರು ಯಾರು ? ಇದರ ಬಗ್ಗೆ ಮಾತನಾಡಲು ತಾಕತ್ತು ಮತ್ತು ಧಮ್ ಇದೆಯಾ'' ಎಂದು ಕೇಳಿದರು.
ಚೇತನ್ ಓ.ಆರ್.
ಲೇಖಕರ ಬಗ್ಗೆ
ಚೇತನ್ ಓ.ಆರ್.
ಪ್ರಸ್ತುತ, ವಿಜಯ ಕರ್ನಾಟಕ ವೆಬ್ ನಲ್ಲಿ ಪತ್ರಕರ್ತನಾಗಿ 2022ರಿಂದ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2007ರಲ್ಲಿ ತುಮಕೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ 5ನೇ ರ‍್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಮೈಸೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಜಿಲ್ಲಾ ಸುದ್ದಿಗಳಿಂದ ಹಿಡಿದು ಕ್ರೀಡೆ, ದೇಶ- ವಿದೇಶ, ಸಿನಿಮಾ, ವಿಜ್ಞಾನ- ತಂತ್ರಜ್ಞಾನ ಇತ್ಯಾದಿ ವೈವಿಧ್ಯಯಮ ವಿಷಯಗಳ ಬಗ್ಗೆ ಬರೆಯುವ ಇವರಿಗೆ, ನಾನಾ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಈವರೆಗೆ 16 ವರ್ಷ ಕೆಲಸ ಮಾಡಿದ ಅನುಭವವಿದೆ. ಫೋಟೋಗ್ರಫಿ ಇವರ ಅಚ್ಚುಮೆಚ್ಚಿನ ಹವ್ಯಾಸ. ಸಿನಿಮಾ, ಸಾಕ್ಷ್ಯಚಿತ್ರ, ಸಾಹಿತ್ಯ, ವಿಡಿಯೋ ಸಂಕಲನ, ಪತ್ರಿಕೆ ಪುಟ ವಿನ್ಯಾಸ, ಹಾಡುಗಾರಿಕೆ, ಚಿತ್ರಕಲೆ, ಅನಿಮೇಶನ್, ಸಂಗೀತದಲ್ಲಿಯೂ ಆಸಕ್ತಿಯಿದೆ.... ಇನ್ನಷ್ಟು ಓದಿ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ