ಆ್ಯಪ್ನಗರ

ರಸ್ತೆ ಬರಹದ ಮೂಲಕ ಕೊರೊನಾ ಜಾಗೃತಿ ಮೂಡಿಸಿದ ಕಲಬುರಗಿ ಪೊಲೀಸ್‌!

ಕೊರೊನಾ ವೈರಸ್‌ ಹರಡುವುದನ್ನು ತಡೆಗಟ್ಟಲು ಇಡೀ ದೇಶವನ್ನೇ ಲಾಕ್‌ಡೌನ್‌ ಮಾಡಲಾಗಿದೆ. ಆದರೂ, ಜನರು ಸಾರ್ವಜನಿಕವಾಗಿ ಗುಂಪಿನಲ್ಲಿ ಓಡಾಡುವುದನ್ನು ಬಿಟ್ಟಿಲ್ಲ. ಹೀಗಾಗಿ ಕಲಬುರಗಿಯಲ್ಲಿ ರಸ್ತೆ ಮೇಲೆ ಬರಹ ಬರೆದು ಕೊರೊನಾ ಜಾಗೃತಿ ಮೂಡಿಸಲಾಗುತ್ತಿದೆ.

Vijaya Karnataka Web 30 Mar 2020, 4:01 pm
ಕಲಬುರಗಿ: ಕೊರೊನಾ ವೈರಸ್‌ ಹರಡುವುದನ್ನು ತಡೆಗಟ್ಟಲು ಇಡೀ ದೇಶವನ್ನೇ ಲಾಕ್‌ಡೌನ್‌ ಮಾಡಲಾಗಿದೆ. ಆದರೂ, ಜನರು ಸಾರ್ವಜನಿಕವಾಗಿ ಗುಂಪಿನಲ್ಲಿ ಓಡಾಡುವುದನ್ನು ಬಿಟ್ಟಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ರಸ್ತೆ ಮೇಲೆ ಬರಹ ಬರೆದು ಕೊರೊನಾ ಜಾಗೃತಿ ಮೂಡಿಸಲಾಗುತ್ತಿದೆ.
Vijaya Karnataka Web corona kalaburagi


ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯ ವತಿಯಿಂದ ಮಹಾಗಾಂವ್ ಕ್ರಾಸ್ ನಲ್ಲಿ ಕೊರೊನಾ ಕುರಿತು ಜನರಲ್ಲಿ ಜಾಗೃತಿ ಉಂಟು ಮಾಡಲು ರಸ್ತೆ ಬರಹ ಬರೆದು ಸೋಮವಾರ ಪ್ರಚಾರ ಮಾಡಲಾಯಿತು.

ಕೊರೊನಾ ವೈರಸ್ ಹರಡದಂತೆ ಹಲವಾರು ರೀತಿಯ ಪ್ರಚಾರ ಮಾಡಲಾಗುತ್ತಿದೆ. ಜಿಲ್ಲಾ ಅರೋಗ್ಯ ಇಲಾಖೆ ಈಗಾಗಲೇ ವ್ಯಾಪಕವಾಗಿ ಜಾಗೃತಿ ಮೂಡಿಸುತ್ತಿದೆ. ಈ ನಡುವೆ ನಮ್ಮ ಕಲಬುರಗಿ ಗ್ರಾಮೀಣ ಸರ್ಕಲ್ ಇನ್ಸ್ಪೆಕ್ಟರ್ ರಾಘವೇಂದ್ರ ಭಜಂತ್ರಿ ರಾಜ್ಯ ಹೆದ್ದಾರಿಯಲ್ಲಿ ಬ್ರಹತ್ ಆಕಾರದ ವೈರಸ್ ಚಿತ್ರಬಿಡಿಸಿ " ಬೀದಿಗೆ ಬಂದರೆ ನೀನು ನಿನ್ನ ಮನೆಗೆ ಬರುವೆ ನಾನು" ಶೀರ್ಷಿಕೆ ಅಡಿ ಜನರನ್ನು ಮನೆಯಲ್ಲಿ ಇರುವಂತೆ ಮನವಿ ಮಾಡಿದ್ದಾರೆ. ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದೇ ಕೊರೊನಾ ಸೋಂಕಿಗೆ ಸೂಕ್ತ ಮದ್ದಾಗಿದೆ.

ಚಿತ್ರದುರ್ಗ: ಕೊರೊನಾ ನಿಯಂತ್ರಿಸಲು ತಕ್ಷಣದಿಂದಲೇ ಎಲ್ಲ ಗಡಿ ಬಂದ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ