ಆ್ಯಪ್ನಗರ

ಕೊರೊನಾ ವಿರುದ್ಧ ಕಲಬುರಗಿ ಜಿಲ್ಲಾಡಳಿತ ಸಮರ, ವೈರಸ್ ಜಾಗೃತಿ ಯಾತ್ರೆ ಪ್ರಾರಂಭ

ಕೊರೊನಾ ವೈರಸ್‌ಗೆ ಭಾರತದಲ್ಲಿ ಮೊದಲ ಬಲಿಯಾಗಿದ್ದು ರಾಜ್ಯದ ಕಲಬುರಗಿ ಜಿಲ್ಲೆಯಲ್ಲಿ. ಕಲಬುರಗಿಯಲ್ಲಿ ಇದುವರೆಗೂ ಮೂರು ಕೊರೊನಾ ಪಾಸಿಟಿವ್‌ ಪ್ರಕರಣಗಳು ಮಾತ್ರ ಕಂಡುಬಂದಿವೆ. ಅದಾದ ನಂತರ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಸೋಂಕಿತರು ಪತ್ತೆಯಾಗಿಲ್ಲ. ಇದಕ್ಕಾಗಿ ಜಿಲ್ಲಾಡಳಿತ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ.

Vijaya Karnataka Web 30 Mar 2020, 1:22 pm
ಕಲಬುರಗಿ: ಕೊರೊನಾ ವೈರಸ್ ಹರಡುವುದನ್ನು ತಡೆಯಲು ಜಿಲ್ಲಾಡಳಿತ ಅನೇಕ ಕ್ರಮ ಕೈಗೊಳ್ಳುತ್ತಿದೆ. ಇದರ ಫಲವಾಗಿ ಕಲಬುರಗಿಯಲ್ಲಿ ಮೊದಲ ಮೂರು ಕೊರೊನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದ್ದು ಬಿಟ್ಟರೆ, ಮತ್ತೆ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಜನರಲ್ಲಿ ಕೊರೊನಾ ಬಗ್ಗೆ ಇನ್ನು ಜಾಗೃತಿ ಮೂಡಿಸಲು ಜಿಲ್ಲಾಡಳಿತ, ಜಿಲ್ಲಾ ರೆಡ್‌ಕ್ರಾಸ್, ವಾರ್ತಾ ಮತ್ತು ಸಾರ್ವಜನಿಕ ಪ್ರಚಾರ ಇಲಾಖೆ ಆಶ್ರಯದಲ್ಲಿ ಜಾಗೃತಿ ಯಾತ್ರೆ ಕೈಗೊಳ್ಳಲಾಗಿದೆ.
Vijaya Karnataka Web KALABURGI


ಜಾಗೃತಿ ಯಾತ್ರೆಗೆ ಜಿಲ್ಲಾಧಿಕಾರಿ ಆವರಣದಲ್ಲಿ ಡಿಸಿ ಬಿ.ಶರತ್ ಚಾಲನೆ ನೀಡಿದರು. ಜಾಗೃತಿ ಯಾತ್ರೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಪ್ರಚಾರ ಇಲಾಖೆಯಿಂದ ನಿಯೋಜನೆ ಮಾಡಿಕೊಂಡಿರುವ ಕೊರೊನಾ ವಾರಿಯರ್ಸ್‌ ಸೋಂಕು ತಡೆಯುವುದು ಬಗ್ಗೆ ಜನರಲ್ಲಿ ಅರಿವು ಮೂಡಿಸಲಿದ್ದಾರೆ.

ಕೊರೊನಾ ವೈರಸ್ ಸೋಂಕಿನ ಕುರಿತು ನಿರ್ಲಕ್ಷ್ಯ ಬೇಡ. ಕನಿಷ್ಠ ತಾಸಿಗೊಮ್ಮೆಯಾದರೂ ಡಿಟರ್ಜೆಂಟ್ ಬಳಸಿ ಕೈತೊಳೆದುಕೊಳ್ಳಬೇಕು. ನೀರು ಲಭ್ಯವಿಲ್ಲದ ಸ್ಥಳದಲ್ಲಿ ಆಗಾಗ ಸ್ಯಾನಿಟೈಸರ್ ಮೂಲಕ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ವಿದೇಶಗಳಿಂದ ಯಾರಾದರೂ ವಾಪಸಾಗಿದ್ದರೆ ಅದನ್ನು ಜಿಲ್ಲಾಡಳಿತದ ಗಮನಕ್ಕೆ ತಕ್ಷಣ ತರಬೇಕು ಎಂದು ಸ್ವಯಂ ಸೇವಕರು ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ.

ಕೊರೊನಾ ಭೀತಿ: ಹೆಲ್ಮೆಟ್‌ ಧರಿಸಿದ ರೈತನಿಗೆ ಪಿಎಸ್‌ಐ ಸೆಲ್ಯೂಟ್‌ !

ವಿದೇಶಗಳಿಂದ ಬಂದ ವ್ಯಕ್ತಿಗಳೊಂದಿಗೆ ನೇರ ಸಂಪರ್ಕ ಹೊಂದಿರುವವರು ತಕ್ಷಣ ಕೋವಿಡ್-19 ತಪಾಸಣೆ ಮಾಡಿಸಿಕೊಳ್ಳಬೇಕು. ಎರಡನೇ ಹಂತದ ಸೋಂಕು ಹೊಂದಿರುವ (ಸೆಕೆಂಡರಿ ಕಾಂಟ್ಯಾಕ್ಟ್) ವ್ಯಕ್ತಿಗಳು ಸ್ಚಯಂ ಕ್ವಾರಂಟೈನ್ ಮಾಡಿಕೊಳ್ಳುವುದು ಹೇಗೆ? ಎಂಬುದನ್ನು ಕೊರೊನಾ ವಾರಿಯರ್ಸ್‌ ಜನರಿಗೆ ಅರ್ಥ ಮಾಡಿಸಲಿದ್ದಾರೆ.

ಕೊರೊನಾದಿಂದ ಕಲಬುರಗಿ ಜನತೆಗೆ ಸ್ವಲ್ಪ ರಿಲೀಫ್‌, ಮೃತ ವೃದ್ಧನ ಕುಟುಂಬದ ಮೂವರಲ್ಲಿ ವೈರಸ್‌ ಇಲ್ಲ

ಕಾರ್ಮಿಕ ಇಲಾಖೆ, ರಾಜ್ಯ ಕಟ್ಟಡ ಮತ್ತು ಇತರರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಸಹಯೋಗದೊಂದಿಗೆ ಆಯೋಜಿಸಿರುವ ಈ ಜಾಗೃತಿ ಅಭಿಯಾನದಲ್ಲಿ ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿ ಶ್ರೀಹರಿ, ರೆಡ್ ಕ್ರಾಸ್ ಸಂಸ್ಥೆಯ ಭಾಗ್ಯಲಕ್ಷ್ಮಿ, ಸ್ವಯಂ ಸೇವಕರಾದ ಸಿದ್ದರಾಜು, ಸಾಗರ್‌ ರಾಠೋಡ್, ಲಕ್ಷ್ಮಿಕಾಂತ್‌, ಅಶ್ವಿನಿ ಮತ್ತು ಆನಂದ ಉಪಸ್ಥಿತರಿದ್ದರು.

ರಾಜ್ಯದಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್‌, ಕಲಬುರಗಿ ವೃದ್ಧನ ಕುಟುಂಬದ ಒಬ್ಬರಿಗೆ ವೈರಸ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ