ನಿಲ್ಲದ ಕೊರೊನಾರ್ಭಟ: ರಾಜ್ಯದಿಂದ ಪಂಢರಪುರಕ್ಕೆ ತೆರಳುವ ಭಕ್ತರಿಗೆ ನಿಷೇಧ
ಸೋಲಾಪುರ್ ಜಿಲ್ಲಾಡಳಿತ ಮುನ್ನೆಚ್ಚರಿಕೆಗಾಗಿ ಸಿಆರ್ಪಿಸಿ ಕಲಂ 144ರನ್ವಯ ನವೆಂಬರ್ 24ರಿಂದ 26 ರವರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಮತ್ತು ಬಾಂಬೆ ಪೊಲೀಸ್ ಕಾಯ್ದೆ 37 ರ ಅನ್ವಯ 5 ಜನಕ್ಕಿಂತ ಹೆಚ್ಚಿಗೆ ಜನ ಸೇರುವುದು ನಿಷೇಧಿಸಿ ಆದೇಶ ಹೊರಡಿಸಿದೆ.
Vijaya Karnataka Web 24 Nov 2020, 1:29 pm
ಹೈಲೈಟ್ಸ್:
- ಸೋಲಾಪುರದಲ್ಲಿ ನಿಷೇಧಾಜ್ಞೆ ಜಾರಿ
- ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ
- ಕಲಬುರಗಿ ಜಿಲ್ಲಾಡಳಿತದಿಂದಲೂ ಕ್ರಮ
ಕಲಬುರಗಿ: ಕೋವಿಡ್ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಸೋಲಾಪುರ್ ಜಿಲ್ಲೆಯ ಸುಕ್ಷೇತ್ರ ಪಂಢರಪುರದಲ್ಲಿ ನಡೆಯಲಿರುವ ಕಾರ್ತಿಕ ವರಿ ಕಾರ್ಯಕ್ರಮಕ್ಕೆ ರಾಜ್ಯದಿಂದ ದಿಂಡಿಸ ಮತ್ತು ಪಲ್ಲಕ್ಕಿಯೊಂದಿಗೆ ಸಾರ್ವಜನಿಕರು (ಭಕ್ತರು) ತೆರಳುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ವಿ.ವಿ.ಜೋತ್ನ್ಸಾ ಆದೇಶಿಸಿದ್ದಾರೆ. ಪ್ರತಿ ವರ್ಷ ಮಹಾರಾಷ್ಟ್ರ ರಾಜ್ಯದ ಸೋಲಾಪುರ್ ಜಿಲ್ಲೆಯ ಸುಕ್ಷೇತ್ರ ಪಂಢರಾಪುರದಲ್ಲಿ ನಡೆಯುವ ಕಾರ್ತಿಕ ವರಿ ಕಾರ್ಯಕ್ರಮಕ್ಕೆ ಪ್ರತಿ ವರ್ಷ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ, ಕರ್ನಾಟಕ ರಾಜ್ಯಗಳಿಂದ ಸುಮಾರು 5 ರಿಂದ 6 ಲಕ್ಷ ಭಕ್ತಾದಿಗಳು ಪ್ರತ್ಯೇಕ ತಂಡಗಳೊಂದಿಗೆ ಸುಕ್ಷೇತ್ರಕ್ಕೆ ಬರುತ್ತಿರುವುದು ವಾಡಿಕೆಯಾಗಿತ್ತು.
ಪಂಢರಪುರ ಯಾತ್ರಿಗಳಿಗೆ ಆಹಾರ ಸಾಮಗ್ರಿ ವಿತರಣೆ
ಸದ್ಯದ ಕೋವಿಡ್ ನಿಯಂತ್ರಣಕ್ಕಾಗಿ ಸೋಲಾಪುರ್ ಜಿಲ್ಲಾಡಳಿತ ಮುನ್ನೆಚ್ಚರಿಕೆಗಾಗಿ ಸಿಆರ್ಪಿಸಿ ಕಲಂ 144ರನ್ವಯ ನವೆಂಬರ್ 24ರಿಂದ 26 ರವರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಮತ್ತು ಬಾಂಬೆ ಪೊಲೀಸ್ ಕಾಯ್ದೆ 37 ರ ಅನ್ವಯ 5 ಜನಕ್ಕಿಂತ ಹೆಚ್ಚಿಗೆ ಜನ ಸೇರುವುದು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಪಂಢರಪುರ ವಿಠ್ಠಲನ ದರ್ಶನ ಪಡೆಯಲು ಹೊರಟಿದ್ದ ಬೆಳಗಾವಿಯ ಐವರು ಭಕ್ತರು ಮಸಣಕ್ಕೆ
ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದಿಂದ ಪಂಢರಪುರಕ್ಕೆ ತೆರಳುವುದು ನಿಷೇಧಿಸಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ವಿಠ್ಠಲನಾಮ ಸ್ಮರಣೆಯಿಂದ ಜನ್ಮ ಸಾರ್ಥಕ
ಪಂಢರಪುರ ಯಾತ್ರಿಗಳಿಗೆ ಆಹಾರ ಸಾಮಗ್ರಿ ವಿತರಣೆ
ಸದ್ಯದ ಕೋವಿಡ್ ನಿಯಂತ್ರಣಕ್ಕಾಗಿ ಸೋಲಾಪುರ್ ಜಿಲ್ಲಾಡಳಿತ ಮುನ್ನೆಚ್ಚರಿಕೆಗಾಗಿ ಸಿಆರ್ಪಿಸಿ ಕಲಂ 144ರನ್ವಯ ನವೆಂಬರ್ 24ರಿಂದ 26 ರವರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಮತ್ತು ಬಾಂಬೆ ಪೊಲೀಸ್ ಕಾಯ್ದೆ 37 ರ ಅನ್ವಯ 5 ಜನಕ್ಕಿಂತ ಹೆಚ್ಚಿಗೆ ಜನ ಸೇರುವುದು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಪಂಢರಪುರ ವಿಠ್ಠಲನ ದರ್ಶನ ಪಡೆಯಲು ಹೊರಟಿದ್ದ ಬೆಳಗಾವಿಯ ಐವರು ಭಕ್ತರು ಮಸಣಕ್ಕೆ
ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದಿಂದ ಪಂಢರಪುರಕ್ಕೆ ತೆರಳುವುದು ನಿಷೇಧಿಸಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ವಿಠ್ಠಲನಾಮ ಸ್ಮರಣೆಯಿಂದ ಜನ್ಮ ಸಾರ್ಥಕ