ಆ್ಯಪ್ನಗರ

ಸಾರಿಗೆ: ತಪ್ಪಿತಸ್ಥರ ವಿರುದ್ಧ ಕ್ರಮ ವಿಕ ಇಂಪ್ಯಾಕ್ಟ್

ಈಶಾನ್ಯ ಸಾರಿಗೆ ಬಸ್ಸುಗಳ ಡೀಸೆಲ್‌ ಟ್ಯಾಂಕ್‌ಗಳಿಗೆ ಮುಚ್ಚಳ ಅಳವಡಿಸದೇ ಕರ್ತವ್ಯಲೋಪ ಎಸಗಿರುವ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿ ತಪ್ಪಿಸ್ಥರ ವಿರುದ್ಧ ಸೂಕ್ತ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಲಬುರಗಿ ವಿಭಾಗ-1ರ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

Vijaya Karnataka 7 Oct 2018, 4:37 pm
ಕಲಬುರಗಿ : ಈಶಾನ್ಯ ಸಾರಿಗೆ ಬಸ್ಸುಗಳ ಡೀಸೆಲ್‌ ಟ್ಯಾಂಕ್‌ಗಳಿಗೆ ಮುಚ್ಚಳ ಅಳವಡಿಸದೇ ಕರ್ತವ್ಯಲೋಪ ಎಸಗಿರುವ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿ ತಪ್ಪಿಸ್ಥರ ವಿರುದ್ಧ ಸೂಕ್ತ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಲಬುರಗಿ ವಿಭಾಗ-1ರ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
Vijaya Karnataka Web diesel tank cap action against guilty
ಸಾರಿಗೆ: ತಪ್ಪಿತಸ್ಥರ ವಿರುದ್ಧ ಕ್ರಮ ವಿಕ ಇಂಪ್ಯಾಕ್ಟ್


ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದಿ. 6ರಂದು ವಿಜಯ ಕರ್ನಾಟಕದಲ್ಲಿ ''ಬಸ್ಸುಗಳ ಡೀಸೆಲ್‌ ಟ್ಯಾಂಕಗಳಿಗೆ ಮಚ್ಚಳವೇ ಇಲ್ಲ'' ಎನ್ನುವ ಶೀರ್ಷಿಕೆಯಲ್ಲಿ ಪ್ರಕಟವಾದ ಸುದ್ದಿಗೆ ಸ್ಪಷ್ಟೀಕರಿಸಿರುವ ಅವರು, ವಿಭಾಗದ ವ್ಯಾಪ್ತಿಯಲ್ಲಿ ಬರುವ ಕಲಬುರಗಿ ಘಟಕ-4ರಲ್ಲಿ 118 ವಾಹನಗಳಿದ್ದು, ಈ ಘಟಕದಲ್ಲಿ ಡೀಸೆಲ್‌ ಬಂಕ್‌ ಪ್ರಾರಂಭವಾಗಿಲ್ಲದರಿಂದ ಕಲಬುರಗಿ ಘಟಕ-2 ಮತ್ತು ಘಟಕ-3ರಲ್ಲಿ ಘಟಕ-4ರ ವಾಹನಗಳಿಗೆ ಡೀಸೆಲ್‌ ತುಂಬಿಸಲಾಗುತ್ತಿದೆ. ಸಾಮಾನ್ಯವಾಗಿ ಇಂಧನ ಟ್ಯಾಂಕ್‌ ಕ್ಯಾಪ್‌ ಹಾಳಾಗುವುದಿಲ್ಲ. ಈ ಕುರಿತು 118 ಬಸ್ಸುಗಳನ್ನು ತಪಾಸಣೆಗೆ ಒಳಪಡಿಸಿದಾಗ ಕೇವಲ 2-3 ಬಸ್ಸುಗಳಿಗೆ ಮಾತ್ರ ಡಿಸೆಲ್‌ ಟ್ಯಾಂಕ್‌ ಕ್ಯಾಪ್‌ ಇಲ್ಲದಿರುವುದು ಕಂಡುಬಂದಿದ್ದು, ಈಗ ಸದರಿ ವಾಹನಗಳಿಗೆ ಡೀಸೆಲ್‌ ಟ್ಯಾಂಕ್‌ ಕ್ಯಾಪ್‌ ಅಳವಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಚಿವರಿಂದ ಕ್ರಮದ ಭರವಸೆ : ಈಶಾನ್ಯ ಸಾರಿಗೆ ಸಂಸ್ಥೆಯ ಹಲವು ಬಸ್ಸುಗಳ ಡೀಸೆಲ್‌ ಟ್ಯಾಂಕ್‌ಗಳಿಗೆ ಮುಚ್ಚಳವೇ ಅಳವಡಿಸದೇ ನೀರಿನ್‌ ಬಾಟಲ್‌ಗಳನ್ನು ಮುಚ್ಚಳವಾಗಿ ಬಳಕೆ ಮಾಡುತ್ತಿರುವುದಕ್ಕೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಕೂಡಲೇ ಈ ನಿಟ್ಟಿನಲ್ಲಿ ತನಿಖೆ ಮಾಡಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅಧಿಕಾರಿಗಳು ಹಾಗೂ ಡಿಪೋ ವ್ಯವಸ್ಥಾಪಕರ ವಿರುದ್ಧ ತನಿಖೆಗೆ ಆದೇಶವನ್ನು ನೀಡಿದ್ದಾರೆ. ಡೀಸೆಲ್‌ ಟ್ಯಾಂಕ್‌ಗಳಿಗೆ ನೀರಿನ ಬಾಟಲಿ ಮುಚ್ಚಳ ಮಾಡುವುದನ್ನು ಕೂಡಲೇ ನಿಲ್ಲಿಸುವಂತೆ ಹಾಗೂ ಮುಚ್ಚಳವನ್ನು ಅಳವಡಿಸುವಂತೆ ಸೂಚನೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ