ಆ್ಯಪ್ನಗರ

ವೈದ್ಯರ ನಿರ್ಲಕ್ಷ್ಯದಿಂದ ವಿಕಲಚೇತನ ಮಗು ಜನನ: ತಾಯಿ ಆರೋಪ

ವೈದ್ಯರ ನಿರ್ಲಕ್ಷ ದಿಂದಾಗಿ ತಮಗೆ ವಿಕಲಚೇತನ ಮಗು ಜನಿಸಿದೆ ಎಂದು ಚಿಂಚೋಳಿಯ ಧರ್ಮಾಪೂರ ತಾಂಡಾದ ಪಾರ್ವತಿ ಪ್ರಕಾಶ ಆರೋಪಿಸಿದ್ದಾರೆ.

Vijaya Karnataka 20 Mar 2018, 4:43 pm
ಕಲಬುರಗಿ: ವೈದ್ಯರ ನಿರ್ಲಕ್ಷ ದಿಂದಾಗಿ ತಮಗೆ ವಿಕಲಚೇತನ ಮಗು ಜನಿಸಿದೆ ಎಂದು ಚಿಂಚೋಳಿಯ ಧರ್ಮಾಪೂರ ತಾಂಡಾದ ಪಾರ್ವತಿ ಪ್ರಕಾಶ ಆರೋಪಿಸಿದ್ದಾರೆ.
Vijaya Karnataka Web disabled child born from doctors negligence mother accused
ವೈದ್ಯರ ನಿರ್ಲಕ್ಷ್ಯದಿಂದ ವಿಕಲಚೇತನ ಮಗು ಜನನ: ತಾಯಿ ಆರೋಪ


ಸೋಮವಾರ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ತಿಂಗಳ ಇಲ್ಲಿನ ಖಾಸಗಿ ಹೆರಿಗೆ ಆಸ್ಪತ್ರೆಯಲ್ಲಿ ವೈದ್ಯಕೀಯ ಉಪಚಾರಗಳನ್ನು ಮಾಡಿಸಿಕೊಳ್ಳುತ್ತಿದ್ದೆ. ಆಗೆಲ್ಲ ಮಗುವಿನ ಬೆಳವಣಿಗೆ ಸರಿಯಾಗಿ ಆಗುತ್ತಿದೆ ಎಂದು ವೈದ್ಯರು ಹೇಳುತ್ತಿದ್ದರು. ಆ ವಿಶ್ವಾಸದ ಮೇಲೆ ನಾವು ತಪಾಸಣೆ ಮಾಡಿಕೊಂಡಿದ್ದೇವು. ಸ್ಕ್ಯಾ‌ನಿಂಗ್‌ ವರದಿ ಕೂಡಾ ಸರಿಯಾಗಿ ಇದೆ ಎಂದು ಹೇಳಿದ್ದರು. ಆದರೆ ಹೇರಿಗೆ ಯಾದ ನಂತರ ತನ್ನ ಶಿಶುವಿಗೆ ಎರಡು ಕೈಗಳೇ ಇಲ್ಲ. ಇದು ಅಲ್ಲಿನ ವೈದ್ಯರು ಮತ್ತು ಸಿಬ್ಬಂದಿ ಮಾಡಿದ ಮೋಸವಾಗಿದೆ ಎಂದು ಕಣ್ಣೀರಿಟ್ಟರು.

ತಮ್ಮದು ಬಡತನದ ಕುಟುಂಬ. ಕೂಲಿಮಾಡಿ ಬದುಕುತ್ತೇವೆ. ಈಗ ಇಂತಹ ಶಿಶು ಜನಿಸಿದೆ. ಇದರ ಲಾಲನೆ ಪೋಷಣೆ ಮಾಡುವುದು ಹೇಗೆ? ಈ ಬಗ್ಗೆ ವೈದ್ಯರನ್ನು ವಿಚಾರಿಸಿದರೆ, ಸರಿಯಾಗಿ ಸ್ಪಂದಿಸುತ್ತಿಲ್ಲ. ಕಾರಣ ಈ ಮಗು ಅವರಿಗೆ ನೀಡುತ್ತೇನೆ. ಬದಲಿಗೆ ನಮಗೆ ಯಾವುದೇ ರೀತಿಯ ಪರಿಹಾರವೂ ಬೇಡ. ಈ ರಿತಿಯಾಗಿ ತಪ್ಪು ಮಾಡಿದ ಅವರ ಮೇಲೆ ಕ್ರಮ ಕೈಗೊಳ್ಳಲು ದೂರು ನೀಡುವುದಾಗಿ ಪಾರ್ವತಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿದ್ದ ಶ್ವೇತಾ ಸಿಂಗ್‌ ಮಾತನಾಡಿ, ಈ ದೊಡ್ಡತಪ್ಪು ನಡೆದಿರುವುದು ವೈದ್ಯರು ಮತ್ತು ಸ್ಕ್ಯಾ‌ನಿಂಗ್‌ ಮಾಡಿದವರಿಂದ ತಪ್ಪಾಗಿದೆ. ಬಗ್ಗೆ ಅವರನ್ನು ವಿಚಾರಿಸಿದಾಗ ಒಬ್ಬರಮೇಲೊಬ್ಬರು ಹಾಕಿ ಜಾರಿಕೊಳ್ಳುತ್ತಿದ್ದಾರೆ. ಇದು ಶಿಶುಗಳ ಜೀವಗಳ ಜೊತೆ ಮತ್ತು ಬಡವರ ಜೊತೆ ಆಡುತ್ತಿರುವ ಚೆಲ್ಲಾಟವಾಗಿದೆ ಎಂದು ಆರೋಪಿಸಿದರು. ಸಂಬಂಧಪಟ್ಟವರು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಶಿಶುವಿನ ಬೆಳವಣಿಗೆ ಕುರಿತು ಸರಿಯಾಗಿ ಮಾಹಿತಿ ನೀಡದೆ ತಪ್ಪು ಮಾಡಿರುವ ಸ್ಕ್ಯಾ‌ನಿಂಗ್‌ ಸೆಂಟರ್‌ನ್ನು ಕೂಡಲೇ ಮುಚ್ಚಿ ಪರವಾನಗಿ ರದ್ದು ಮಾಡಬೇಕು ಎಂದು ಹೋರಾಟಗಾರ ಎಂ.ಎಸ್‌.ಪಾಟೀಲ ಆಗ್ರಹಿಸಿದರು. ಆರೋಗ್ಯ ಸಮಸ್ಯೆ ಕುರಿತಂತೆ ಖಚಿತ ಮಾಹಿತಿಗಾಗಿ ಸ್ಕ್ಯಾ‌ನಿಂಗ್‌ ಮಾಡಲಾಗುತ್ತದೆ. ಇದೆ ರೀತಿ ಈ ತಾಯಿಗೂ ಸ್ಕ್ಯಾ‌ನಿಂಗ್‌ ಮಾಡಿದಾಗ ಶಿಶುವಿನ ಕೈಗಳ ಬೆಳವಣಿಗೆ ಆಗಿಲ್ಲ ಎಂಬ ಬಗ್ಗೆ ತಿಳಿದುಕೊಂಡು ಅವರಿಗೆ ಹೇಳಬೇಕಾಗಿತ್ತು. ಆದರೆ ಎಲ್ಲವೂ ಸರಿ ಇದೆ ಎಂದು ಹೇಳುವ ಮೂಲಕ ನ್ಯಾಯ ಮಾಡಲಾಗಿದೆ. ಇಂತಹ ವೈದ್ಯರನ್ನು ಹೇಗೆ ನಂಬಬೇಕು?. ಕಾರಣ ಆ ಕುಟುಂಬಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕು. ಮತ್ತು ಆ ಆಸ್ಪತ್ರೆ ಮತ್ತು ಸಂಬಂದ ಪಟ್ಟವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಷ್ರಲ್ಲಿಯೇ ಈ ಕುರಿತು ಹೋರಾಟ ನಡೆಸಲಾಗುವುದು ಎಂದು ಅವರು ಹೇಳಿದರು.

ಪಾರ್ವತಿ ಕುಟುಂಬ ವರ್ಗದ ಅನೇಕರು ಸುದ್ದಿಗೋಷ್ಠಿಯಲ್ಲಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ