ಆ್ಯಪ್ನಗರ

ಸ್ಕೌಟ್ಸ್‌ನಿಂದ ಮಕ್ಕಳು ಸಜ್ಜನ: ನಿರಂಜನ್‌

ಸ್ಕೌಟ್ಸ್‌ ಮತ್ತು ಗೈಡ್ಸ್‌, ಎನ್‌ಎಸ್‌ಎಸ್‌ ಹಾಗೂ ಎನ್‌ಸಿಸಿಗಳಿಗೆ ಮಕ್ಕಳನ್ನು ತೊಡಗಿಸುವುದರಿಂದ ನಾಳೆ ಉತ್ತಮ ಮತ್ತು ಸಜ್ಜನ ಪ್ರಜೆಗಳು ಭಾರತಕ್ಕೆ ಸಿಗುತ್ತಾರೆ. ಈ ಕೆಲಸವನ್ನು ಎಲ್ಲ ಪಾಲಕರು ಮಾಡಬೇಕು ಎಂದು ಗುವಿವಿ ಕುಲಪತಿ ಪ್ರೊ. ಎಸ್‌.ಆರ್‌.ನಿರಂಜನ್‌ ಹೇಳಿದರು.

Vijaya Karnataka 19 Aug 2018, 5:11 pm
ಕಲಬುರಗಿ : ಸ್ಕೌಟ್ಸ್‌ ಮತ್ತು ಗೈಡ್ಸ್‌, ಎನ್‌ಎಸ್‌ಎಸ್‌ ಹಾಗೂ ಎನ್‌ಸಿಸಿಗಳಿಗೆ ಮಕ್ಕಳನ್ನು ತೊಡಗಿಸುವುದರಿಂದ ನಾಳೆ ಉತ್ತಮ ಮತ್ತು ಸಜ್ಜನ ಪ್ರಜೆಗಳು ಭಾರತಕ್ಕೆ ಸಿಗುತ್ತಾರೆ. ಈ ಕೆಲಸವನ್ನು ಎಲ್ಲ ಪಾಲಕರು ಮಾಡಬೇಕು ಎಂದು ಗುವಿವಿ ಕುಲಪತಿ ಪ್ರೊ. ಎಸ್‌.ಆರ್‌.ನಿರಂಜನ್‌ ಹೇಳಿದರು.
Vijaya Karnataka Web disaster management training camp at gulbarga vv
ಸ್ಕೌಟ್ಸ್‌ನಿಂದ ಮಕ್ಕಳು ಸಜ್ಜನ: ನಿರಂಜನ್‌


ಗುವಿವಿಯ ಮಹಾತ್ಮಗಾಂಧಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ಜಿಲ್ಲಾ ಘಟಕ ಮತ್ತು ಗುವಿವಿ ಸಹಯೋಗದಲ್ಲಿ ವಿಭಾಗ ಮಟ್ಟದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮಕ್ಕಳಿಗೆ ವಿಪತ್ತು ನಿರ್ವಹಣೆ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಇಂತಹ ಸೇವೆಗಳಲ್ಲಿ ಮಕ್ಕಳು ತೊಡಗುವುದರಿಂದ ದುಶ್ಚಟಗಳಿಂದ ದೂರ ಇರುತ್ತಾರೆ. ಇದರಿಂದ ಪ್ರೇರಣೆಗೊಂಡು ಉತ್ತಮ ಹಾಗೂ ಸಜ್ಜನರಾಗುತ್ತಾರೆ. ಇದು ಪಠ್ಯದ ಜೊತೆಯಲ್ಲಿ ಮಾಡುವುದರಿಂದ ಶಿಸ್ತಿನಿಂದ ಜೀವನ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಮಕ್ಕಳು ಹೆಚ್ಚುಗಾರಿಕೆ ಪಡೆಯಲಿದ್ದಾರೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಕೌಟ್ಸ ಮತ್ತು ಗೈಡ್ಸ್‌ ನ ಜಿಲ್ಲಾ ಆಯುಕ್ತ ಎಸ್‌.ಪಿ.ಸುಳ್ಳದ್‌, ಈ ಶಿಬಿರದಲ್ಲಿ 6 ಜಿಲ್ಲೆಗಳಿಂದ 150 ರೇಂಜರ್‌, ರೋವರ್ಸ್‌, ಸ್ಕೌಟರ್ಸ್‌ ಬಂದಿದ್ದಾರೆ. 3 ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ಆರೋಗ್ಯ, ರಕ್ಷಣೆ, ಇತರೆ ಸೇವೆಗಳ ಕುರಿತು ಮಾಹಿತಿ ನೀಡಲು ಆಯಾ ಕ್ಷೇತ್ರದ ತಿಳಿವಳಿಕೆ ಇರುವವರು ಆಗಮಿಸುತ್ತಾರೆ. ಇದರ ಪ್ರಯೋಜವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.

ಗುವಿವಿ ದೈಹಿಕ ವಿಭಾಗದ ಮುಖ್ಯಸ್ಥ ಎಂ.ಎಸ್‌.ಪಾಸೋಡಿ ಸ್ವಾಗತಿಸಿದರು. ಸಂಶೋಧನಾ ವಿದ್ಯಾರ್ಥಿ ಮಿಲಿಂದ ಕುಮಾರ ನಿರೂಪಣೆ ಮಾಡಿದರು. ಸ್ಕೌಟ್ಸ ಮತ್ತು ಗೈಡ್ಸ್‌ನ ಜಿಲ್ಲಾ ಕಾರ್ಯದರ್ಶಿ ಚನ್ನವೀರಯ್ಯ ಸ್ವಾಮಿ ವಂದಿಸಿದರು.

ಗುವಿವಿ ಕುಲಸಚಿವ ಪ್ರೊ. ಸಿ. ಸೋಮಶೇಖರ, ವಿ.ಟಿ.ಕಾಂಬಳೆ, ಎನ್‌.ಜಿ.ಕಜ್ಜಾರ್‌, ಸುಜಾತಾ ಮುಲ್ಲಾ, ವೀರಭದ್ರಯ್ಯ ವೈ ಇತರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ