ಆ್ಯಪ್ನಗರ

ವರದಕ್ಷಿಣೆ ಕಿರುಕುಳ: ಕೊಲೆ ಆರೋಪ

ನಗರದ ಹೀರಾಪೂರದ ಬಳಿಯ ಮಿಜಬಾನಗರದ ಹಾಜರಾ ಇರಾಂ ಎನ್ನುವ ಮಹಿಳೆ ಬುಧವಾರ ರಾತ್ರಿ ಗಂಡನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ, ಇದು ಆತ್ಮಹತ್ಯೆಯಲ್ಲ ವರದಕ್ಷಿಣೆಗಾಗಿ ಪೀಡಿಸಿ ಕೊಲೆ ಮಾಡಲಾಗಿದೆ ಎಂದು ಇರಾಂ ಪಾಲಕರು ದೂರಿದ್ದಾರೆ.

Vijaya Karnataka 12 Oct 2018, 4:28 pm
ಕಲಬುರಗಿ : ನಗರದ ಹೀರಾಪೂರದ ಬಳಿಯ ಮಿಜಬಾನಗರದ ಹಾಜರಾ ಇರಾಂ ಎನ್ನುವ ಮಹಿಳೆ ಬುಧವಾರ ರಾತ್ರಿ ಗಂಡನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ, ಇದು ಆತ್ಮಹತ್ಯೆಯಲ್ಲ ವರದಕ್ಷಿಣೆಗಾಗಿ ಪೀಡಿಸಿ ಕೊಲೆ ಮಾಡಲಾಗಿದೆ ಎಂದು ಇರಾಂ ಪಾಲಕರು ದೂರಿದ್ದಾರೆ.
Vijaya Karnataka Web dowry harassment murder accused
ವರದಕ್ಷಿಣೆ ಕಿರುಕುಳ: ಕೊಲೆ ಆರೋಪ


ಮೊಮಿನಪುರ ಬಡಾವಣೆಯ ಖಾರಿಬೌಡಿಯ ಮಹಮ್ಮದ ಅಜಗರ್‌ ಅಹಮದ್‌ ಬಸೀರ್‌ ಅಹಮದ್‌ ಅದೋನಿ ಅವರ ಮಗಳು ಹಾಜರಾ ಇರಾಂ ಅವಳನ್ನು ಮಿಜಬಾನಗರದ ಸೈಯದ ಆಸೀಫ್‌ನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಒಂದು ಗಂಡು ಮಗು ಕೂಡ ಇದ್ದು, ಈಚೆಗೆ ತವರು ಮನೆಯಿಂದ ಹಣ ಮತ್ತು ಗಂಡನಿಗೆ ಮೆಡಿಕಲ್‌ ಇಟ್ಟುಕೊಳ್ಳಲು ಮಳಿಗೆ ಕೊಡಿಸುವಂತೆ ಪೀಡಿಸಿ ಹಿಂಸೆ ನೀಡಿದ್ದರು. ಆದರೆ, ನಾವು ಈ ಕುರಿತು ಮಾತುಕತೆ ಮಾಡುವ ಹಂತದಲ್ಲಿರುವಾಗಲೇ ಗಂಡ ಆಸೀಫ್‌, ಅತ್ತೆ ಖಾಜಬೀ ಬೇಗಂ, ಮೈದುನ ಸೈಯದ ಕಲೀಮ ಅಹಮದ್‌, ಮಾವ ಸೈಯದ್‌ ನಿಸಾರ ಅಹಮದ್‌, ನಾದನಿ ಕನೀಜ್‌ ಬೇಗಂ ಸೇರಿಕೊಂಡು ಕೊಲೆ ಮಾಡಿ ಕೋಣೆಯೊಂದರ ಪ್ಯಾನಿಗೆ ನೇಣು ಹಾಕಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ