ಆ್ಯಪ್ನಗರ

ಮಕ್ಕಳೊಂದಿಗೆ ಸಿಆರ್‌ಸಿ ಮುಕ್ತ ಮಾತುಕತೆ

ನಗರದ ಚೇತನ ಯೂಥ್‌ಫೋರಂ ಪ್ರೌಢಲೆಯಲ್ಲಿ 'ಒಳ್ಳೆಯ ಅಧ್ಯಯನ ವಿಧಾನ ಮತ್ತು ಉತ್ತಮ ನೆನಪಿನ ಶಕ್ತಿ' ಕುರಿತು ಖ್ಯಾತ ಮನೋವೈದ್ಯ ಡಾ.ಸಿ.ಆರ್‌.ಚಂದ್ರಶೇಖರ ಅವರು ಮಕ್ಕಳೊಂದಿಗೆ ಮುಕ್ತ ಮಾತುಕತೆ ನಡೆಸಿದರು.

Vijaya Karnataka 31 Jul 2019, 8:34 pm
ಕಲಬುರಗಿ:ನಗರದ ಚೇತನ ಯೂಥ್‌ಫೋರಂ ಪ್ರೌಢಲೆಯಲ್ಲಿ 'ಒಳ್ಳೆಯ ಅಧ್ಯಯನ ವಿಧಾನ ಮತ್ತು ಉತ್ತಮ ನೆನಪಿನ ಶಕ್ತಿ' ಕುರಿತು ಖ್ಯಾತ ಮನೋವೈದ್ಯ ಡಾ.ಸಿ.ಆರ್‌.ಚಂದ್ರಶೇಖರ ಅವರು ಮಕ್ಕಳೊಂದಿಗೆ ಮುಕ್ತ ಮಾತುಕತೆ ನಡೆಸಿದರು.
Vijaya Karnataka Web dr crc talks with children
ಮಕ್ಕಳೊಂದಿಗೆ ಸಿಆರ್‌ಸಿ ಮುಕ್ತ ಮಾತುಕತೆ


ಈ ವೇಳೆ ಮಾತನಾಡಿದ ಡಾ.ಸಿಆರ್‌ಸಿ, ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಯಾವುದೇ ಔಷಧ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಈ ಕುರಿತು ಕೇವಲ ಊಹಾಪೋಹಗಳಿವೆ. ಹೀಗಾಗಿ, ಏಕಾಗ್ರತೆಯಿಂದ ಅಧ್ಯಯನ ನಡೆಸುವುದರಿಂದ ಮಾತ್ರ ಉತ್ತಮ ನೆನಪಿನ ಶಕ್ತಿ ನಮ್ಮದಾಗಿಸಿಕೊಳ್ಳಬಹುದು ಎಂಬುದನ್ನು ವಿದ್ಯಾರ್ಥಿಗಳು ಗಮನದಲ್ಲಿ ಇಟ್ಟುಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಇದೇವೇಳೆ, ಏಕಾಗ್ರತೆಯನ್ನು ಸಾಧಿಸುವುದು ಹೇಗೆ? ಎಂಬ ವಿದ್ಯಾರ್ಥಿಗಳ ಪ್ರಶ್ನೆಗೆ ಮುಗುಳ್ನಗುತ್ತಲೇ ಪ್ರತಿಕ್ರಿಯಿಸಿದ ಅವರು, ಆದಷ್ಟೂ ತರಗತಿಯಲ್ಲಿ ತೆಗೆದುಕೊಳ್ಳುವ ಪಾಠಗಳನ್ನು ಅದೇ ದಿನ ಮನೆಯಲ್ಲಿ ಸರಿಯಾಗಿ ಪುನರಾವರ್ತನೆ ಮಾಡಿಕೊಳ್ಳಬೇಕು. ಒಂದು ಪಾಠವನ್ನು ಆದಷ್ಟೂ ಎರಡು ಮೂರು ಬಾರಿ ಓದಿಕೊಳ್ಳುವುದು ಇನ್ನೂ ಉತ್ತಮ ವಿಧಾನ. ಇದರಿಂದ ನಾವು ಏನು ಓದಿದ್ದೇವೆ ಎಂಬುದು ಹೆಚ್ಚು ದಿನಗಳ ಕಾಲ ನೆನಪಿನಲ್ಲಿ ಉಳಿಯುತ್ತದೆ. ಜೊತೆಗೆ, ಓದಲು ಕುಳಿತಾಗ ಅನಗತ್ಯವಾಗಿ ಮತ್ತೊಬ್ಬರೊಂದಿಗೆ ಮಾತನಾಡುವುದಾಗಲಿ, ಮೊಬೈಲ್‌, ಟಿವಿ ನೋಡುತ್ತಾ ಓದುವುದಾಗಲಿ ಮಾಡುವುದಿಲ್ಲ ಎಂದು ನಮ್ಮೊಳಗೆ ನಾವೇ ಪ್ರತಿಜ್ಞೆ ಮಾಡಬೇಕು. ಇಂತಹ ಮುಕ್ತ ಮನಸ್ಥಿತಿಯಲ್ಲಿ ಓದುವುದರಿಂದ ಏಕಾಗ್ರತೆ ಕೈ ವಶವಾಗುತ್ತದೆ ಎಂದು ಸಲಹೆ ನೀಡಿದರು.

ಸಂಸ್ಥೆಯ ಅಧ್ಯಕ್ಷ ವಿ.ಆರ್‌.ಮಾಲಿಪಾಟೀಲ್‌ ಮಾತನಾಡಿ, ಮುಖ್ಯವಾಗಿ 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಆದಷ್ಟೂ ಓದುವುದು ಬಿಟ್ಟರೆ ಮತ್ತೇನೂ ಕೆಲಸ ತಮಗೆ ಸಂಬಂಧಿಸಿದ್ದಲ್ಲ ಎನ್ನುವಂತಹ ಮನಸ್ಥಿತಿಯಲ್ಲಿ ಓದುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ಉತ್ತಮ ಫಲಿತಾಂಶ ಪಡೆಯುವುದು ಸುಲಭವಾಗುತ್ತದೆ ಎಂದರು.

ಸಂಸ್ಥೆಯ ಕಾರ್ಯದರ್ಶಿ ದಿನೇಶ್‌ ಪಾಟೀಲ್‌, ಎ.ಎಸ್‌.ರಾಮಚಂದ್ರ, ಎಸ್‌.ಎಸ್‌.ಹಿರೇಮಠ, ಅನಸೂಯಾ ಮಠಪತಿ, ಮುಖ್ಯಗುರು ಶಾಂತಾ ಮಠಪತಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ