ಆ್ಯಪ್ನಗರ

ಡಾ.ಶರಣಬಸವಪ್ಪ ಅಪ್ಪ ಜನ್ಮದಿನ ನಾಳೆ

ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಶರಣಬಸವಪ್ಪ ಅಪ್ಪಾ ಅವರ 84ನೇ ಜನ್ಮ ದಿನ ಸಮಾರಂಭ ಡಿ.7 ರಂದು ನಗರದ ಶರಣಬಸವೇಶ್ವರ ಶತಮಾನೋತ್ಸವ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

Vijaya Karnataka 6 Dec 2018, 5:00 am
ಕಲಬುರಗಿ:ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಶರಣಬಸವಪ್ಪ ಅಪ್ಪಾ ಅವರ 84ನೇ ಜನ್ಮ ದಿನ ಸಮಾರಂಭ ಡಿ.7 ರಂದು ನಗರದ ಶರಣಬಸವೇಶ್ವರ ಶತಮಾನೋತ್ಸವ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
Vijaya Karnataka Web dr sharan basavappa appa birthday is tomorrow
ಡಾ.ಶರಣಬಸವಪ್ಪ ಅಪ್ಪ ಜನ್ಮದಿನ ನಾಳೆ


ಸಮಾರಂಭದಲ್ಲಿ ಡಾ.ಶರಣಬಸವಪ್ಪ ಅಪ್ಪಾ ಅವರಿಗೆ ಬೀದರ್‌ನ ಸೈಯ್ಯದ್‌ ಶಾ ಅಶ್ದುಲ್ಲಾ ಹುಸೈನಿ, ಸಜ್ಜಾದ್‌ ನಶೀನ್‌ ದರ್ಗಾ ಖಂಕಾ ಹಜರತ್‌ ಖ್ವಾಜಾ ಅಬುಲ್‌ ಫೈಜ್‌ ಅವರು ಕೊಡಮಾಡುವ ಪ್ರತಿಷ್ಠಿತ '2ನೇ ಖ್ವಾಜಾ ಅಬುಲ್‌ ಫೈಜ್‌' ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಸಮಾರಂಭದಲ್ಲಿ ಡಾ.ಅಪ್ಪಾ ಮತ್ತು ಮಾತೆ ದಾಕ್ಷಾಯಿಣಿ ತಾಯಿಯವರ ವೈವಾಹಿಕ ಜೀವನದ ಬೆಳ್ಳಿ ಮಹೋತ್ಸವ, ದಾಕ್ಷಾಯಿಣಿ ತಾಯಿಯವರ 49ನೇ ಜನ್ಮ ದಿನ ಹಾಗೂ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರ ಪ್ರಥಮ ವರ್ಷದ ಜನ್ಮ ದಿನ ಸಂಭ್ರಮ ನಡೆಯಲಿದೆ.

ಸಮಾರಂಭವನ್ನು ಸುಲಫಲ ಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಚವದಾಪುರಿ ಹಿರೇಮಠದ ರಾಜಶೇಖರ ಸ್ವಾಮೀಜಿಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಹೆಚ್‌ಕೆಇ ಸಂಸ್ಥೆ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ, ಶಾಸಕರಾದ ಎಂ.ವೈ.ಪಾಟೀಲ್‌, ಸುಭಾಷ್‌ ಆರ್‌.ಗುತ್ತೇದಾರ, ಡಾ.ಉಮೇಶ ಜಾಧವ, ದತ್ತಾತ್ರೇಯ ಪಾಟೀಲ್‌ ರೇವೂರ, ಡಾ.ಅಜಯಸಿಂಗ್‌, ಕನೀಜ್‌ ಫಾತಿಮಾ, ಬಸವರಾಜ ಮತ್ತಿಮೂಡ, ರಾಜಕುಮಾರ ಪಾಟೀಲ್‌ ತೆಲ್ಕೂರ, ವಿಧಾನ ಪರಿಷತ್‌ ಸದಸ್ಯರಾದ ಶರಣಪ್ಪ ಮಟ್ಟೂರ, ಚಂದ್ರಶೇಖರ ಪಾಟೀಲ್‌ ಹಾಗೂ ಬಿ.ಜಿ ಪಾಟೀಲ್‌ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಬೀದರ್‌ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕಿ ಡಾ.ಉಮಾ ಬಸವರಾಜ ದೇಶಮುಖ ರಚಿಸಿರುವ ಡಾ.ಶರಣಬಸವಪ್ಪ ಅಪ್ಪ ಅವರ 'ಶಿವ ಜೀವನ 108 ನಾಮಾವಳಿ' ಕೃತಿಯನ್ನು ಬಿಡುಗಡೆಯಾಗಲಿದೆ.

ಡಾ.ನೀಲಾಂಬಿಕಾ ಪೊಲೀಸ್‌ ಪಾಟೀಲ್‌ ಅವರು ಸಂಪಾದಿಸಿದ ದಾಸೋಹ ಮಹಾಮನೆಯ 'ಕಿರಣ' ಕವನ ಸಂಕಲನ, ಮಂಗಳಾ ಕಪರೆ ಅವರ 'ಚಿರಂಜೀವಿ ದೊಡ್ಡಪ್ಪ ಅವರ ಪುಣ್ಯ ಆಗಮನ ಹಾಗೂ ಬಾಲ ಲೀಲೆಗಳು', ಗುರುಸ್ವಾಮಿ ಮತ್ತು ವೀರಮ್ಮ ಗುರುಸ್ವಾಮಿ ಹೊರ ತಂದಿರುವ 'ದೇವಲೋಕದ ಕಂದ ಧರೆಗಿಳಿದು ಬಂದ' ಸಿಡಿ ಹಾಗೂ ಶರಣಬಸವೇಶ್ವರ ವಸತಿ ಪಬ್ಲಿಕ್‌ ಶಾಲೆಯ ಮಹೇಶ ನಿರಂಜನ ಪ್ಯಾಟಿ ರಚನೆಯ 'ಮಹಾದಾಸೋಹಿ ಶರಣಬಸವೇಶ್ವರರು ಹಾಗೂ ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿಗಳ ಜೀವನ ಚರಿತ್ರೆ' ಕೃತಿಗಳು ಬಿಡುಗಡೆಗೊಳ್ಳಲಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ