ಆ್ಯಪ್ನಗರ

ನಗರದಲ್ಲಿ ನಾಟಕೋತ್ಸವ

ವಿಶ್ವರಂಗ ನಾಟಕ ಮತ್ತು ನೃತ್ಯ ಸೇವಾ ಸಂಘ, ರಂಗ ಸಂಗಮ ಕಲಾ ವೇದಿಕೆ, ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಮೈಸೂರು ರಂಗಾಯಣ ಸಂಚಾರಿ ರಂಗ ಘಟಕದ ವತಿಯಿಂದ ನ.30ರಿಂದ ಡಿ.2ರವರೆಗೆ ನಿತ್ಯ ಸಂಜೆ 6.30ಕ್ಕೆ ನಗರದ ಡಾ.ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ಮೂರು ದಿನಗಳ ನಾಟಕೋತ್ಸವ ಜರುಗಲಿದೆ.

Vijaya Karnataka 29 Nov 2019, 5:00 am
ಕಲಬುರಗಿ: ವಿಶ್ವರಂಗ ನಾಟಕ ಮತ್ತು ನೃತ್ಯ ಸೇವಾ ಸಂಘ, ರಂಗ ಸಂಗಮ ಕಲಾ ವೇದಿಕೆ, ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಮೈಸೂರು ರಂಗಾಯಣ ಸಂಚಾರಿ ರಂಗ ಘಟಕದ ವತಿಯಿಂದ ನ.30ರಿಂದ ಡಿ.2ರವರೆಗೆ ನಿತ್ಯ ಸಂಜೆ 6.30ಕ್ಕೆ ನಗರದ ಡಾ.ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ಮೂರು ದಿನಗಳ ನಾಟಕೋತ್ಸವ ಜರುಗಲಿದೆ.
Vijaya Karnataka Web drama festival in the city
ನಗರದಲ್ಲಿ ನಾಟಕೋತ್ಸವ


ನ.30ರಂದು ಸಂಜೆ 6.30ಕ್ಕೆ ಗುಲ್ಬರ್ಗ ವಿಶ್ವವಿದ್ಯಾಲದ ಕುಲಸಚಿವ ಪ್ರೊ.ಸಿ.ಸೋಮಶೇಖರ ಉದ್ಘಾಟಿಸಲಿದ್ದಾರೆ. ಹಿರಿಯ ರಂಗತಜ್ಞ ಪ್ರಭಾಕರ ಸಾತಖೇಡ ಅಧ್ಯಕ್ಷತೆ ವಹಿಸಲಿದ್ದಾರೆ. ರಂಗಾಯಣ ಆಡಳಿತಾಧಿಕಾರಿ ಜಗದೀಶ್ವರಿ ಶಿವಕೇರಿ, ಮೈಸೂರು ರಂಗಾಯಣ ಸಂಚಾರಿ ರಂಗ ಘಟಕದ ಸಂಚಾಲಕ ಪ್ರಕಾಶ ಗರುಡ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ನಂತರ ಎಸ್‌.ರಾಮನಾಥ ರಚನೆಯ ಹಾಗೂ ಚಂದ್ರದಾಸನ ಕೇರಳ ವಿನ್ಯಾಸ ಮತ್ತು ನಿರ್ದೇಶನದಲ್ಲಿ'ಆರ್ಕೇಡಿಯಾದಲ್ಲಿಪಕ್‌' ನಾಟಕ ಪ್ರದರ್ಶನಗೊಳ್ಳಲಿದೆ.

ಡಿ.1ರಂದು ಸಂಜೆ 6.30ಕ್ಕೆ ನಾಟಕ ಪ್ರದರ್ಶನಕ್ಕೂ ಮುನ್ನ ನಡೆಯುವ ಸಮಾರಂಭದಲ್ಲಿವೈದ್ಯ ಡಾ.ಎಸ್‌.ಎಸ್‌.ಗುಬ್ಬಿ ಅಧ್ಯಕ್ಷತೆ ವಹಿಸಲಿದ್ದು, ಡಾ. ಕೆ.ಲಿಂಗಪ್ಪ, ಪ್ರೊ.ಶಾಂತಾ ಭೀಮಸೇನರಾವ್‌, ಪತ್ರಕರ್ತ ಶೇಷಮೂರ್ತಿ ಅವಧಾನಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ನಂತರ ಡಾ.ಗಿರೀಶ ಕಾರ್ನಾಡ ರಚಿಸಿರುವ ಹಾಗೂ ಚಿದಂಬರಾವ್‌ ಜಂಬೆ ನಿರ್ದೇಶನದ 'ಬೆಂದಕಾಳು ಆನ್‌ ಟೋಸ್ಟ್‌' ನಾಟಕ ಪ್ರದರ್ಶನಗೊಳ್ಳಲಿದೆ. ಡಿ.2ರಂದು ಸಂಜೆ 6.30ರ ಸಮಾರಂಭದಲ್ಲಿಹಿರಿಯ ಪತ್ರಕರ್ತ ಪಿ.ಎಂ.ಮಣ್ಣೂರ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀಧರ ಹೆಗಡೆ, ಪ್ರಭಾಕರ ಜೋಶಿ, ಡಾ.ವಿಶಾಲಕ್ಷಿ ಕರಡ್ಡಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ನಂತರ ಶ್ರವಣಕುಮಾರ ಹೆಗ್ಗೋಡು ನಿರ್ದೇರ್‍ಶನದ 'ರೆಕ್ಸ್‌ ಅವರ್ಸ್' ನಾಟಕ ಪ್ರದರ್ಶನಗೊಳ್ಳಲಿದೆ ಎಂದು ರಂಗಸಂಗಮ ಕಲಾ ವೇದಿಕೆ ಕಾರ್ಯದರ್ಶಿ ಡಾ.ಸುಜಾತಾ ಜಂಗಮಶೆಟ್ಟಿ, ವಿಶ್ವರಾಜ ಪಾಟೀಲ್‌ ಹಾಗೂ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಬಿ.ಎಚ್‌.ನಿರಗುಡಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ