ಆ್ಯಪ್ನಗರ

ಸಂಸತ್‌ಗೆ ದೀರ್ಘ ದಂಡ ನಮಸ್ಕಾರ ಹಾಕಿದ ಜಾಧವ್‌

ನೂತನ ಸಂಸದ ಡಾ. ಉಮೇಶ್‌ ಜಾಧವ್‌ ಅವರು ಸಂಸತ್‌ ಭವನದ ಹೆಬ್ಬಾಗಿಲಿಗೆ ಶಿರಸಾಸ್ಟಾಂಗ ನಮಸ್ಕಾರ ಹಾಕಿ ಪ್ರವೇಶ ಮಾಡುವ ಮೂಲಕ ಗಮನ ಸೆಳೆದರು.

Vijaya Karnataka 2 Jun 2019, 9:46 pm
ಕಲಬರಗಿ :ನೂತನ ಸಂಸದ ಡಾ. ಉಮೇಶ್‌ ಜಾಧವ್‌ ಅವರು ಸಂಸತ್‌ ಭವನದ ಹೆಬ್ಬಾಗಿಲಿಗೆ ಶಿರಸಾಸ್ಟಾಂಗ ನಮಸ್ಕಾರ ಹಾಕಿ ಪ್ರವೇಶ ಮಾಡುವ ಮೂಲಕ ಗಮನ ಸೆಳೆದರು.
Vijaya Karnataka Web drgha daa namaskra
ಸಂಸತ್‌ಗೆ ದೀರ್ಘ ದಂಡ ನಮಸ್ಕಾರ ಹಾಕಿದ ಜಾಧವ್‌


ಗುರುವಾರ ಬೆಳಗ್ಗೆ ಸಂಸತ್‌ ಭವನಕ್ಕೆ ಆಗಮಿಸಿದ ಅವರು ಮೆಟ್ಟಿಲುಗಳ ಬಳಿ ಸಾಸ್ಟಾಂಗ ನಮಸ್ಕಾರ ಹಾಕಿದರು. ಕ್ಷೇತ್ರದ ಸುಮಾರು 50ಕ್ಕೂ ಹೆಚ್ಚು ಬೆಂಬಲಿಗರನ್ನು ಸಂಸತ ಭವನ ತೋರಿಸಲು ಕರೆ ತರಲಾಗಿತ್ತು. ಆಗ ಜಾಧವ ಭವನದ ಮುಖ್ಯ ದ್ವಾರದ ಬಳಿ ಸಾಸ್ಟಾಂಗ ಹಾಕಿದರು. ಇದನ್ನು ಕಂಡ ಜನತೆಯಲ್ಲಿ ಧನ್ಯತಾ ಭಾವ ಆವರಿಸಿತು.

ಕಲಬುರಗಿಯಲ್ಲಿ ಚುನಾವಣೆ ಪ್ರಚಾರ ಸಂದರ್ಭದಲ್ಲಿಯೂ ಡಾ. ಉಮೇಶ ಜಾಧವ ಅವರು ಸಾಸ್ಟಾಂಗ ನಮಸ್ಕಾರ ಹಾಕಿ ಗಮನ ಸೆಳೆದಿದ್ದರು. ಪ್ರಧಾನಿ ನರೇಂದ್ರ ಮೋದಿ ಸಹ ಮೊದಲ ಬಾರಿಗೆ ಸಂಸತ್‌ ಪ್ರವೇಶಿಸುವಾಗ ನಮಸ್ಕರಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ