ಕಲಬುರಗಿ: ತಮ್ಮ ಪಠ್ಯದ ಜೊತೆಗೆ ಸಹ ಪಠ್ಯ ಚಟುವಟಿಕೆಗಳ ಸ್ಪರ್ಧಾ ಮನೋಭಾವ ಬೆಳಸಿಕೊಂಡು ಗುಣಾತ್ಮಕ ಶಿಕ್ಷ ಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಡಿಡಿಪಿಐ ಶಾಂತಗೌಡ ಪಾಟೀಲ ಹೇಳಿದರು.
ಇಲ್ಲಿಯ ಸರ್ಕಾರಿ ಪ್ರಾತ್ಯಕ್ಷಿಕ ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ, ಶಿಕ್ಷ ಣ ಇಲಾಖೆ ಹಾಗೂ ರಾಜ್ಯ ಶಿಕ್ಷ ಕರ ಕಲ್ಯಾಣ ನಿಧಿ ಸಂಯುಕ್ತಾಶ್ರಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಸಹ ಶಿಕ್ಷ ಕರಿಗಾಗಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಹಪಠ್ಯಚಟುವಟಿಕೆಗಳ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ಕಳೆದ ಹತ್ತಾರು ವರ್ಷಗಳಿಂದ ಶಿಕ್ಷ ಕರಿಗೆ ಹಲವಾರು ರಚನಾತ್ಮಕ ಕಾರ್ಯಕ್ರಮಗಳು ಆಯೋಜಿಸುತ್ತಾ ಬರಲಾಗಿದೆ.ಇದರ ಸದುಪಯೋಗ ಪಡೆದುಕೊಳ್ಳಲು ಮುಂದೆ ಬರಬೇಕು. ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಮಕ್ಕಳಿಗೆ ಸಿರಿ ಎಂಬ ಬಾನುಲಿ ಪಾಠಗಳ ಸರಣಿ ಕಾರ್ಯಕ್ರಮ ಪ್ರಸಾರಗೊಳ್ಳುತ್ತಿದೆ. ಇದರಲ್ಲಿನ ಆಯ್ದ ಭಾಗಗಳ ಭಾಷಣಗಳ ಪ್ರತಿಯನ್ನು ಸಂಚಿಕೆ ರೂಪದಲ್ಲಿ ಪ್ರಕಟಿಸಿ ಶಾಲಾ ಮಕ್ಕಳ ಕಲಿಕೆಗೆ ಉಪಯುಕ್ತಗೊಳಿಸಲಾಗುವುದು ಎಂದರು.
ಡಿ. 16ಕ್ಕೆ ಕಲಬುರಗಿ ಜಿಲ್ಲೆಗೆ ಬರುವ ಸಿಎಂ ಅವರಿಂದ ಸಂಚಿಕೆ ಬಿಡುಗಡೆಗೊಳಿಸಲು ಉದೇಶಿಸಲಾಗಿದೆ. ಸಂಚಿಕೆಯು ಶೌಚಾಲಯ ಹಾಗೂ ಕಲಿಕೆಯ ಬಾನುಲಿ ಪಾಠಗಳ ಕುರಿತಾಗಿ ವಿಶೇಷ ಸಂಚಿಕೆ ಇದಾಗಲಿದೆ ಎಂದು ನುಡಿದರು.
ನೋಡಲ್ ಅಧಿಕಾರಿ ಯುವರಾಜ ಗಾಡಿ ಪ್ರಾಸ್ತಾವಿಕವಾಗಿ ಮಾತನಾಡಿ,ಸಹ ಪಠ್ಯ ಚಟುವಟಿಕೆಗಳ ಸ್ಪರ್ಧೆಗಳ ರೂಪುರೇಷೆ ವಿವರಿಸಿದರು.
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ಅಧ್ಯಕ್ಷ ಮಲ್ಲಯ್ಯ ಗುತ್ತೇದಾರ ಅಧ್ಯಕ್ಷ ತೆ ವಹಿಸಿ ಮಾತನಾಡಿ,ಪ್ರತಿಯೊಬ್ಬರು ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ. ಸಿರಿ ಎಂಬ ಬಾನುಲಿ ಸರಣಿ ಕಾರ್ಯಕ್ರಮಗಳ ಮೂಲಕ ರಾಜ್ಯದಲ್ಲಿಯೇ ಮಾದರಿ ಕಾರ್ಯಕ್ರಮಗಳನ್ನು ಜಿಪಂ ಸಿಇಒ ಹಾಗೂ ಶಿಕ್ಷ ಣ ಇಲಾಖೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷ ಕರಾದ ಚಂದ್ರಶೇಖರ ಪಾಟೀಲ, ಸೈನಾಜ ಬೇಗಂ, ಮಲಕಮ್ಮ ರಾಣೆ, ಸಿದ್ದಮ್ಮ ಗೋಳಾ, ನಿವೃತ್ತ ವಿಷಯ ಪರಿವೀಕ್ಷ ಕ ವೀರಭದ್ರಪ್ಪ ಸೇರಿದಂತೆ ಕಾರ್ಯಕ್ರಮಗಳ ನಿರ್ಣಾಯಕರು, ಸ್ಪರ್ಧಾಳುಗಳು ಭಾಗವಹಿಸಿದರು.
ವಿಷಯ ಪರಿವೀಕ್ಷ ಕ ಎಸ್,ಪಿ ಸುಳ್ಳದ ಸ್ವಾಗತಿಸಿ ವಂದಿಸಿದರು. ಡಾ ರಾಜಕುಮಾರ ಪಾಟೀಲ ವಂದಿಸಿದರು. ಒಟ್ಟು ಏಳು ಸ್ಪರ್ಧೆಗಳಲ್ಲಿ ನೂರಕ್ಕೂ ಹೆಚ್ಚಿನ ಸಂಖ್ಯೆ ಶಿಕ್ಷ ಕರು ಭಾಗವಹಿಸಿದ್ದರು.
ಹಾಸನದಲ್ಲಿ ಇದೇ 22ರಂದು ಪ್ರಾಥಮಿಕ ಹಾಗೂ 23ರಂದು ಪ್ರೌಢಶಾಲೆ ಸ್ಪರ್ಧೆಗಳು ನಡೆಯಲಿವೆ.