ಚುನಾವಣೆ ಮುಕ್ತಾಯ: ಪೊಲೀಸರ ಮರು ನಿಯುಕ್ತಿ
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ವರ್ಗಾವಣೆಗೊಳಿಸಲಾಗಿದ್ದ ಹಲವು ಪೊಲೀಸ್ ಅಧಿಕಾರಿಗಳನ್ನು ಪುನಃ ರಾಜ್ಯ ಸರಕಾರ ಯಥಾವತ್ತಾಗಿ ಅವರ ಮೂಲ ಸ್ಥಾನಗಳಿಗೆ ಮರು ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದೆ. ಹೀಗಾಗಿ, ಜಿಲ್ಲೆಯ ವಿವಿಧ ಠಾಣೆಗಳಿಗೆ ಈ ಹಿಂದಿನ ಅಧಿಕಾರಿಗಳು ಹಿಂದಿರುಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
Vijaya Karnataka 15 Jun 2018, 5:06 pm
ಕಲಬುರಗಿ : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ವರ್ಗಾವಣೆಗೊಳಿಸಲಾಗಿದ್ದ ಹಲವು ಪೊಲೀಸ್ ಅಧಿಕಾರಿಗಳನ್ನು ಪುನಃ ರಾಜ್ಯ ಸರಕಾರ ಯಥಾವತ್ತಾಗಿ ಅವರ ಮೂಲ ಸ್ಥಾನಗಳಿಗೆ ಮರು ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದೆ. ಹೀಗಾಗಿ, ಜಿಲ್ಲೆಯ ವಿವಿಧ ಠಾಣೆಗಳಿಗೆ ಈ ಹಿಂದಿನ ಅಧಿಕಾರಿಗಳು ಹಿಂದಿರುಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಬೆಳಗಾವಿ ಡಿಸಿಬಿ ಸ್ಪೆಷಲ್ ಠಾಣೆಗೆ ವರ್ಗವಾಗಿದ್ದ ಶಂಕರಗೌಡ ಪಾಟೀಲ್ ಮರಳಿ ಚಿತ್ತಾಪುರ ಠಾಣಾ ವ್ಯಾಪ್ತಿಯ ಸಿಪಿಐ ಹುದ್ದೆಗೆ ವಾಪಸ್ಸಾಗಿದ್ದಾರೆ. ಅದೇ ರೀತಿ, ಯಾದಗಿರಿ ಡಿಸಿಬಿ ಸ್ಪೆಷಲ್ ಪಿಎಸ್ ಹುದ್ದೆಯಿಂದ ಮುಕ್ತರಾಗಿ ಗಾಳೆಪ್ಪ ಪೆನಗಾ ಕಲಬುರಗಿಯ ರೋಜಾ ಠಾಣೆಗೆ ಮರಳಲಿದ್ದಾರೆ.
ಎಸಿಬಿಗೆ ವರ್ಗಾವಣೆಯಾಗಿದ್ದ ಕಪಿಲ್ದೇವ್ ಎ. ಗಡದ್ ಕಲಬುರಗಿ ಡಿಸಿಬಿ ಸ್ಪೆಷಲ್ ಠಾಣೆಗೆ ವಾಪಸ್ಸಾಗಿದ್ದಾರೆ. ಈಶಾನ್ಯ ವಲಯ ಐಜಿಪಿ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡಿದ್ದ ಅಬ್ದುಲ್ ವಾಜಿದ್ ಪಟೇಲ್ ಗ್ರಾಮೀಣ ಠಾಣೆಯ ಸಿಪಿಐ ಆಗಿ ಮರು ಅಧಿಕಾರ ಸ್ವೀಕರಿಸಲಿದ್ದಾರೆ. ಬೀದರ್ ಡಿಸಿಐಬಿಗೆ ವರ್ಗಗೊಂಡಿದ್ದ ಧನಪತಿ ಬಿ.ಕಟ್ಟಿಮನಿ ಶಹಾಬಾದ್ ಗ್ರಾಮೀಣ ವೃತ್ತದ ಕಾಳಗಿ ಠಾಣೆಗೆ ಹಿಂದಿರುಗಿದ್ದರೆ, ರಾಯಚೂರು ಡಿಸಿಐಬಿ ತೆರಳಿದ್ದ ಅಸ್ಲಂಬಾಷಾ ಅವರು ಶಹಾಬಾದ್ ಟೌನ್ ಠಾಣೆಗೆ ಹಿಂದಿರುಗಿದ್ದಾರೆ. ಕಲಬುರಗಿ ಡಿಸಿಬಿ ಸ್ಪೆಷಲ್ ಠಾಣೆಯಿಂದ ರಾಘವೇಂದ್ರ ಎಚ್.ಎಸ್. ಹಾಗೂ ಬಸಪ್ಪ ಭೀಮಪ್ಪ ಭಜಂತ್ರಿ ಅವರನ್ನು ಮುಕ್ತಗೊಳಿಸಿ ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯಕ್ಕೆ ಮರಳಿ ವರ್ಗಾವಣೆ ಮಾಡಲಾಗಿದೆ.
ಬೆಳಗಾವಿ ಡಿಸಿಬಿ ಸ್ಪೆಷಲ್ ಠಾಣೆಗೆ ವರ್ಗವಾಗಿದ್ದ ಶಂಕರಗೌಡ ಪಾಟೀಲ್ ಮರಳಿ ಚಿತ್ತಾಪುರ ಠಾಣಾ ವ್ಯಾಪ್ತಿಯ ಸಿಪಿಐ ಹುದ್ದೆಗೆ ವಾಪಸ್ಸಾಗಿದ್ದಾರೆ. ಅದೇ ರೀತಿ, ಯಾದಗಿರಿ ಡಿಸಿಬಿ ಸ್ಪೆಷಲ್ ಪಿಎಸ್ ಹುದ್ದೆಯಿಂದ ಮುಕ್ತರಾಗಿ ಗಾಳೆಪ್ಪ ಪೆನಗಾ ಕಲಬುರಗಿಯ ರೋಜಾ ಠಾಣೆಗೆ ಮರಳಲಿದ್ದಾರೆ.
ಎಸಿಬಿಗೆ ವರ್ಗಾವಣೆಯಾಗಿದ್ದ ಕಪಿಲ್ದೇವ್ ಎ. ಗಡದ್ ಕಲಬುರಗಿ ಡಿಸಿಬಿ ಸ್ಪೆಷಲ್ ಠಾಣೆಗೆ ವಾಪಸ್ಸಾಗಿದ್ದಾರೆ. ಈಶಾನ್ಯ ವಲಯ ಐಜಿಪಿ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡಿದ್ದ ಅಬ್ದುಲ್ ವಾಜಿದ್ ಪಟೇಲ್ ಗ್ರಾಮೀಣ ಠಾಣೆಯ ಸಿಪಿಐ ಆಗಿ ಮರು ಅಧಿಕಾರ ಸ್ವೀಕರಿಸಲಿದ್ದಾರೆ. ಬೀದರ್ ಡಿಸಿಐಬಿಗೆ ವರ್ಗಗೊಂಡಿದ್ದ ಧನಪತಿ ಬಿ.ಕಟ್ಟಿಮನಿ ಶಹಾಬಾದ್ ಗ್ರಾಮೀಣ ವೃತ್ತದ ಕಾಳಗಿ ಠಾಣೆಗೆ ಹಿಂದಿರುಗಿದ್ದರೆ, ರಾಯಚೂರು ಡಿಸಿಐಬಿ ತೆರಳಿದ್ದ ಅಸ್ಲಂಬಾಷಾ ಅವರು ಶಹಾಬಾದ್ ಟೌನ್ ಠಾಣೆಗೆ ಹಿಂದಿರುಗಿದ್ದಾರೆ. ಕಲಬುರಗಿ ಡಿಸಿಬಿ ಸ್ಪೆಷಲ್ ಠಾಣೆಯಿಂದ ರಾಘವೇಂದ್ರ ಎಚ್.ಎಸ್. ಹಾಗೂ ಬಸಪ್ಪ ಭೀಮಪ್ಪ ಭಜಂತ್ರಿ ಅವರನ್ನು ಮುಕ್ತಗೊಳಿಸಿ ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯಕ್ಕೆ ಮರಳಿ ವರ್ಗಾವಣೆ ಮಾಡಲಾಗಿದೆ.