ಆ್ಯಪ್ನಗರ

ಎಳ್ಳಮಾವಾಸ್ಯೆ: ಕಾಯಿಪಲ್ಯೆ ಖರೀದಿ ಭರ್ಜರಿ

ಶನಿವಾರ ಎಳ್ಳಮಾವಾಸ್ಯೆ ಆಚರಿಸುವ ಪ್ರಯುಕ್ತ ಶುಕ್ರವಾರ ಇಡೀ ದಿನ ಇಲ್ಲಿನ ಕಣ್ಣಿ ಮಾರುಕಟ್ಟೆಯಲ್ಲಿ ಕಾಯಿಪಲ್ಯೆ ಮಾರಾಟ ಭರ್ಜರಿಯಾಗಿ ನಡೆಯಿತು.

Vijaya Karnataka 5 Jan 2019, 5:00 am
ಕಲಬುರಗಿ :ಶನಿವಾರ ಎಳ್ಳಮಾವಾಸ್ಯೆ ಆಚರಿಸುವ ಪ್ರಯುಕ್ತ ಶುಕ್ರವಾರ ಇಡೀ ದಿನ ಇಲ್ಲಿನ ಕಣ್ಣಿ ಮಾರುಕಟ್ಟೆಯಲ್ಲಿ ಕಾಯಿಪಲ್ಯೆ ಮಾರಾಟ ಭರ್ಜರಿಯಾಗಿ ನಡೆಯಿತು.
Vijaya Karnataka Web emergency vegetable purchase
ಎಳ್ಳಮಾವಾಸ್ಯೆ: ಕಾಯಿಪಲ್ಯೆ ಖರೀದಿ ಭರ್ಜರಿ


ಸಂಪ್ರದಾಯದಂತೆ ರೈತರ ಹೊಲದಲ್ಲಿ ಹಾಲು ತುಂಬಿಕೊಳ್ಳುವ ಹಂತಕ್ಕೆ ಬೆಳೆದು ನಿಂತಿರುವ ಜೋಳಕ್ಕೆ ಚರಗಾ (ನೈವೇದ್ಯ) ಚೆಲ್ಲುವುದರ ಜೊತೆಗೆ ಕುಟುಂಬ ಸಮೇತರಾಗಿ ಹೊಲಗಳಲ್ಲಿ ವಿಶೇಷ ಅಡುಗೆ ಸೇವಿಸುವುದು ವಾಡಿಕೆ. ಇದಕ್ಕೆ ಅನುಗುಣವಾಗಿ ಜೋಳದ ಕಡಬು, ಹಿಂಡಿ ಪಲ್ಯ, ಪುಂಡಿ ಪಲ್ಯ, ಹಸಿ ಉಳ್ಳಾಗಡ್ಡಿ ತಪ್ಪಲು ಮಿಶ್ರಿತ ಬಜೆ ಪಲ್ಯ ಸಿದ್ದಪಡಿಸಲು ಪೂರಕ ಕಾಯಿಪಲ್ಯೆಯನ್ನು ಮಾರುಕಟ್ಟೆಯಲ್ಲಿ ಗ್ರಾಹಕರು ಖರೀದಿಸಿದರು.

ಭಾವೈಕ್ಯತೆಯೇ 'ಸಾರ' :

ನಳನಳಿಸುತ್ತಿರುವ ಜೋಳದ ಹೊಲದಲ್ಲಿ ಚರಗ ಚೆಲ್ಲುವ ಪರಿಪಾಠ ಪಾಲನೆಯ ಜೊತೆಗೆ, ಎಳ್ಳಮಾವಾಸ್ಯೆ ಹೆಸರಿನಲ್ಲಿ ಛಿದ್ರಗೊಂಡಿರುವ ಕುಟುಂಬ ವ್ಯವಸ್ಥೆಯನ್ನು ಒಂದು ದಿನದ ಮಟ್ಟಿಗಾದರೂ ಅವಿಭಕ್ತ ರೂಪಕ್ಕೆ ತರುವುದು ಹಾಗೂ ನೆರೆ ಹೊರೆಯ ಬಂಧುಗಳೊಂದಿಗೆ ಹೊಲಗಳು ಮತ್ತು ಉದ್ಯಾನ ಇತ್ಯಾದಿ ಸ್ಥಳಗಳಲ್ಲಿ ಶುದ್ಧ ದೇಸಿ ಅಡುಗೆ ಸೇವಿಸಲಾಗುತ್ತದೆ.

ಇದರ ಜೊತೆಗೆ, ಚಳಿಗಾಲದ ಕಾರಣಕ್ಕಾಗಿ ದೇಹದಲ್ಲಿ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶ ಸಮತೋಲನ ಪ್ರಮಾಣದಲ್ಲಿರಲಿ ಎಂಬ ಉದ್ದೇಶಕ್ಕಾಗಿ ಸುಲಗಾಯಿ ಮತ್ತು ಬಾರಿ ಹಣ್ಣುಗಳನ್ನು ಸಹ ಇದೇ ವೇಳೆ ಸೇವಿಸಲಾಗುತ್ತದೆ. ಇದಕ್ಕೆ ಪೂರಕವಾಗಿ, ಶನಿವಾರ ಬೆಳಗ್ಗೆ 10ರ ನಂತರ ಆರಂಭಗೊಂಡು ಸಂಜೆವರೆಗೆ ಹೊಲಗಳು ಹಾಗೂ ಉದ್ಯಾನಗಳಲ್ಲಿ ಸಾರ್ವತ್ರಿಕ ಹಬ್ಬದ ವಾತಾವರಣ ಕಾಣ ಸಿಗುತ್ತದೆ ಎಂದು ಉದನೂರಿನ ರೈತರಾದ ಅಂಬಾರಾಯ ಹಿರೇಗೌಡರ್‌ ಹೇಳುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ