ಆ್ಯಪ್ನಗರ

ಫರಹತಾಬಾದ ಗ್ರಾಪಂ ಹಗರಣ: ಧರಣಿ 10ರಂದು

ತಾಲೂಕಿನ ಫರತಹಾಬಾದ್‌ ಗ್ರಾಮ ಪಂಚಾಯಿತಿ ಪಿಡಿಒ ನಾಗಪ್ಪ ಹಾಗೂ ಲೆಕ್ಕಾಧಿಕಾರಿ ರಫೀಕ್‌ ಹಾಗೂ ಹಲವರು ಕೂಡಿ ಸಂಚು ಮಾಡಿ 98 ಲಕ್ಷ ರೂ.ಗಳನ್ನು ಲೂಟಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದಿ. 10ರಂದು ಗ್ರಾಪಂ ಮುಂದೆ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಫರಹತಾಬಾದ ಗ್ರಾಮ ನಾಗರಿಕ ಕ್ರಿಯಾ ಸಮಿತಿ ಅಧ್ಯಕ್ಷ ಎಂ.ಬಿ.ಸಜ್ಜನ್‌ ತಿಳಿಸಿದರು.

Vijaya Karnataka 7 Sep 2018, 5:34 pm
ಕಲಬುರಗಿ : ತಾಲೂಕಿನ ಫರತಹಾಬಾದ್‌ ಗ್ರಾಮ ಪಂಚಾಯಿತಿ ಪಿಡಿಒ ನಾಗಪ್ಪ ಹಾಗೂ ಲೆಕ್ಕಾಧಿಕಾರಿ ರಫೀಕ್‌ ಹಾಗೂ ಹಲವರು ಕೂಡಿ ಸಂಚು ಮಾಡಿ 98 ಲಕ್ಷ ರೂ.ಗಳನ್ನು ಲೂಟಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದಿ. 10ರಂದು ಗ್ರಾಪಂ ಮುಂದೆ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಫರಹತಾಬಾದ ಗ್ರಾಮ ನಾಗರಿಕ ಕ್ರಿಯಾ ಸಮಿತಿ ಅಧ್ಯಕ್ಷ ಎಂ.ಬಿ.ಸಜ್ಜನ್‌ ತಿಳಿಸಿದರು.
Vijaya Karnataka Web farahabadabad gram panchayat scandal
ಫರಹತಾಬಾದ ಗ್ರಾಪಂ ಹಗರಣ: ಧರಣಿ 10ರಂದು


ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಿತಿ ನೇತೃತ್ವದಲ್ಲಿ ನಡೆಯುವ ಧರಣಿಯಲ್ಲಿ ಗ್ರಾಮಸ್ಥರು ಹಾಗೂ ಮುಖಂಡರು ಪಾಲ್ಗೊಳ್ಳುವರು ಎಂದ ಅವರು, ಈ ಭ್ರಷ್ಟಾಚಾರ ಕುರಿತು ಮೇಲಧಿಕಾರಿಗಳಾದ, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು, ಲೋಕಾಯುಕ್ತ ಎಸ್ಪಿ, ಜಿಪಂ ಸಿಇಒ ಸೇರಿದಂತೆ ಇತರೆ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಇಷ್ಟಿದ್ದರೂ, ಇನ್ನೂವರಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

14ನೇ ಹಣಕಾಸು ಯೋಜನೆಯ 5ಲಕ್ಷ ರೂ. ಚೆಕ್‌ ಸಂಖ್ಯೆ 501065 ಎ.ಬಿ.ಮಾಲಿಪಾಟೀಲ ಅವರ ಹೆಸರಿನಲ್ಲಿ 13 ಲಕ್ಷ ರೂ. ದೇವಿಂದ್ರಪ್ಪ ಸುಭಾಷ್‌ ಎನ್ನುವವರ ಹೆಸರಿನಲ್ಲಿ, 8.50ಲಕ್ಷವನ್ನು ಜಯಪ್ಪ, 14ಲಕ್ಷ ರೂ. ಮಂಜುನಾಥ ಕಂಪ್ಯೂಟರ ನಾಗಪ್ಪ ಎನ್ನುವವರ ಹೆಸರಿನಲ್ಲಿ 30 ಲಕ್ಷವನ್ನು ನಾಗಪ್ಪ ಅವರು ಡ್ರಾ ಮಾಡಿಕೊಂಡಿದ್ದು, ದಾಖಲೆಗಳ ಸಮೇತ ದೂರು ನೀಡಲಾಗಿದ್ದು, ಇನ್ನೂವರೆಗೆ ಕ್ರಮ ಕೈಗೊಂಡಿಲ್ಲ. ಆದ್ದರಿಂದ ನಾವು ಧರಣಿ ಹಮ್ಮಿಕೊಳ್ಳಲು ಯೋಜಿಸಿದ್ದೇವೆ ಎಂದರು.

ಈ ಧರಣಿಯಲ್ಲಿ ಅಫಜಲಪುರ ಶಾಸಕ ಎಂ.ವೈ.ಪಾಟೀಲ ಕೂಡ ಭಾಗವಹಿಸುವರು ಎಂದು ಸಜ್ಜನ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಕಲಬುರಗಿ, ಖಜಾಂಚಿ ಶರಣು ಅವಂಟಗಿ, ಬಸವರಾಜ ಹಲಬುರ್ಗಿ ಇನ್ನೂ ಹಲವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ