ಆ್ಯಪ್ನಗರ

ಕಲಬುರಗಿ: ಕುಲಸಚಿವ ಹುದ್ದೆ ಬಿಟ್ಟು ಕೊಡಲು ಮೀನಮೇಷ, ಕೇಂದ್ರೀಯ ವಿವಿಯಲ್ಲಿ ಫೈಟ್!

ಅಧಿಕಾರವಧಿ ವಿಚಾರವಾಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಗುರುವಾರ ಹೈಡ್ರಾಮಾ ನಡೆಯಿತು. 5 ವರ್ಷಗಳ ಅಧಿಕಾರವಧಿ ಇದ್ದರೂ ಕಾನೂನು ಬಾಹಿರವಾಗಿ ತಮ್ಮನ್ನು 2 ವರ್ಷಕ್ಕೆ ಮಾತೃ ವಿಶ್ವವಿದ್ಯಾಲಯಕ್ಕೆ ಕಳಿಸಲಾಗುತ್ತಿದೆ ಎಂದು ಕುಲಸಚಿವರು ದೂರಿದ್ದು ಇದಕ್ಕೆಲ್ಲ ಕಾರಣವಾಯ್ತು.

Vijaya Karnataka Web 21 Jan 2021, 4:43 pm
ಕಲಬುರಗಿ: ಐದು ವರ್ಷಗಳ ಅಧಿಕಾರವಧಿ ಇದ್ದರೂ ಕಾನೂನು ಬಾಹಿರವಾಗಿ ತಮ್ಮನ್ನು ಎರಡು ವರ್ಷಕ್ಕೆ ಮಾತೃ ವಿಶ್ವವಿದ್ಯಾಲಯಕ್ಕೆ ಕಳಿಸಲಾಗುತ್ತಿದೆ ಎಂದು ಆರೋಪಿಸಿರುವ ಕೇಂದ್ರೀಯ ವಿಶ್ವವಿದ್ಯಾಲಯ ಕುಲಸಚಿವ ಪ್ರೊ. ಮುಷ್ತಾಕ್ ಅಹ್ಮದ್ ಐ. ಪಟೇಲ್, ನಿಯೋಜಿತ ಕುಲಸಚಿವ ಬಸವರಾಜ ಡೋಣೂರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಲು ನಿರಾಕರಿಸಿದ್ದಾರೆ.
Vijaya Karnataka Web karnataka central university


ಇದರಿಂದಾಗಿ ಕೇಂದ್ರೀಯ ವಿವಿಯಲ್ಲಿ ಗುರುವಾರ ಹೈಡ್ರಾಮಾ ನಡೆಯಿತು. ಇದೇ ವೇಳೆ ಮುಷ್ತಾಕ್ ತಮ್ಮ ಕಚೇರಿಗೆ ಬೀಗ ಹಾಕಿ ಹೊರಟು ಹೋದರು. ಹೀಗಾಗಿ ಅಧಿಕಾರ ಸ್ವೀಕಾರಕ್ಕಾಗಿ ಆಗಮಿಸಿದ್ದ ಇಂಗ್ಲಿಷ್ ವಿಭಾಗದ ಡೀನ್ ಪ್ರೊ ಫೆಸರ್ ಬಸವರಾಜ ಡೋಣೂರ ತಬ್ಬಿಬ್ಬಾದ ಘಟನೆ ನಡೆದಿದೆ. ಈ ಘಟನೆಯಿಂದಾಗಿ ಇಡೀ ವಿವಿಯಲ್ಲಿ ಕೋಲಾಹಲದ ವಾತಾವರಣ ಉಂಟಾಗಿದೆ.

ಹೈದರಾಬಾದ್ ನ ಮೌಲಾನಾ ಆಜಾದ್ ಉರ್ದು ವಿ.ವಿ. ಪ್ರಾಧ್ಯಾಪಕ ಪ್ರೊ. ಮುಷ್ತಾಕ್ ಅಹ್ಮದ್ ಅವರು 2018ರಲ್ಲಿ ಕೇಂದ್ರೀಯ ವಿ.ವಿ. ಕುಲಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅದರೆ, ಬುಧವಾರ ಸಂಜೆ ಏಕಾಏಕಿ ತಮಗೆ ಆದೇಶ ಪ್ರತಿಯನ್ನು ನೀಡಿದ ಹಂಗಾಮಿ ‌ಕುಲಪತಿ ಪ್ರೊ.ಎಂ.ವಿ.ಅಳಗವಾಡಿ ಅವರು ಮಾತೃ ಇಲಾಖೆಗೆ ತೆರಳುವಂತೆ ‌ಸೂಚಿಸಿದ್ದಾರೆ. 'ಅಳಗವಾಡಿ ಅವರೇ ಪೂರ್ಣ ಪ್ರಮಾಣದ ಕುಲಪತಿಯಲ್ಲ. ಅಲ್ಲದೇ ‌ನನ್ನ ಮೇಲೆ ಯಾವ ಆಪಾದನೆಗಳೂ ಇಲ್ಲ. ಒಂದು ವೇಳೆ ಮಾತೃ ವಿ.ವಿ.ಗೆ ಕಳಿಸಬೇಕೆಂದರೆ ಕಾರ್ಯಕಾರಿ ಮಂಡಳಿಯ (ಇ.ಸಿ.) ಒಪ್ಪಿಗೆ ‌ಪಡೆಯಬೇಕು. ಎಲ್ಲ ನಿಯಮಗಳನ್ನು ‌ಉಲ್ಲಂಘಿಸಿದ್ದರಿಂದ ನಾನು ಅಧಿಕಾರ ಹಸ್ತಾಂತರಿಸಿಲ್ಲ' ಎಂದು ಮುಷ್ತಾಕ್ ಅಹ್ಮದ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಮಹಿಳಾ ಕಾಂಗ್ರೆಸ್‌ನಿಂದ 'ನಾಡ ಶಕ್ತಿ ಅಭಿಯಾನ': ತಳಮಟ್ಟದಿಂದ ಪಕ್ಷ ಕಟ್ಟಲು ಕಾರ್ಯತಂತ್ರ!

ಅಳಗವಾಡಿ ಅವರು ಸಿಯುಕೆ ಇಂಗ್ಲಿಷ್ ಪ್ರಾಧ್ಯಾಪಕ ಹಾಗೂ ಡೀನ್ ಪ್ರೊ. ಬಸವರಾಜ ‌ಡೋಣೂರ ಅವರಿಗೆ ಅಧಿಕಾರ ಹಸ್ತಾಂತರಿಸುವಂತೆ ಪಟೇಲ್ ಅವರಿಗೆ ‌ಸೂಚಿಸಿದ್ದರು. ಆದರೆ ಪಟೇಲ್ ನಿರಾಕರಿಸಿದ್ದಾರೆ ಇದರಿಂದಾಗಿ ಪ್ರಕರಣದಲ್ಲಿ ತೊಡಕುಂಟಾಗಿದೆ.

ಕರ್ನಾಟಕ ಕೇಂದ್ರೀಯ ವಿವಿಯಲ್ಲಿ ನೇಮಕಾತಿ; ಅರ್ಜಿ ಆಹ್ವಾನ

ಮುಸ್ತಾಕ್ ಆರೋಪ

₹ 6 ಕೋಟಿ ಮೊತ್ತದ ಕಟ್ಟಡ ‌ಕಾಮಗಾರಿಗಳಿಗೆ ಅನುಮೋದನೆ ನೀಡುವಂತೆ ‌ನನ್ನ ಮೇಲೆ ಒತ್ತಡ ಹೇರಲಾಗಿತ್ತು. ಈ ಕಡತಕ್ಕೆ ಸಹಿ ಹಾಕಲು ‌ನಿರಾಕರಿಸಿದ್ದೆ. ಈ ಅಂಶವೇ ನನ್ನನ್ನು ಮಾತೃ ವಿ.ವಿ.ಗೆ ಕಳಿಸುವ ನಿರ್ಧಾರ ಕೈಗೊಳ್ಳಲು ‌ಕಾರಣ ಎಂದು ಅಹಮದ್ ಕೊಗಾಡಿದ್ದಾರೆಂದು ವಿವಿ ಮೂಲಗಳು ತಿಳಿಸಿವೆ.

‘ನನಗೆ ಎಷ್ಟೇ ತೊಂದರೆ ಕೊಟ್ಟರೂ ಹೆದರಲ್ಲ, ನಿಮ್ಮ ಆಶೀರ್ವಾದ ಇದ್ದರೆ ಸಾಕು’: ಡಿಕೆಶಿ

ಡೋಣೂರ ಪ್ರತಿಕ್ರಿಯೆ
ಈ ಕುರಿತು ಪ್ರತಿಕ್ರಿಯೆ ನೀಡಿದ ಪ್ರೊ. ಬಸವರಾಜ ಡೋಣೂರ, ಮೂರು ಸಂದರ್ಭಗಳಲ್ಲಿ ಬೇರೆ ವಿ.ವಿ.ಯಿಂದ ನಿಯೋಜನೆ ಮೇರೆಗೆ ಬಂದವರು ಅಧಿಕಾರ ಬಿಟ್ಟು ಕೊಡಬೇಕಾಗುತ್ತದೆ. ಒಂದು ಮಾತೃ ವಿ.ವಿ.ಯವರು ಬರಬೇಕು ‌ಎಂದು ಸೂಚಿಸಿದಾಗ, ಮತ್ತೊಂದು ಅಧಿಕಾರವಧಿ‌ ಮುಗಿದಾಗ, ಮೂರನೇಯದು ನಿಯೋಜನೆ ಮೇರೆಗೆ ಕೆಲಸ ಮಾಡುತ್ತಿರುವ ವಿ.ವಿ. ಮುಖ್ಯಸ್ಥರು ಕರ್ತವ್ಯದಿಂದ ಬಿಡುಗಡೆ ‌ಮಾಡಿದಾಗ. ಹಾಗಾಗಿ, ಅಧಿಕಾರ ಬಿಟ್ಟುಕೊಡದೇ ಇರುವುದು ಸರಿಯಲ್ಲ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ