ಆ್ಯಪ್ನಗರ

ಆಹಾರ ಇಲಾಖೆ ಡಿಡಿ, ಎಸ್‌ಡಿಎ ಎಸಿಬಿ ಬಲೆಗೆ

ಅಕ್ರಮವಾಗಿ ಪಡಿತರ ಧಾನ್ಯಗಳನ್ನು ಸರಬರಾಜು ಮಾಡುತ್ತಿದ್ದ ವೇಳೆ ಜಪ್ತು ಮಾಡಿಕೊಳ್ಳಲಾಗಿದ್ದ ವಾಹನ ಬಿಡುಗಡೆ ಮಾಡುವ ಸಂಬಂಧ ಲಂಚ ಸ್ವೀಕರಿಸುತ್ತಿದ್ದ ಇಲ್ಲಿನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿದೇಶಕ ಹಾಗೂ ಕಚೇರಿಯ ಎಸ್‌ಡಿಎ ಎಸಿಬಿ ದಾಳಿಯಲ್ಲಿಸಿಕ್ಕಿಬಿದ್ದಿದ್ದಾರೆ.

Vijaya Karnataka 12 Dec 2019, 10:11 pm
ಕಲಬುರಗಿ:ಅಕ್ರಮವಾಗಿ ಪಡಿತರ ಧಾನ್ಯಗಳನ್ನು ಸರಬರಾಜು ಮಾಡುತ್ತಿದ್ದ ವೇಳೆ ಜಪ್ತು ಮಾಡಿಕೊಳ್ಳಲಾಗಿದ್ದ ವಾಹನ ಬಿಡುಗಡೆ ಮಾಡುವ ಸಂಬಂಧ ಲಂಚ ಸ್ವೀಕರಿಸುತ್ತಿದ್ದ ಇಲ್ಲಿನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿದೇಶಕ ಹಾಗೂ ಕಚೇರಿಯ ಎಸ್‌ಡಿಎ ಎಸಿಬಿ ದಾಳಿಯಲ್ಲಿಸಿಕ್ಕಿಬಿದ್ದಿದ್ದಾರೆ. ಇಬ್ಬರನ್ನೂ ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
Vijaya Karnataka Web food department dd sda acb trap
ಆಹಾರ ಇಲಾಖೆ ಡಿಡಿ, ಎಸ್‌ಡಿಎ ಎಸಿಬಿ ಬಲೆಗೆ

ಕಲಬುರಗಿಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಶ್ರೀಧರ್‌ ಅವರ ನಿವಾಸದಲ್ಲಿಕಲಬುರಗಿ ಎಸಿಬಿ ಅಧಿಕಾರಿಗಳು ಬುಧವಾರ ಮಧ್ಯಾಹ್ನ ಕಾರ್ಯಾಚರಣೆಯಲ್ಲಿನಡೆಸಿದರು. ಎಸಿಬಿ ಎಸ್ಪಿ ವಿ.ಎಂ.ಜ್ಯೋತಿ, ಡಿಎಸ್‌ಪಿ ಸುಧಾ ಆದಿ ಸೇರಿದಂತೆ ಇತರರಿದ್ದರು.


ಇಲಾಖೆಯ ಉಪನಿರ್ದೇಶಕ ಶ್ರೀಧರ್‌ ಹಾಗೂ ಎಸ್‌ಡಿಎ ಸಂತೋಷ್‌ ಬಂಧಿತರು. ಆಳಂದ ಪಟ್ಟಣದ ಮೈನುದ್ದೀನ್‌ ಮೆಹಬೂಬ್‌ಸಾಬ್‌ ಎಣ್ಣೆಗೊರೆ ಅವರಿಂದ ನೀಡಿದ ದೂರಿನ ಮೇರೆಗೆ ಎಸಿಬಿ ಅಧಿಕಾರಿಗಳು ಬುಧವಾರ ಮಧ್ಯಾಹ್ನ 2ಕ್ಕೆ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.

ದಾಳಿಗೂ ಮುನ್ನ:

ಮೈನುದ್ದೀನ್‌ ಅವರ ಟಾಟಾ ಐಷರ್‌ ವಾಹನವನ್ನು ಪರಿಚಿತ ಮಹೇಶ್‌ ಗೌಳಿ ಎಂಬಾತ ತೊಗರಿ ತುಂಬಿಕೊಂಡು ಬರುವ ಕಾರಣಕ್ಕಾಗಿ 29, ಮಾರ್ಚ್ 2019ರಂದು ಬಾಡಿಗೆ ಆಧಾರದಲ್ಲಿಪಡೆದಿದ್ದರು. ಆದರೆ, ಹೀಗೆ ಪಡೆದಿದ್ದ ವಾಹನದಲ್ಲಿಅಕ್ರಮವಾಗಿ ಪಡಿತರ ಧಾನ್ಯಗಳನ್ನು ಸಾಗಣೆ ಮಾಡುತ್ತಿದ್ದ ವೇಳೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ನಡೆಸಿದ ದಾಳಿಯಲ್ಲಿಸಿಕ್ಕಿಬಿದ್ದಿದ್ದ. ಹೀಗಾಗಿ, ಈ ವಾಹನದ ಬಿಡುಗಡೆಗೆ ಕೋರಿ ಮೈನುದ್ದೀನ್‌ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದಾಗ ರೂ.5,05,000 ಬ್ಯಾಂಕ್‌ ಗ್ಯಾರಂಟಿ ನೀಡಿ ವಾಹನ ಪಡೆಯುವಂತೆ ಸೂಚಿಸಿದ್ದರು. ಹಾಗಾಗಿ, 24/10/2019ರಂದು ಬ್ಯಾಂಕ್‌ ಗ್ಯಾರಂಟಿ ನೀಡಿದ ಬಳಿಕವೂ ಆಹಾರ ಇಲಾಖೆಯ ಎಸ್‌ಡಿಎ ಸಂತೋಷ್‌ ರೂ. 15000 ಲಂಚ ನೀಡಿದರೆ ಮಾತ್ರ ವಾಹನ ಬಿಡುಗಡೆ ಮಾಡುವುದಾಗಿ ಹೇಳಿದ್ದರಿಂದ ಬುಧವಾರ (ಡಿ.11ರಂದು) ಮೈನುದ್ದೀನ್‌ ಎಸಿಬಿ ಅಧಿಕಾರಿಗಳಿಗೆ ಬೆಳಗ್ಗೆ ದೂರು ಸಲ್ಲಿಸಿದ್ದರು.

ಎಸಿಬಿ ಎಸ್ಪಿ ವಿ.ಎಂ.ಜ್ಯೋತಿ, ಡಿಎಸ್‌ಪಿ ಸುಧಾ ಆದಿ, ಪಿಐ ಶರಣಬಸಪ್ಪ ಕೋಡ್ಲಾ, ಪಿ.ಐ. ಬಾಬಾ ಸಾಹೇಬ ಎಸ್‌. ಸೇರಿದಂತೆ ಇತರರು ಕಾರ್ಯಾಚರಣೆಯಲ್ಲಿಪಾಲ್ಗೊಂಡಿದ್ದರು.

ಹಣ ಪಡೆವಾಗ ಸಿಕ್ಕುಬಿದ್ದರು

ಹಣಕ್ಕೆ ಬೇಡಿಕೆ ಇಟ್ಟ ದೂರಿನ ಆಧಾರದ ಮೇಲೆ ಕಾರ್ಯಾಚರಣೆಗೆ ಇಳಿದ ಅಧಿಕಾರಿಗಳು ಬುಧವಾರ ಮಧ್ಯಾಹ್ನ 2ಕ್ಕೆ ಮೈನುದ್ದೀನ್‌ ಅವರಿಂದ ಎಸ್‌ಡಿಎ ಸಂತೋಷ್‌ 15 ಸಾವಿರ ರೂ. ಲಂಚ ಪಡೆದ ತರುವಾಯ ಹಣವನ್ನು ಇಲಾಖೆಯ ಉಪನಿರ್ದೇಶಕ ಶ್ರೀಧರ್‌ ಅವರ ನಿವಾಸಕ್ಕೆ ತೆರಳಿ ಅವರಿಗೆ ನೀಡುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಲೆಗೆ ಕೆಡವಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ