ಆ್ಯಪ್ನಗರ

​ಮಾಜಿ ಸಚಿವ ಬೆಳಮಗಿ ಕೊಲೆ ಯತ್ನ: ಸುಳ್ಳು ಆರೋಪ ಎಂದ ಚಾಲಕ

ಮಾಜಿ ಸಚಿವ ರೇವು ನಾಯಕ ಬೆಳಮಗಿ ಅವರ ಕೊಲೆ ಮಾಡುವ ಪ್ರಯತ್ನ ಮಾಡಿದ್ದೇನೆ ಎಂಬ ಆರೋಪ ಸುಳ್ಳು ಎಂದು ಬೆಳಮಗಿ ಅವರ ನಿಕಟಪೂವ೯ ಕಾರು ಚಾಲಕ ಮಿಲೇಶ್ ಸಾಯಬಣ್ಣ ಸಮಗಾರ ಹೇಳಿದ್ದಾರೆ.

Vijaya Karnataka Web 12 Oct 2017, 12:07 pm
ಕಲಬುರಗಿ: ಮಾಜಿ ಸಚಿವ ರೇವು ನಾಯಕ ಬೆಳಮಗಿ ಅವರ ಕೊಲೆ ಮಾಡುವ ಪ್ರಯತ್ನ ಮಾಡಿದ್ದೇನೆ ಎಂಬ ಆರೋಪ ಸುಳ್ಳು ಎಂದು ಬೆಳಮಗಿ ಅವರ ನಿಕಟಪೂವ೯ ಕಾರು ಚಾಲಕ ಮಿಲೇಶ್ ಸಾಯಬಣ್ಣ ಸಮಗಾರ ಹೇಳಿದ್ದಾರೆ.
Vijaya Karnataka Web former minister belamagi accident issue
​ಮಾಜಿ ಸಚಿವ ಬೆಳಮಗಿ ಕೊಲೆ ಯತ್ನ: ಸುಳ್ಳು ಆರೋಪ ಎಂದ ಚಾಲಕ


ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ರೇವುನಾಯಕ ಅವರು ನನ್ನ ಮೇಲೆ ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಕಾರು ಅಪಘಾತ ಮಾಡಿ ಬೆಳಮಗಿ ಅವರನ್ನು ಕೊಲ್ಲುವ ಯತ್ನ ಮಾಡಿದ್ದಾಗಿ ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಮೇಲಾಗಿ ಮಾಜಿ ಸಚಿವ ಬೆಳಮಗಿ ಅವರ ಸಹೋದರ ಬಾಬುರಾವ್ ಬೆಳಮಗಿ ಫೋನ್ ಮಾಡಿ ಕುಮ್ಮಕ್ಕು ನೀಡಿದವರ ಹೆಸರು ಹೇಳುವಂತೆ ಒತ್ತಾಯಿಸುತ್ತಿದ್ದಾರೆ. ನನ್ನ ಜೀವಕ್ಕೆ ಬೆದರಿಕೆ ಇದೆ. ಈ ಆರೋಪದಿಂದ ನನ್ನನ್ನು ಎಲ್ಲರೂ ಅನುಮಾನದಿಂದ ನೋಡುವಂತಾಗಿದೆ,' ಎಂದರು.


'ನವಿಲು ಅಡ್ಡ ಬಂದ ಕಾರಣಕ್ಕೆಅದನ್ನು ಉಳಿಸುವ ಯತ್ನದಲ್ಲಿ ಚಾಲನೆಯ ವೇಳೆ ನಿಯಂತ್ರಣ ತಪ್ಪಿದ್ದರಿಂದ ಅಪಘಾತ ಸಂಭವಿಸಿದೆ. ನಾನೇ ಸ್ವತಃ ಆಸ್ಪತ್ರೆಗೆ ದಾಖಲಿಸಿದ್ದು, ಐದು ದಿನ ಆಸ್ಪತ್ರೆಯಲ್ಲಿದ್ದೆ. ಆದರೂ ಇಂಥ ಆರೋಪ ಕೇಳಿಬರುತ್ತಿದೆ,' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ