ಆ್ಯಪ್ನಗರ

ಲಿಂಗಾಯತ ಭವನ ಲೋಕಾರ್ಪಣೆ ಜ.27ರಂದು

ರೂ. 16 ಕೋಟಿ ಮೊತ್ತದ ಲಿಂಗಾಯತ ಭವನದ ಶಂಕು ಸ್ಥಾಪನಾ ಸಮಾರಂಭ ಇದೇ ಜ.27ರಂದು ಆಳಂದ ಪಟ್ಟಣದಲ್ಲಿ ಜರುಗಲಿದೆ ಎಂದು ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಟ್ರಸ್ಟ್‌ ಅಧ್ಯಕ್ಷ ಬಿ.ಆರ್‌.ಪಾಟೀಲ್‌ ತಿಳಿಸಿದರು.

Vijaya Karnataka 24 Jan 2018, 5:06 pm

ಕಲಬುರಗಿ: ರೂ. 16 ಕೋಟಿ ಮೊತ್ತದ ಲಿಂಗಾಯತ ಭವನದ ಶಂಕು ಸ್ಥಾಪನಾ ಸಮಾರಂಭ ಇದೇ ಜ.27ರಂದು ಆಳಂದ ಪಟ್ಟಣದಲ್ಲಿ ಜರುಗಲಿದೆ ಎಂದು ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಟ್ರಸ್ಟ್‌ ಅಧ್ಯಕ್ಷ ಬಿ.ಆರ್‌.ಪಾಟೀಲ್‌ ತಿಳಿಸಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಒಟ್ಟು 16 ಕೋಟಿ ಮೊತ್ತದ ಕಟ್ಟಡ ನಿರ್ಮಾಣಕ್ಕೆ ಪೂರಕವಾಗಿ ಬೆಳಗಾವಿ ಜಿಲ್ಲೆ ಯಕ್ಸಂಬಾದ ಬೀರಲಿಂಗೇಶ್ವರ ಪತ್ತಿನ ಸಹಕಾರ ಸಂಘದಿಂದ ಒಟ್ಟು ರೂ. 9 ಕೋಟಿ ಸಾಲ ಪಡೆಯಲಾಗಿದೆ. ಇದರ ಜೊತೆಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೂ. 1 ಕೋಟಿ ಮಂಜೂರು ಮಾಡಿದ್ದಾರೆ ಎಂದರು.

ವ್ಯಾಪಾರ ಮಳಿಗೆ, ಭವ್ಯ ಮದುವೆ ಮಂಟಪ, ಊಟದ ಮನೆ, ಅಡುಗೆ ಕೋಣೆಗಳು ಹಾಗೂ 100 ವಾಹನಗಳು ನಿಲ್ಲಲು ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

*ಅಶ್ವಾರೂಢ ಬಸವೇಶ್ವರ ಮೂರ್ತಿ ಅನಾವರಣ:

ಕ್ಷೇತ್ರದ ಯುವಕರ ಒತ್ತಾಸೆಯ ಮೇರೆಗೆ ಅಶ್ವಾರೂಢ ಬಸವೇಶ್ವರ ಮೂರ್ತಿಯನ್ನು ಭವನದ ಎದುರು ಅನಾವರಣಗೊಳಿಸಲು ಉದ್ದೇಶಿಸಲಾಗಿದೆ. ಈ ಉದ್ದೇಶಕ್ಕಾಗಿ 23 ಲಕ್ಷ ರೂ. ವೆಚ್ಚವಾಗಿದೆ. ಇದರ ಜೊತೆಗೆ, ಸರಕಾರವೂ ಈ ಉದ್ದೇಶಕ್ಕಾಗಿ ರೂ. 10 ಲಕ್ಷ ಮಂಜೂರು ಮಾಡಿದೆ ಎಂದರು.

ಟ್ರಸ್ಟ್‌ ಖಜಾಂಚಿ ಹಣಮಂತರಾವ್‌ ಭೂಸನೂರ, ಶಂಕರರಾವ್‌ ಹತ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ