ಆ್ಯಪ್ನಗರ

ಸರಕಾರಕ್ಕೆ ವಂಚನೆ, ವ್ಯಕ್ತಿಗೆ ಜೈಲು

ಸರಕಾರದ ವಿವಿಧ ಯೋಜನೆಗಳ ಅಡಿ ಕಾಮಗಾರಿಗಳನ್ನು ಕೈಗೊಳ್ಳದೆ ಅನಾಮತ್ತಾಗಿ ಹಣ ಎತ್ತಿ ಹಾಕಿದ ವ್ಯಕ್ತಿಗೆ ಚಿಂಚೋಳಿ ಜೆಎಂಎಫ್‌ಸಿ ಪ್ರಧಾನ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

Vijaya Karnataka 26 Oct 2019, 10:14 pm
ಕಲಬುರಗಿ:ಸರಕಾರದ ವಿವಿಧ ಯೋಜನೆಗಳ ಅಡಿ ಕಾಮಗಾರಿಗಳನ್ನು ಕೈಗೊಳ್ಳದೆ ಅನಾಮತ್ತಾಗಿ ಹಣ ಎತ್ತಿ ಹಾಕಿದ ವ್ಯಕ್ತಿಗೆ ಚಿಂಚೋಳಿ ಜೆಎಂಎಫ್‌ಸಿ ಪ್ರಧಾನ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
Vijaya Karnataka Web fraud for government
ಸರಕಾರಕ್ಕೆ ವಂಚನೆ, ವ್ಯಕ್ತಿಗೆ ಜೈಲು


ಚಿಂಚೋಳಿ ತಾಲೂಕಿನ ಚೆಂಗಟಾ ಗ್ರಾಮದ ಶಿವರಾಜ ತಂದೆ ಹಣಮಂತರಾವ್‌ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿ. ಈತನ ಫೆ. 2005ರಿಂದ ಸೆ.2017ರವರೆಗೆ 12ನೇ ಹಣಕಾಸು ಯೋಜನೆ, ಸ್ವಚ್ಛ ಗ್ರಾಮ ಯೋಜನೆ, ಭಾರತ ನಿರ್ಮಾಣ ಯೋಜನೆ ಮತ್ತು ಉದ್ಯೋಗ ಖಾತರಿ ಯೋಜನೆ ಕೂಲಿ ಮತ್ತು ಆಡಳಿತ ವಿಭಾಗದಲ್ಲಿಸ್ವತಃ ತಾನೇ ಚೆಕ್‌ ಬರೆದು, ಕೆಲಸ ಮಾಡಿಸದೆ, ಓಚರ್‌ ಬರೆಯದೆ ಒಟ್ಟು ರೂ.15,48,738 ರೂ. ಸಾರ್ವಜನಿಕರ ಹಣ ದುರ್ಬಳಕೆ ಮಾಡಿಕೊಂಡಿರುವುದು ಸಾಬೀತಾದ ಹಿನ್ನೆಲೆಯಲ್ಲಿನ್ಯಾಯಾಧೀಶರಾದ ಬಿ.ಶಿಲ್ಪಾ ಅವರು 2 ವರ್ಷ ಜೈಲು ಶಿಕ್ಷೆ ಹಾಗೂ ರೂ.5000 ದಂಡ ವಿಧಿಸಿದ್ದಾರೆ.

ಸಹಾಯಕ ಸರಕಾರಿ ಅಭಿಯೋಜಕ ರಾಜಕುಮಾರಸ್ವಾಮಿ ಸರಕಾರದ ಪರವಾಗಿ ವಾದ ಮಂಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ