ಆ್ಯಪ್ನಗರ

ದತ್ತನ ಹುಂಡಿಗೆ ದಾಖಲೆ ದೇಣಿಗೆ

ಹುಂಡಿ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ದೇವಲಗಾಣಗಾಪುರದ ದತ್ತ ದೇವಸ್ಥಾನ ಹುಂಡಿ ಕಾಣಿಕೆ ಎಣಿಸುತ್ತಿರುವ ಸಿಬ್ಬಂದಿ...

Vijaya Karnataka 28 Dec 2017, 5:15 pm

ಕಲಬುರಗಿ: ಸುಕ್ಷೇತ್ರ ದೇವಲ ಗಾಣಗಾಪುರದ ದತ್ತನ ಹುಂಡಿಗೆ ದಾಖಲೆಯ ಕಾಣಿಕೆ ಸಲ್ಲಿಕೆಯಾಗಿದೆ. ಜಿಲ್ಲಾಡಳಿತ ಮತ್ತು ಪೊಲೀಸ್‌ ಅಧಿಕಾರಿಗಳ ಸಮ್ಮುಖದಲ್ಲಿ ಗುರುವಾರ ಹುಂಡಿ ಒಡೆದು ಎಣಿಸಲಾಗಿದ್ದು, 49.89 ಲಕ್ಷ ರೂ.ಗಳು, 14 ತೊಲ ಬಂಗಾರ, 28 ತೊಲ ಬೆಳ್ಳಿಯನ್ನು ತೂಕ ಮಾಡಲಾಯಿತು. ಇದುವರೆಗೆ ದಾಖಲಾದ ಹುಂಡಿ ಮೊತ್ತದಲ್ಲಿ ಇದೇ ಅತ್ಯಂತ ಹೆಚ್ಚು ಎಂದು ಮೂಲಗಳು ತಿಳಿಸಿವೆ.

ಜಿಲ್ಲಾಧಿಕಾರಿ ಕಚೇರಿಯ ಶಿಷ್ಟಾಚಾರ ತಹಶೀಲ್ದಾರ್‌ ಪ್ರಕಾಶ್‌ ಚಿಂಚೋಳಿಕರ್‌, ಉಪ ತಹಶೀಲ್ದಾರ್‌ ಅನಂತ ಕುಲಕರ್ಣಿ, ರವೀಂದ್ರ ರೆಡ್ಡಿ, ಸೂರ್ಯಕಾಂತ ಕುಲಕರ್ಣಿ, ಎಸ್‌ಬಿಎಚ್‌ ಶಾಖಾ ವ್ಯವಸ್ಥಾಪಕ ಸತ್ಯನಾರಾಯಣ, ದೇವಸ್ಥಾನದ ಆಡಳಿತಾಧಿಕಾರಿ ಕೆ.ಜಿ. ಬಿರಾದಾರ್‌, ಪಿಎಸ್‌ಐ ಭೀಮರಾಯಗೌಡ ಮುಂತಾದವರು ಈ ಸಂದರ್ಭದಲ್ಲಿ ಇದ್ದರು. ಎಲ್ಲರ ಸಮ್ಮುಖದಲ್ಲಿ ಹಣ ಎಣಿಕೆ ಮಾಡಿ, ಬೆಳ್ಳಿ ಬಂಗಾರವನ್ನು ತೂಕ ಮಾಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ