ಆ್ಯಪ್ನಗರ

ಗಾಂಧಿ ಹತ್ಯೆ: ಬಿಜೆಪಿ ಬಣ್ಣ ಕೊನೆಗೂ ಬಯಲು

ರಾಷ್ಟ್ರಪಿತ ಮಹಾತ್ಮಾಗಾಂಧಿ ಅವರ ಹತ್ಯೆಗೈದ ನಾಥೂರಾಂ ಗೋಡ್ಸೆ ಪರವಾಗಿ ದನಿ ಎತ್ತುವ ಮೂಲಕ ಪ್ರಗ್ಯಾ ಠಾಕೂರ್‌, ನಳಿನ್‌ಕುಮಾರ್‌ ಕಟೀಲ್‌ ಮತ್ತು ಅನಂತಕುಮಾರ್‌ ಹೆಗ್ಡೆ ಗಾಂಧಿ ಹತ್ಯೆಗೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಸಹಮತವಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಮಾಜಿ ಶಾಸಕ ಬಿ.ಆರ್‌.ಪಾಟೀಲ್‌ ಟೀಕಿಸಿದ್ದಾರೆ.

Vijaya Karnataka 18 May 2019, 5:00 am
ಕಲಬುರಗಿ :ರಾಷ್ಟ್ರಪಿತ ಮಹಾತ್ಮಾಗಾಂಧಿ ಅವರ ಹತ್ಯೆಗೈದ ನಾಥೂರಾಂ ಗೋಡ್ಸೆ ಪರವಾಗಿ ದನಿ ಎತ್ತುವ ಮೂಲಕ ಪ್ರಗ್ಯಾ ಠಾಕೂರ್‌, ನಳಿನ್‌ಕುಮಾರ್‌ ಕಟೀಲ್‌ ಮತ್ತು ಅನಂತಕುಮಾರ್‌ ಹೆಗ್ಡೆ ಗಾಂಧಿ ಹತ್ಯೆಗೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಸಹಮತವಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಮಾಜಿ ಶಾಸಕ ಬಿ.ಆರ್‌.ಪಾಟೀಲ್‌ ಟೀಕಿಸಿದ್ದಾರೆ.
Vijaya Karnataka Web gandhi assassination bjp color is finally unveiled
ಗಾಂಧಿ ಹತ್ಯೆ: ಬಿಜೆಪಿ ಬಣ್ಣ ಕೊನೆಗೂ ಬಯಲು


ಈ ಕುರಿತು ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು, ಭೋಪಾಲ್‌ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಗ್ಯಾ ಠಾಕೂರ್‌ ಅವರು ಗೋಡ್ಸೆ ಓರ್ವ ಮಹಾನ್‌ ದೇಶಭಕ್ತ ಎಂದು ಹಾಡಿ ಹೊಗಳಿದ್ದಾರೆ. ಇದರ ಬೆನ್ನಲ್ಲೇ ಶುಕ್ರವಾರ ಮಂಗಳೂರಿನ ಸಂಸದ ನಳೀನ್‌ ಕುಮಾರ್‌ ಕಟೀಲ್‌ ಹಾಗೂ ಕೇಂದ್ರ ಸಚಿವ ಅನಂತ ಕುಮಾರ್‌ ಹೆಗಡೆ ಅವರು ಗೋಡ್ಸೆ ಬಗ್ಗೆ ನೀಡಿರುವ ಮೃದು ಧೋರಣೆಯ ಹೇಳಿಕೆಗಳನ್ನು ಗಮನಿಸಿದಾಗ ಬಿಜೆಪಿ ಮುಖಂಡರಿಗೆ ಗಾಂಧೀಜಿ ಬಗ್ಗೆ ಗೌರವ ಇಲ್ಲ ಎಂಬುದು ಸಾಬೀತಾಗಿದೆ ಎಂದಿದ್ದಾರೆ.

ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಆಸ್ತಿ-ಅಂತಸ್ತು ಬಿಟ್ಟು ಹಗಲಿರುಳು ಹೋರಾಡಿದ ಗಾಂಧೀಜಿ ಅವರನ್ನು ರಾಷ್ಟ್ರಪಿತ ಎಂದು ಜಗತ್ತಿನಾದ್ಯಂತ ಸಂಬೋಧಿಸಲಾಗುತ್ತದೆ. ಇನ್ನೊಂದೆಡೆ, ಬಿಜೆಪಿ ಮುಖಂಡರು ಗಾಂಧೀಜಿ ಅವರನ್ನು ದೇಶದ್ರೋಹಿ ಎಂದು ಕರೆದಿದ್ದಾರೆ. ಗೋಡ್ಸೆ ಓರ್ವ ದೇಶಭಕ್ತ ಎಂದು ಬಿಜೆಪಿ ಮುಖಂಡರು ಆರಾಧನೆ ಮಾಡುವುದನ್ನು ನೋಡಿದರೆ ಗಾಂಧೀಜಿ ಕೊಲೆಯನ್ನು ಬಿಜೆಪಿ ಹಾಗೂ ಆರೆಸ್ಸೆಸ್‌ ಎತ್ತಿ ಹಿಡಿಯುತ್ತದೆ ಎಂಬುದನ್ನು ಸಾರಿ ಹೇಳಿದಂತಿದೆ ಎಂದು ಪಾಟೀಲ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಇಷ್ಟೆಲ್ಲಾ ಅಹಿತಕರ ಹೇಳಿಕೆಗಳನ್ನು ಬಿಜೆಪಿ ಮುಖಂಡರು ನೀಡುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ಈವರೆಗೂ ತುಟಿ ಬಿಚ್ಚಿಲ್ಲ. ಹೀಗಾಗಿ, ಪ್ರಧಾನಿಗಳ ಈ ಮೌನ, ಸಮ್ಮತಿಯ ಲಕ್ಷ ಣ ಎಂದು ದೇಶದ ಜನರು ಭಾವಿಸುವಂತಾಗಿದೆ ಎಂದು ಪಾಟೀಲ್‌ ಜರಿದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ