ಆ್ಯಪ್ನಗರ

ಇ-ತ್ಯಾಜ್ಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ

ವಿಜಯ ಕರ್ನಾಟಕ ಪತ್ರಿಕೆ, ಬೆಂಗಳೂರು ಮಿರರ್‌, ಎನ್ವಿರಾನ್ಮೆಂಟಲ್‌ ಸಿನೆರ್ಜಿಸ್‌ ಇನ್‌ ಡೆವಲಪ್‌ಮೆಂಟ್‌ (ಇಎನ್‌ಎಸ್‌ವೈಡಿಇ-ಎನ್‌ಸೈಡ್‌) ಮತ್ತು ಸಾಹಸ್‌ ಸಂಸ್ಥೆಯ ಸಹಯೋಗದಲ್ಲಿ ಕೈಗೊಂಡಿರುವ ಇ-ತ್ಯಾಜ್ಯ ಸಂಗ್ರಹ ಅಭಿಯಾನಕ್ಕೆ ಕಲಬುರಗಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Vijaya Karnataka 9 Jun 2019, 9:27 pm
ಕಲಬುರಗಿ :ವಿಜಯ ಕರ್ನಾಟಕ ಪತ್ರಿಕೆ, ಬೆಂಗಳೂರು ಮಿರರ್‌, ಎನ್ವಿರಾನ್ಮೆಂಟಲ್‌ ಸಿನೆರ್ಜಿಸ್‌ ಇನ್‌ ಡೆವಲಪ್‌ಮೆಂಟ್‌ (ಇಎನ್‌ಎಸ್‌ವೈಡಿಇ-ಎನ್‌ಸೈಡ್‌) ಮತ್ತು ಸಾಹಸ್‌ ಸಂಸ್ಥೆಯ ಸಹಯೋಗದಲ್ಲಿ ಕೈಗೊಂಡಿರುವ ಇ-ತ್ಯಾಜ್ಯ ಸಂಗ್ರಹ ಅಭಿಯಾನಕ್ಕೆ ಕಲಬುರಗಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
Vijaya Karnataka Web good response to the e waste collection campaign
ಇ-ತ್ಯಾಜ್ಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ


ಓದುಗರು ವಿಜಯ ಕರ್ನಾಟಕ ನೀಡಿದ ಆಹ್ವಾನಕ್ಕೆ ಸ್ಪಂದಿಸುತ್ತಾ ತಮ್ಮ ಮನೆಯಲ್ಲಿದ್ದ ಹಳೆಯ ಮೊಬೈಲ್‌ ಫೀಚರ್‌ ಫೋನ್‌ಗಳು, ಸ್ಮಾರ್ಟ್‌ ಮೊಬೈಲ್‌, ಮೊಬೈಲ್‌ ಚಾರ್ಜರ್‌ಗಳು, ಸಣ್ಣ ಗಾತ್ರದ ಸೆಲ್‌ಗಳು, ಟಿವಿ ರಿಮೋಟ್‌, ಚಲನಚಿತ್ರಗಳ ಸಿಡಿಗಳನ್ನು ತಂದು ವಿಕ ಕಚೇರಿಯಲ್ಲಿ ಇರಿಸಲಾಗಿರುವ ಇ-ತ್ಯಾಜ್ಯ ಬುಟ್ಟಿಗೆ ಹಾಕಿದ್ದಾರೆ.

ವಿಶ್ವ ಪರಿಸರ ದಿನದ ಪ್ರಯುಕ್ತ ಹಮ್ಮಿಕೊಂಡಿರುವ ಈ ಅಭಿಯಾನಕ್ಕೆ ಓದುಗರು ಮತ್ತು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಜನರು ತಮ್ಮ ಮನೆಗಳಲ್ಲಿರುವ ಇ-ತ್ಯಾಜ್ಯಗಳನ್ನು ತಂದು ಬುಟ್ಟಿಯಲ್ಲಿ ಹಾಕುತ್ತಿದ್ದಾರೆ. ಮೇಲಾಗಿ, ಈ ಕುರಿತು ತಮ್ಮ ತಮ್ಮ ನೆರೆ ಹೊರೆಯವರು ಮತ್ತು ಸ್ನೇಹಿತರಲ್ಲೂ ಈ ಕುರಿತಾದ ಜಾಗೃತಿ ಮೂಡಿಸುವ ಮೂಲಕ ಇ-ತ್ಯಾಜ್ಯ ಬುಟ್ಟಿಗೆ ಇ-ತ್ಯಾಜ್ಯ ತಂದು ಸುರಿಯಲು ಪ್ರೇರಣೆ ನೀಡುತ್ತಿದ್ದಾರೆ.

ಅದರಲ್ಲೂ ಮುಖ್ಯವಾಗಿ ಮಕ್ಕಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಕಾರಣಕ್ಕಾಗಿ ಇ-ತ್ಯಾಜ್ಯ ಹೊತ್ತು ತರುವ ವ್ಯಕ್ತಿಗಳೊಂದಿಗೆ ಅವರ ಮಕ್ಕಳು ಸಹ ವಿಕ ಕಚೇರಿಗೆ ಆಗಮಿಸುತ್ತಿದ್ದಾರೆ. ಆ ಮೂಲಕ ಸಾಂಪ್ರದಾಯಿಕ ಕಸದ ಜೊತೆಗೆ ಇ-ತ್ಯಾಜ್ಯವೂ ಎಷ್ಟು ಅಪಾಯಕಾರಿ ಎಂಬುದರ ಕುರಿತು ತಮ್ಮ ಜ್ಞಾನದ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿದ್ದಾರೆ. ಜೂ.25ರವರೆಗೆ ನಡೆಯಲಿರುವ ಈ ಅಭಿಯಾನಕ್ಕೆ ಸ್ಪಂದನೆಯಾಗಿ ಇನ್ನೂ ಹೆಚ್ಚಿನ ಓದುಗರು ತಮ್ಮ ಮನೆಗಳಲ್ಲಿರುವ ಇ-ತ್ಯಾಜ್ಯ ತಂದು ವಿಕ ಕಚೇರಿಯ ಇ-ತ್ಯಾಜ್ಯ ಬುಟ್ಟಿಗೆ ಸುರಿಯುವ ಸಾಧ್ಯತೆಗಳಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ