ಆ್ಯಪ್ನಗರ

ಗೌಡರ ಕಣ್ಣೀರು ಸ್ವಾರ್ಥದ್ದು: ರವಿಕುಮಾರ

ನಗರದಲ್ಲಿ ಗುರುವಾರ ಬಿಜೆಪಿ ಹಮ್ಮಿಕೊಂಡಿದ್ದ ಪ್ರಬುದ್ಧರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ''ಗೌಡರ ಕಣ್ಣೀರು ಸ್ವಾರ್ಥದ ಕಣ್ಣೀರು. ಇಂತಹ ಕಣ್ಣೀರಿನಿಂದ ಜನರ ಮೇಲೆ ಮೋಹದ, ಅನುಕಂಪದ ಬಲೆ ಬೀಸಿ ಮೊಮ್ಮಗನಿಗೆ ಮತಗಳನ್ನಾಗಿ ಪರಿವರ್ತಿಸಲು ಕಣ್ಣೀರು ಸುರಿಸಿದ್ದಾರೆ.

Vijaya Karnataka 15 Mar 2019, 8:03 am
ಕಲಬುರಗಿ: ಮಾಜಿ ಪ್ರಧಾನಿ ದೇವೇಗೌಡ ಅವರು ಪುಲ್ವಾಮಾದಲ್ಲಿ 44 ಸೈನಿಕರು ಹತರಾದಾಗ, ದೇಶದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರವಾದಾಗ, ಹಾಸನದಲ್ಲಿ ಬಸ್‌ ದುರಂತವಾದಾಗ ಸತ್ತವರಿಗಾಗಿ ಕಣ್ಣೀರು ಸುರಿಸಲಿಲ್ಲ. ತಮ್ಮ ಸ್ಥಾನವನ್ನು ತಮ್ಮದೇ ಮೊಮ್ಮಗನಿಗೆ ಬಿಡುವಾಗ ಕಣ್ಣೀರು ಹಾಕಿರುವುದು ತುಂಬಾ ನಾಟಕೀಯವಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಎನ್‌.ರವಿಕುಮಾರ ಗೇಲಿ ಮಾಡಿದರು.
Vijaya Karnataka Web Devegowda


ನಗರದಲ್ಲಿ ಗುರುವಾರ ಬಿಜೆಪಿ ಹಮ್ಮಿಕೊಂಡಿದ್ದ ಪ್ರಬುದ್ಧರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ''ಗೌಡರ ಕಣ್ಣೀರು ಸ್ವಾರ್ಥದ ಕಣ್ಣೀರು. ಇಂತಹ ಕಣ್ಣೀರಿನಿಂದ ಜನರ ಮೇಲೆ ಮೋಹದ, ಅನುಕಂಪದ ಬಲೆ ಬೀಸಿ ಮೊಮ್ಮಗನಿಗೆ ಮತಗಳನ್ನಾಗಿ ಪರಿವರ್ತಿಸಲು ಕಣ್ಣೀರು ಸುರಿಸಿದ್ದಾರೆ. ಇಂತಹ ನಾಟಕಗಳನ್ನು ರಾಜ್ಯದ ಜನ ಸಾಕಷ್ಟು ನೋಡಿದ್ದಾರೆ. ಇದರಿಂದ ಹಾಸನ ಲೋಕಸಭೆ ಗೆಲ್ಲುವ ಕನಸು ನನಸಾಗಲಿದೆ,'' ಎಂದರು.

''ರಾಜ್ಯದಲ್ಲಿ ಈ ಬಾರಿ ಲೋಕಸಭೆಗಾಗಿ ಬಿಜೆಪಿ ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿದೆ. 22 ಕ್ಷೇತ್ರಗಳನ್ನು ನಾವು ಗೆಲ್ಲುವ ಮೂಲಕ ಕೇಂದ್ರದಲ್ಲಿ ಮೋದಿ ಅವರ ಕೈ ಬಲಪಡಿಸಬೇಕು. ಎಲ್ಲರೂ ಸೇರಿಕೊಂಡು ಕೆಲಸ ಮಾಡಬೇಕು,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ