ಆ್ಯಪ್ನಗರ

Kalaburagi News - ದ್ರಾಕ್ಷಿ ರೈತರಿಗೆ ತೋಟಗಾರಿಕೆ ಇಲಾಖೆಯಿಂದಲೇ ಮೋಸ: ಕಲಬುರಗಿ ರೈತರ ಆರೋಪ

ಸಬ್ಸಿಡಿಗೆ ಮೀಸಲಿರಿಸಿದ್ದ ಹಣ ಕೋವಿಡ್ ಸಂದರ್ಭದಲ್ಲಿ ಬೇರೆ ಕೆಲಸಕ್ಕೆ ಬಳಸಿಕೊಳ್ಳಲಾಗಿದೆ. ಸರ್ಕಾರದಲ್ಲೂ ದುಡ್ಡು ಇಲ್ಲ. ಈಗಾಗಿ ಸದ್ಯಕ್ಕೆ ಹಣ ಸಿಗೋದಿಲ್ಲ. ಹಣ ಬಂದ ತಕ್ಷಣ ಕೊಡುತ್ತೇವೆ ಅಂತ ಅಧಿಕಾರಿಗಳು ಉಢಾಪೆಯಾಗಿ ಮಾತನಾಡುತ್ತಿದ್ದಾರೆ ಎಂದು ರೈತರು ದೂರಿದ್ದಾರೆ. ಅಧಿಕಾರಿಗಳ ಈ ಮಾತಿನಿಂದ ಸಾಲ ಮಾಡಿ ದ್ರಾಕ್ಷಿ ಬೆಳೆದಿದ್ದ ರೈತರು ಕಂಗಾಲಾಗಿದ್ದಾರೆ. ಸಾಯುವ ಪರಿಸ್ಥಿತಿ ಬಂದಿದೆ ಅಂತ ಅಳಲು ತೋಡಿಕೊಳ್ಳುತ್ತಿದ್ದಾರೆ ದ್ರಾಕ್ಷಿ ಬೆಳೆದ ರೈತರು.

Edited byಚೇತನ್ ಓ.ಆರ್. | Vijaya Karnataka Web 3 Oct 2022, 7:55 pm
ಕಲಬುರಗಿ: ತೋಟಗಾರಿಕೆ ಇಲಾಖೆ ನಂಬಿದ ಅಫಜಲಪುರ ತಾಲೂಕಿನ ದ್ರಾಕ್ಷಿ ಬೆಳೆದ ರೈತರು ಕಂಗಾಲಾಗಿದ್ದಾರೆ. ಮೂರು ವರ್ಷಗಳಿಂದ ರೈತರಿಗೆ ಸಬ್ಸಿಡಿ ಹಣ ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಸಾಲ ಮಾಡಿ ದ್ರಾಕ್ಷಿ ಬೆಳೆದ ರೈತರು ಈಗ ಕಂಗಾಲಾಗಿದ್ದಾರೆ. ಹಾಗಾಗಿ, ಸಬ್ಸಿಡಿ ಹಣ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ.
Vijaya Karnataka Web grapes
ಸಾಂದರ್ಭಿಕ ಚಿತ್ರ

ಏನಿದು ಪ್ರಕರಣ?

ಮೂರು ವರ್ಷಗಳ ಹಿಂದೆ ಅಫಜಲಪೂರ ತಾಲೂಕಿನ ಮಾಶಾಳ್ ಗ್ರಾಮದ ರೈತರು ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಭರವಸೆಯಿಂದ ತಮ್ಮ ಹೊಲದಲ್ಲಿ ತಮ್ಮ ಸ್ವಂತ ಹಣ ಖರ್ಚು ಮಾಡಿ ದ್ರಾಕ್ಷಿ ಬೆಳೆ ಬೆಳೆದಿದ್ದರು. ಗ್ರಾಮದ ಸುಮಾರು 20ಕ್ಕೂ ಅಧಿಕ ರೈತರು ತಮ್ಮ ಹೊಲಗಳಲ್ಲಿ ದ್ರಾಕ್ಷಿ ಬೆಳೆದಿದ್ದಾರೆ. ಅದಕ್ಕೆ ಬೇಕಾದ ಹಣ ಸಾಲ ಮಾಡಿ ಹೊಲ ಅಭಿವೃದ್ಧಿ ಮಾಡಿಕೊಂಡಿದ್ದಾರೆ. ಅಫಜಲಪುರ ತೋಟಗಾರಿಕೆ ವಿಭಾಗದಿಂದ ನಿಮಗೆ ಸಾಲ ಸೌಲಭ್ಯ ಮಂಜೂರಾಗಿದೆ. ಅದರಲ್ಲಿ 3.50 ಲಕ್ಷ ದುಡ್ಡು ಸಬ್ಸಿಡಿ ಹಣ ಬರುತ್ತೆ ಅಂತ ಹೇಳಿದ ಮೇಲೆ ರೈತರು ದ್ರಾಕ್ಷಿ ಬೆಳೆ ಬೆಳೆದಿದ್ದರು. ಸಬ್ಸಿಡಿ ಹಣದಲ್ಲಿ ಒಂದು ಕಂತನ್ನು ಮಾತ್ರ (50 ಸಾವಿರ ರೂ.) ನೀಡಿದ್ದಾರೆ. ಉಳಿದ ಹಣ ಕೊಡಿ ಅಂದ್ರೆ ಕೊಡುತ್ತಿಲ್ಲ ಎಂದು ಹತಾಶರಾದ ರೈತರು ದೂರಿದ್ದಾರೆ.

ಕಲಬುರಗಿ ಬಿಜೆಪಿ ಮುಖಂಡ ಮಣಿಕಂಠ ರಾಥೋಡ 1 ವರ್ಷಗಳ ಕಾಲ ಗಡಿಪಾರು!
ಸಬ್ಸಿಡಿ ಬಾರದ್ದಕ್ಕೆ ಕೋವಿಡ್ ಕಾರಣ!

ಸಬ್ಸಿಡಿಗೆ ಮೀಸಲಿರಿಸಿದ್ದ ಹಣ ಕೋವಿಡ್ ಸಂದರ್ಭದಲ್ಲಿ ಬೇರೆ ಕೆಲಸಕ್ಕೆ ಬಳಸಿಕೊಳ್ಳಲಾಗಿದೆ. ಸರ್ಕಾರದಲ್ಲೂ ದುಡ್ಡು ಇಲ್ಲ. ಈಗಾಗಿ ಸದ್ಯಕ್ಕೆ ಹಣ ಸಿಗೋದಿಲ್ಲ. ಹಣ ಬಂದ ತಕ್ಷಣ ಕೊಡುತ್ತೇವೆ ಅಂತ ಅಧಿಕಾರಿಗಳು ಉಢಾಪೆಯಾಗಿ ಮಾತನಾಡುತ್ತಿದ್ದಾರೆ ಎಂದು ರೈತರು ದೂರಿದ್ದಾರೆ. ಅಧಿಕಾರಿಗಳ ಈ ಮಾತಿನಿಂದ ಸಾಲ ಮಾಡಿ ದ್ರಾಕ್ಷಿ ಬೆಳೆದಿದ್ದ ರೈತರು ಕಂಗಾಲಾಗಿದ್ದಾರೆ. ಸಾಯುವ ಪರಿಸ್ಥಿತಿ ಬಂದಿದೆ ಅಂತ ಅಳಲು ತೋಡಿಕೊಳ್ಳುತ್ತಿದ್ದಾರೆ.

ದ್ರಾಕ್ಷಿಗೆ ಬೆಲೆಯೇ ಬರಲಿಲ್ಲ!

ಇನ್ನು,ನಮ್ಮ ಹೊಲಗಳು ಮಡ್ಡಿ ಥರ ಇದ್ದುವು. ಅಂತಹ ಹೊಲಗಳನ್ನು ಅಧಿಕಾರಿಗಳ ಭರವಸೆಯಿಂದ ಅಭಿವೃದ್ಧಿ ಮಾಡಿ ದ್ರಾಕ್ಷಿ ಬೆಳೆದಿದ್ದೆವೆ. ಈ ಯೋಜನೆಯಲ್ಲಿ ಬೆಳೆಯಲಾದ ದ್ರಾಕ್ಷಿಯ ಮೊದಲ ಇಳುವರಿಯು ಕೋವಿಡ್ ಕಾಲದಲ್ಲೇ ಬಂದಿದ್ದರಿಂದ ಆಗ ದ್ರಾಕ್ಷಿಗೆ ಬೆಲೆ ಬರಲಿಲ್ಲ. ಈಗ ಕೂಡ ಬೆಲೆ ಇಲ್ಲ. ಜೊತೆಗೆ, ಸಬ್ಸಿಡಿ ಹಣ ಕೂಡ ಬಂದಿಲ್ಲ. ಹಾಗಾಗಿ, ತುಂಬಾ ನಷ್ಟದಲ್ಲಿದ್ದೇವೆ. ಪರಿಸ್ಥಿತಿಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ ಎಂದು ರೈತರು ತಮ್ಮ ಕಷ್ಟವನ್ನು ವಿವರಿಸಿದ್ದಾರೆ.

Kalaburagi News | ಓದಿದ್ದು ಎಂಟೆಕ್‌, ಬಿಟೆಕ್‌ ಆದ್ರೂ ಹಿಡಿದಿದ್ದು ಲಾಠಿ: ಸರಕಾರಿ ಕೆಲಸಕ್ಕೆ ಜೈ ಎನ್ನುತ್ತಿದ್ದಾರೆ ಇಂಜಿನಿಯರ್ ಗಳು
ಸಬ್ಸಿಡಿಯ ಮುಂದಿನ ಕಂತು ಬಜೆಟ್ ನಂತರ?

ಸಬ್ಸಿಡಿ ಬಗ್ಗೆ ಹೊಸ ಆಶಾವಾದ ಬಿತ್ತುತ್ತಿದ್ದಾರೆ ಅಧಿಕಾರಿಗಳು ಎಂದು ಕೆಲವು ರೈತರು ಹೇಳಿಕೊಂಡಿದ್ದಾರೆ. ‘’ಬಜೆಟ್ ಬಂದ ತಕ್ಷಣ ಕೋಡುತ್ತೇವೆ. ಸದ್ಯಕ್ಕೆ 10 ಸಾವಿರ ರೂ. ಮಾತ್ರ ಎರಡನೇ ಕಂತಿನ ರೂಪದಲ್ಲಿ ಕೊಡುತ್ತೇವೆ ಅಂತಾರೆ. ಹತ್ತು ಸಾವಿರದಲ್ಲಿ ನಾವು ಏನು ಮಾಡಬೇಕು ಎಂದು ರೈತರು ಪ್ರಶ್ನಿಸುತ್ತಾರೆ.
ಲೇಖಕರ ಬಗ್ಗೆ
ಚೇತನ್ ಓ.ಆರ್.
ಪ್ರಸ್ತುತ, ವಿಜಯ ಕರ್ನಾಟಕ ವೆಬ್ ನಲ್ಲಿ ಪತ್ರಕರ್ತನಾಗಿ 2022ರಿಂದ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2007ರಲ್ಲಿ ತುಮಕೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ 5ನೇ ರ‍್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಮೈಸೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಜಿಲ್ಲಾ ಸುದ್ದಿಗಳಿಂದ ಹಿಡಿದು ಕ್ರೀಡೆ, ದೇಶ- ವಿದೇಶ, ಸಿನಿಮಾ, ವಿಜ್ಞಾನ- ತಂತ್ರಜ್ಞಾನ ಇತ್ಯಾದಿ ವೈವಿಧ್ಯಯಮ ವಿಷಯಗಳ ಬಗ್ಗೆ ಬರೆಯುವ ಇವರಿಗೆ, ನಾನಾ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಈವರೆಗೆ 16 ವರ್ಷ ಕೆಲಸ ಮಾಡಿದ ಅನುಭವವಿದೆ. ಫೋಟೋಗ್ರಫಿ ಇವರ ಅಚ್ಚುಮೆಚ್ಚಿನ ಹವ್ಯಾಸ. ಸಿನಿಮಾ, ಸಾಕ್ಷ್ಯಚಿತ್ರ, ಸಾಹಿತ್ಯ, ವಿಡಿಯೋ ಸಂಕಲನ, ಪತ್ರಿಕೆ ಪುಟ ವಿನ್ಯಾಸ, ಹಾಡುಗಾರಿಕೆ, ಚಿತ್ರಕಲೆ, ಅನಿಮೇಶನ್, ಸಂಗೀತದಲ್ಲಿಯೂ ಆಸಕ್ತಿಯಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ