ಆ್ಯಪ್ನಗರ

ಕಲಬುರಗಿಯಲ್ಲಿ ಮತ್ತೊಂದು ಗುಜ್ಜರ್‌ ಕಿ ಶಾದಿ

ಗುಜ್ಜರ್‌ ಕಿ ಶಾದಿಯ ಕಬಂದ ಬಾಹುಗಳು ಜಿಲ್ಲೆಯಾದ್ಯಂತ ಇನ್ನೂ ಸಕ್ರಿಯವಾಗಿದ್ದು, ಇಂತಹ ಮತ್ತೊಂದು ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.

Vijaya Karnataka Web 22 Jun 2017, 8:06 am

ವೆಂಕಟೇಶ ಏಗನೂರು

Vijaya Karnataka Web gujjar marriege case in kalaburgi
ಕಲಬುರಗಿಯಲ್ಲಿ ಮತ್ತೊಂದು ಗುಜ್ಜರ್‌ ಕಿ ಶಾದಿ

ಕಲಬುರಗಿ: ಗುಜ್ಜರ್‌ ಕಿ ಶಾದಿಯ ಕಬಂದ ಬಾಹುಗಳು ಜಿಲ್ಲೆಯಾದ್ಯಂತ ಇನ್ನೂ ಸಕ್ರಿಯವಾಗಿದ್ದು, ಇಂತಹ ಮತ್ತೊಂದು ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.

ನಗರದ ಘಾಟಗೆ ಲೇ ಔಟ್‌ನಲ್ಲಿ ಈ ಪ್ರಕರಣ ನಡೆದಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ. ಕಟ್ಟಡ ನಿರ್ಮಾಣ ಕೆಲಸ ಮಾಡುವ ಕುಟುಂಬದ 17 ವರ್ಷದ ಯುವತಿಯನ್ನು ಗುಜರಾತಿನ ರಾಜಕೋಟ್‌ ಜಿಲ್ಲೆಯ ಮೋರ್‌ಬಿ ಮಾಲಿಯದ ರಂಜಾನ್‌ ಎಂಬ ಯುವಕನೊಂದಿಗೆ ನಾಲ್ಕು ತಿಂಗಳ ಹಿಂದೆ ಗುಜ್ಜರ್‌ ಕಿ ಶಾದಿ ನಡೆದಿತ್ತು.

*ವರನ ಕುಟುಂಬದ ಮಾಹಿತಿಯೇ ಇಲ್ಲ:

ವರನ ಕುಟುಂಬದ ಸಂಬಂಧಿಕರು ಎನ್ನಲಾದ ಕೆಲವರು ಯುವತಿಯ ಕುಟುಂಬವನ್ನು ಸಂಪರ್ಕಿಸಿ ಕಾರ್ಯಸಿದ್ಧಿ ಮಾಡಿಕೊಂಡಿದ್ದಾರೆ. ವರನ ಕಡೆಯವರೇ ಹಣ ಕೊಟ್ಟು ವಿವಾಹ ಮಾಡಿಕೊಳ್ಳುವುದರಿಂದ ಈ ಪ್ರಕರಣದಲ್ಲಿಯೂ ತಾಯಿ ಹಣ ಪಡೆದು ಮಗಳ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನತ್ತಾರೆ ಮನೆಯವರು.

ಕೇವಲ ಒಂದು ವಾರದಲ್ಲಿ ಮಾತುಕತೆ-ಮದುವೆ ನಡೆದು ಹೋಗಿದ್ದು, ಕುಟುಂಬದ ಸದಸ್ಯರಿಗೂ ರೂ. 50 ಸಾವಿರವೂ ನೀಡದೆ ದಲ್ಲಾಳಿಗಳೇ ಜೇಬು ಭರ್ತಿ ಮಾಡಿಕೊಂಡಿದ್ದಾರೆ. ಆದರೆ, ಬಾಲಕಿ ತಾಯಿಯೇ ಮದುವೆಯ ಖರ್ಚು ಮಾಡಿದ್ದಾಳೆ ಎಂದು ಮೂಲಗಳು ಹೇಳಿವೆ.

ಯುವತಿಯ ತಾಯಿ ಮೋರ್‌ ಬಿ ಮಾಲಿಯಾಗೆ ಹೋದಾಗ ಅಲ್ಲಿನ ಪರಿಸ್ಥಿತಿ ಕಂಡು ಆತಂಕಗೊಂಡಿದ್ದಾರೆ. ಮದುವೆಯಾದ ನಾಲ್ಕೇ ದಿನದಲ್ಲಿ ಮಗಳ ಕುತ್ತಿಗೆಯಿಂದ ತಾಳಿ ಕಿತ್ತೆಸೆಯಲಾಗಿದೆ ಎಂದು ಯುವತಿಯ ತಾಯಿ -ಜಾಫರಬಿ ದೂರುತ್ತಿದ್ದಾರೆ.

ಗಂಡು ಮಗು ಹಡೆಯಬೇಕು...!

ಮಗಳ ಮದುವೆಯ ನಂತರ ಆಕೆಯ ಮನೆಗೆ ಹೋದಾಗ ಅಲ್ಲಿನ ಚಿತ್ರಣ ತಾಯಿಗೆ ದಂಗು ಬಡಿಸಿದೆ. ಗಂಡುಮಗು ಹುಟ್ಟಿದರೆ ಮಾತ್ರ ಇಟ್ಟುಕೊಳ್ಳುತ್ತೇನೆ. ಹೆಣ್ಣಾದರೆ ಅದನ್ನು ಕೊಲ್ಲುತ್ತೇನೆ ಎಂದು ಅದಾಗಲೇ ಆಕೆಯ ವರಸೆ ಆರಂಭಿಸಿದ್ದಾನೆ. ತಮ್ಮ ಮಗಳಿಗೆ ನಿತ್ಯ ಹೊಡೆದು ದೈಹಿಕ ಹಿಂಸೆ ನೀಡಲಾಗುತ್ತಿದೆ ಎಂದು ತಾಯಿ ಗೋಗರೆಯುತ್ತಿದ್ದಾಳೆ.

ಹಬ್ಬಕ್ಕೂ ಕಳಿಸಲಿಲ್ಲ..

ಮಗಳನ್ನು ರಂಜಾನ್‌ ಹಬ್ಬಕ್ಕೆ ಕರೆತರಲು ತಾಯಿ ಇತ್ತೀಚೆಗೆ ಹೋಗಿದ್ದಾಗ ಮಗಳನ್ನು ಕಳಿಸಿಲ್ಲ. ಮೇಲಾಗಿ, ಮದುವೆ ಸಮಯದಲ್ಲಿ ಕೊಟ್ಟ ರೂ.50 ಸಾವಿರ ಮತ್ತು ಮದುವೆ ಖರ್ಚಿನ ಹಣ ನೀಡುವಂತೆ ತಾಕೀತು ಮಾಡುತ್ತಿದ್ದಾರೆ. ಮೇಲಾಗಿ, ಇತ್ತೀಚೆಗೆ ಖಾಲಿ ಹಾಳೆಯ ಮೇಲೆ ತಮ್ಮ ಮಗಳ ಒತ್ತಾಯ ಪೂರ್ವಕವಾಗಿ ತಮ್ಮ ಮಗಳ ಸಹಿ ಪಡೆದು ಕಿರುಕುಳ ನೀಡಲಾಗುತ್ತಿದೆ. ತಮ್ಮ ಮಗಳ ಜೀವಕ್ಕೆ ಅಪಾಯವಿದೆ ಎಂದು ತಾಯಿ ದುಃಖಿಸುತ್ತಾಳೆ.

ಮತ್ತೊಬ್ಬರು ಹೇಳಿದ ಮಾತು ಕೇಳಿ ಮದುವೆ ಮಾಡಿಕೊಟ್ಟಿದ್ದೇವೆ. ಮದುವೆಯಾದ ದಿನದಿಂದ ಮಗಳಿಗೆ ಕಿರುಕುಳ ಕೊಡುತ್ತಿದ್ದಾರೆ. ರೂ. 60 ಸಾವಿರ ಕೊಟ್ಟು ಮಗಳನ್ನು ಕರೆದುಕೊಂಡು ಹೋಗಿ ಎನ್ನುತ್ತಿದ್ದಾರೆ. ಹಣ ಎಲ್ಲಿಂದ ತರಲಿ? ನನ್ನ ಮಗಳು ಮನೆಗೆ ಬಂದರೆ ಸಾಕಾಗಿದೆ.

-ಜಾಫರಬಿ, ಯುವತಿಯ ತಾಯಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ