ಆ್ಯಪ್ನಗರ

ಏಷಿಯಾದಲ್ಲೇ ಗುಲ್ಬರ್ಗ ತೊಗರಿ ಮಾದರಿ

ಏಷ್ಯಾ ಖಂಡದಲ್ಲಿಯೇ ಗುಲ್ಬರ್ಗ ತೊಗರಿ ಮಾದರಿಯಾಗಿದೆ. ರೈತರು ಪ್ರಾದೇಶಿಕ ಹವಾಗುಣಕ್ಕೆ ಸೂಕ್ತ ತಳಿಗಳನ್ನು ಆಯ್ಕೆ ಮಾಡಿ ಉತ್ತಮ ಬೇಸಾಯ ವಿಧಾನಗಳನ್ನು ಅನುಸರಿಸಿ ಅತ್ಯುತ್ತಮ ಇಳುವರಿ ಪಡೆದುಕೊಳ್ಳಬೇಕು ಎಂದು ಕೇಂದ್ರದ ನಿವೃತ್ತ ಯೋಜನಾ ನಿರ್ದೇಶಕ ಡಾ. ಸುಹಾಸ್‌ ಯಲಶೆಟ್ಟಿ ಹೇಳಿದರು.

Vijaya Karnataka 6 Jun 2019, 5:00 am
ಕಲಬುರಗಿ :ಏಷ್ಯಾ ಖಂಡದಲ್ಲಿಯೇ ಗುಲ್ಬರ್ಗ ತೊಗರಿ ಮಾದರಿಯಾಗಿದೆ. ರೈತರು ಪ್ರಾದೇಶಿಕ ಹವಾಗುಣಕ್ಕೆ ಸೂಕ್ತ ತಳಿಗಳನ್ನು ಆಯ್ಕೆ ಮಾಡಿ ಉತ್ತಮ ಬೇಸಾಯ ವಿಧಾನಗಳನ್ನು ಅನುಸರಿಸಿ ಅತ್ಯುತ್ತಮ ಇಳುವರಿ ಪಡೆದುಕೊಳ್ಳಬೇಕು ಎಂದು ಕೇಂದ್ರದ ನಿವೃತ್ತ ಯೋಜನಾ ನಿರ್ದೇಶಕ ಡಾ. ಸುಹಾಸ್‌ ಯಲಶೆಟ್ಟಿ ಹೇಳಿದರು.
Vijaya Karnataka Web gulbarga is a model in asia
ಏಷಿಯಾದಲ್ಲೇ ಗುಲ್ಬರ್ಗ ತೊಗರಿ ಮಾದರಿ


ನಗರದ ಆಳಂದ ರಸ್ತೆಯಲ್ಲಿರುವ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ವಲಯ ಕೃಷಿ ಸಂಶೋಧನಾ ಕೇಂದ್ರ ಕಲಬುರಗಿ, ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಮುಂಗಾರು ಬೀಜ ದಿನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ತೊಗರಿ ಇಳುವರಿ ಹೆಚ್ಚು ಬರಲು ಹಲವು ಕೃಷಿ ತಂತ್ರಜ್ಞಾನದ ಬಳಕೆ ಮಾಡಬೇಕು. ಅಲ್ಲದೆ, ಹಲವು ಮಾದರಿಗಳು ಕೆಲವು ನಿರ್ಧಿಷ್ಟ ಪ್ರದೇಶದಲ್ಲಿ ಉತ್ತಮ ಇಳುವರಿ ನೀಡುತ್ತವೆ. ಇದನ್ನು ರೈತರು ಬಿತ್ತನೆ ಸಮಯದಲ್ಲಿ ಆಯ್ಕೆ ಮಾಡಿಕೊಳ್ಳಬೇಕು ಎಂದರು.

ಅತಿಥಿಯಾಗಿ ಆಗಮಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ರಾಜು ಜಿ. ತೆಗ್ಗಳ್ಳಿ ಮಾತನಾಡಿ, ತೊಗರಿ ಬೆಳೆಯ ವಿಸ್ತರಣೆ ಹೆಚ್ಚಾಗುತ್ತಿದ್ದು, ಇಳುವರಿ ಕೊಡಬಲ್ಲ ಉತ್ತಮ ತಳಿ, ಮಣ್ಣಿನ ಸೂಕ್ತತೆತೆಗೆ ತಕ್ಕಂತೆ ಬೆಳೆಯಲು ಸೂಚಿಸಿ, ಹೆಸರು, ಉದ್ದು, ತೊಗರಿ ಸಮಗ್ರ ಕೀಟ ನಿರ್ವಹಣಾ ಕ್ರಮಗಳ ಮಾಹಿತಿ ನೀಡಿದರು.

ಹಿರಿಯ ತಳಿ ವಿಜ್ಞಾನಿಗಳಾದ ಡಾ. ಮುನಿಸ್ವಾಮಿ ಮಾತನಾಡಿ, ಜಿ.ಆರ್‌.ಜಿ-811, ಟಿ.ಎಸ್‌-3ಆರ್‌ ತಳಿಯ ವೈಶಿಷ್ಟತೆಗಳು ಹಾಗೂ ಬೆಳೆಯ ಸಂದಿಗ್ಧ ಹಂತಗಳನ್ನು ತಿಳಿಸಿದರು.

ಸಸ್ಯರೋಗ ತಜ್ಞ ಡಾ. ಜಹೀರ ಅಹಮದ್‌ ಮಾತನಾಡಿ, ನೆಟೆ ಹಾಗೂ ಗೊಡ್ಡು ರೋಗ ನಿರೋಧಕ ತಳಿಯ ಉಪಯೋಗ, ಹವಾಮಾನ ವೈಪರೀತ್ಯದಿಂದ ಬರುವ ರೋಗಗಳು, ನಿರ್ವಹಣಾ ಮಾಹಿತಿ ನೀಡಿದರು.

ಅಧ್ಯಕ್ಷ ತೆ ವಹಿಸಿದ ಕೃಷಿ ವಿಜ್ಞಾನ ಕೇಂದ್ರದ ಪ್ರಧಾನ ವಿಜ್ಞಾನಿ ಡಾ. ಜೆ. ಆರ್‌ ಪಾಟೀಲ್‌ ಮಾತನಾಡಿ, ಮಳೆಯ ದಿನಗಳು ಇಂದಿನ ಬದಲಾಗುತ್ತಿರುವ ಹವಾಮಾನ ಸನ್ನಿವೇಶದಲ್ಲಿ ಬೆಳೆಯ ವಿವಿಧ ಹಂತಗಳನ್ನು ಪರಿಶೀಲಿಸಿ ಸೂಕ್ತ ನಿರ್ವಹಣಾ ಕ್ರಮ ಕೈಗೊಳ್ಳಲು ಸೂಚಿಸಿದರು.

ಬೀಜ ವಿಜ್ಞಾನಿಗಳಾದ ಡಾ. ಸಂಜೀವ್‌ ಬೆಲ್ಲದ್‌, ಬೀಜ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಲೋಕೇಶ ಬೀಜೋಪಚಾರದ ಮಾಹಿತಿ ನೀಡಿದರು. ಬೇಸಾಯ ತಜ್ಞ ಡಾ. ಯುಸುಫ ಅಲಿ, ಕೃಷಿ ಸಂಶೋಧನಾ ಕೇಂದ್ರದ ಕ್ಷೇತ್ರ ಅಧಿಕ್ಷ ಕ ಡಾ. ರಾಚಪ್ಪ ಹಾವೇರಿ ಇದ್ದರು. ಸುಮಾರು 350 ಕ್ಕೂ ಹೆಚ್ಚು ರೈತರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ