ಆ್ಯಪ್ನಗರ

ಗುಮುಲ್‌ ಆಡಳಿತ ಮಂಡಳಿ ವರ್ತನೆಗೆ ಖಂಡನೆ

ಬೀದರ್‌, ಕಲಬುರಗಿ, ಯಾದಗಿರಿ ಹಾಲು ಉತ್ಪಾದಕರ ಒಕ್ಕೂಟದ (ಗುಮುಲ್‌) ನೂತನ ವ್ಯವಸ್ಥಾಪಕ ನಿರ್ದೇಶಕ ವಿಶ್ವನಾಥ ಮಲಕೂಡ ಅವರು ಪದಗ್ರಹಣ ಮಾಡದಂತೆ ತಡೆಯುತ್ತಿರುವ ಆಡಳಿತ ಮಂಡಳಿಯ ವರ್ತನೆ ಖಂಡನೀಯ ಎಂದು ಜೆಡಿಎಸ್‌ ಟೀಕಿಸಿದೆ.

Vijaya Karnataka 1 Dec 2019, 9:21 pm
ಕಲಬುರಗಿ:ಬೀದರ್‌, ಕಲಬುರಗಿ, ಯಾದಗಿರಿ ಹಾಲು ಉತ್ಪಾದಕರ ಒಕ್ಕೂಟದ (ಗುಮುಲ್‌) ನೂತನ ವ್ಯವಸ್ಥಾಪಕ ನಿರ್ದೇಶಕ ವಿಶ್ವನಾಥ ಮಲಕೂಡ ಅವರು ಪದಗ್ರಹಣ ಮಾಡದಂತೆ ತಡೆಯುತ್ತಿರುವ ಆಡಳಿತ ಮಂಡಳಿಯ ವರ್ತನೆ ಖಂಡನೀಯ ಎಂದು ಜೆಡಿಎಸ್‌ ಟೀಕಿಸಿದೆ.
Vijaya Karnataka Web gumul condemns the conduct of the governing body
ಗುಮುಲ್‌ ಆಡಳಿತ ಮಂಡಳಿ ವರ್ತನೆಗೆ ಖಂಡನೆ


ಪಕ್ಷದ ಮಹಾ ಪ್ರಧಾನ ಕಾರ್ಯದರ್ಶಿ ಶಾಮರಾವ್‌ ಸೂರನ್‌ ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ರಾಜ್ಯ ಸರಕಾರದ ಆದೇಶವನ್ನು ಪಾಲಿಸಬೇಕೋ ಬೇಡವೋ ಎಂದು ಸಭೆ ಕರೆದು ಚರ್ಚಿಸುವ ಗುಮುಲ್‌ ಆಡಳಿತ ಮಂಡಳಿಯ ವರ್ತನೆ ಅಚ್ಚರಿ ಮೂಡಿಸುವಂತಿದೆ ಎಂದಿದ್ದಾರೆ.

ಹೈನೋದ್ಯಮದಲ್ಲಿತೊಡಗಿರುವ ರೈತರ ಹಿತ ಕಾಯುವ ನಿಟ್ಟಿನಲ್ಲಿಆಡಳಿತ ಮಂಡಳಿ ಮುತುವರ್ಜಿ ತೋರಬೇಕೆ ಹೊರತು; ಆಡಳಿತ ಮಂಡಳಿಗೆ ಅನುಕೂಲ ಎನಿಸುವ ವ್ಯಕ್ತಿಯನ್ನು ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯಲ್ಲಿಮುಂದುವರೆಯುವಂತೆ ನೋಡಿಕೊಳ್ಳುವುದು ಸರಿಯಲ್ಲ. ಇನ್ನಾದರೂ ಆಡಳಿತ ಮಂಡಳಿ ಉತ್ತಮ ಆಡಳಿತಗಾರ ಎಂದು ಗುರುಸಿಕೊಂಡಿರುವ ವಿಶ್ವನಾಥ ಮಲಕೂಡ ಅವರು ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯ ಪದಭಾರ ವಹಿಸಿಕೊಳ್ಳಲು ಅವಕಾಶ ಕಲ್ಪಿಸಬೇಕೆಂದು ಸೂರನ್‌ ಸಲಹೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ