ಆ್ಯಪ್ನಗರ

ಗುರು ಪೂರ್ಣಿಮೆ;ದರ್ಶನ ನೀಡಿದ ಮಾತಾಜಿ

ಗುರು ಪೂರ್ಣಿಮೆಯಂದು ತಾಲೂಕಿನ ಸುಕ್ಷೇತ್ರ ಯಾನಾಗುಂದಿ ಮಾಣಿಕ ಗಿರಿಯಲ್ಲಿ ಮಹಾಯೋಗಿನಿ ಮಾತಾ ಮಾಣಿಕೇಶ್ವರಿ ಅವರು ಶುಕ್ರವಾರ ಲಕ್ಷಾಂತರ ಭಕ್ತರಿಗೆ ದರ್ಶನ ನೀಡಿದರು.

Vijaya Karnataka 28 Jul 2018, 4:22 pm
ಸೇಡಂ : ಗುರು ಪೂರ್ಣಿಮೆಯಂದು ತಾಲೂಕಿನ ಸುಕ್ಷೇತ್ರ ಯಾನಾಗುಂದಿ ಮಾಣಿಕ ಗಿರಿಯಲ್ಲಿ ಮಹಾಯೋಗಿನಿ ಮಾತಾ ಮಾಣಿಕೇಶ್ವರಿ ಅವರು ಶುಕ್ರವಾರ ಲಕ್ಷಾಂತರ ಭಕ್ತರಿಗೆ ದರ್ಶನ ನೀಡಿದರು.
Vijaya Karnataka Web guru purnima mataji gave a walk
ಗುರು ಪೂರ್ಣಿಮೆ;ದರ್ಶನ ನೀಡಿದ ಮಾತಾಜಿ


ಮಾತಾಜಿಯವರ 85ನೇ ಜನ್ಮದಿನೋತ್ಸವ ಇರುವುದರಿಂದ ರಾಜ್ಯ ಮತ್ತು ಹೊರರಾಜ್ಯಗಳಿಂದ ಅಸಂಖ್ಯಾತ ಭಕ್ತರು ಆಗಮಿಸಿ, ಮಾತಾಜಿಯವರ ದರ್ಶನ ಪಡೆದು ಪುನೀತರಾದರು. ಮಾತಾಜಿ ದರ್ಶನ ನೀಡುತ್ತಾರೆಂಬ ಖಚಿತ ಮಾಹಿತಿ ಇರುವುದರಿಂದ ಬೆಳಗ್ಗೆಯಿಂದಲೇ ಭಕ್ತರು ತಂಡೋಪತಂಡವಾಗಿ ಸುಕ್ಷೇತ್ರ ಯಾನಾಗುಂದಿಗೆ ಆಗಮಿಸಿ, ಭಕ್ತಿ, ಭಜನೆ, ಪೂಜೆ ಪುನಸ್ಕಾರದಲ್ಲಿ ತೊಡಗಿದ್ದರು. ಓಂ ನಮ: ಶಿವಾಯ ಮಂತ್ರ ಮತ್ತು ಮಾತಾಜಿ ಹೆಸರಿನ ಜಯಘೋಷಗಳು ಮೊಳಗಿದವು. ಪಾದಪೂಜೆ ಮತ್ತು ವಿಶೇಷ ಪೂಜೆಗಳು, ಅನ್ನದಾಸೋಹ, ಪ್ರಸಾದ ವಿತರಣೆ ಜರುಗಿದವು. ಮಾತಾಜಿಯವರ ದರ್ಶನಕ್ಕಾಗಿ ಅಸಂಖ್ಯಾತ ಭಕ್ತರು ಸಮಾವೇಶಗೊಂಡರು.

ಮಧ್ಯಾಹ್ನ 2.30ಕ್ಕೆ ಗವಿಯಿಂದ ಮಾತಾಜಿ ಆಗಮಿಸಿ ಮಧ್ಯಾಹ್ನ 2-55ರವರೆಗೆ, ಅಂದರೆ ಸುಮಾರು 25 ನಿಮಿಷಗಳ ಕಾಲ ಭಕ್ತರಿಗೆ ದಿವ್ಯ ದರ್ಶನ ನೀಡಿದರು.

ಟ್ರಸ್ಟ್‌ ಕಾರ್ಯದರ್ಶಿ ಶಿವಯ್ಯ ಸ್ವಾಮಿ, ಜಯಶ್ರೀ ಮಾತಾಜಿ, ಅಮೀನಾಬೇಗಂ, ನಿವೃತ್ತ ಡಿವೈಎಸ್‌ಪಿ ಸಿದ್ರಾಮಪ್ಪ ಸಣ್ಣೂರ, ಅನ್ನ ದಾಸೋಹಿ ಜಿ.ರಮೇಶ, ಕೋಲಿ ಸಮಾಜ ರಾಜ್ಯ ಗೌರವಾಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರ, ಪ್ರಮುಖರಾದ ಶಂಕ್ರಣ್ಣ ವಣಿಕ್ಯಾಳ, ಪರ್ವತರೆಡ್ಡಿ ಪಾಟೀಲ ನಾಮವಾರ, ಮೌಲಾಲಿ ಅನಪೂರ, ಮಂದಾರಾಯ್ಯ, ಶಿವರಾಮ, ನಾರಾಯಣರೆಡ್ಡಿ, ಗೌರಯ್ಯ ಚಾರ್ಯ,ಯಾದಯ್ಯ, ಸುಭಾಶ, ಡಾ. ದಿಗಂಬರ, ಡಾ. ದೇವ ಸುಧಾಕರ್‌, ಅರುಣ ವಾರದ, ವೀರಾಚಾರ್ಯ ಹೈದ್ರಾಬಾದ, ಬಾಲ ದೇಶಪಾಂಡೆ, ಸುನಿತಾ ತಳವಾರ, ರವೀಂದ್ರ ಕೊಂತನಪಲ್ಲಿ, ಶರಣಪ್ಪ ಎಳ್ಳಿ, ರುದ್ರು ಪಿಲ್ಲಿ, ಮಹಾದೇವ ಗೋಣಿ, ಬಸವರಾಜ ಹೊಸಮನಿ ಮುಂತಾದವರು ಮಾತಾಜಿ ದರ್ಶನಪಡೆದು ಪುನೀತರಾದರು.

ಬಿಗಿಬಂದೋಬಸ್ತ್‌: ಡಿವೈಎಸ್ಪಿ ಶರಣಪ್ಪ ಅವರ ನೇತೃತ್ವದಲ್ಲಿ ಬಿಗಿಬಂದೋಬಸ್ತ್‌ ಮಾಡಲಾಗಿತ್ತು. ಸಿಪಿಐ ವೀರೇಂದ್ರ ಪಾಟೀಲ, ಪಂಚಾಕ್ಷ ರಿ ಸಾಲಿಮಠ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ