ಆ್ಯಪ್ನಗರ

ಸರಕಾರ ಉಳಿವಿಗೆ ದೀಡ್‌ ನಮಸ್ಕಾರ

ಪತನದ ಅಂಚಿನಲ್ಲಿರುವ ರಾಜ್ಯದ ಸಮ್ಮಿಶ್ರ ಸರಕಾರವನ್ನು ಹೇಗಾದರೂ ಮಾಡಿ ಕಾಪಾಡಪ್ಪ ದೇವರೇ... ನಮ್ಮ ಜೆಡಿಎಸ್‌ ಪಕ್ಷದ ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರದಲ್ಲಿರಲಿ ಎಂದು ಜೇವರ್ಗಿ ಜೆಡಿಎಸ್‌ ಘಟಕದ ಕಾರ್ಯಕರ್ತರಾದ ಚಂದ್ರಶೇಖರ ಚನ್ನಮಲ್ಲಯ್ಯ ಹಿರೇಮಠ ಮತ್ತು ಬಸವರಾಜು ಕುಮ್ಮಣ್ಣ ಕೋಳಕೂರ ಅವರು ಗರುವಾರ ಶರಣಬಸವೇಶ್ವರ ದೇವಸ್ಥಾನದಲ್ಲಿ ದೀಡ್‌ ನಮಸ್ಕಾರ ಹಾಕಿ ಪ್ರಾರ್ಥನೆ ಸಲ್ಲಿಸಿದರು.

Vijaya Karnataka 20 Jul 2019, 5:55 pm
ಕಲಬುರಗಿ :ಪತನದ ಅಂಚಿನಲ್ಲಿರುವ ರಾಜ್ಯದ ಸಮ್ಮಿಶ್ರ ಸರಕಾರವನ್ನು ಹೇಗಾದರೂ ಮಾಡಿ ಕಾಪಾಡಪ್ಪ ದೇವರೇ... ನಮ್ಮ ಜೆಡಿಎಸ್‌ ಪಕ್ಷದ ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರದಲ್ಲಿರಲಿ ಎಂದು ಜೇವರ್ಗಿ ಜೆಡಿಎಸ್‌ ಘಟಕದ ಕಾರ್ಯಕರ್ತರಾದ ಚಂದ್ರಶೇಖರ ಚನ್ನಮಲ್ಲಯ್ಯ ಹಿರೇಮಠ ಮತ್ತು ಬಸವರಾಜು ಕುಮ್ಮಣ್ಣ ಕೋಳಕೂರ ಅವರು ಗರುವಾರ ಶರಣಬಸವೇಶ್ವರ ದೇವಸ್ಥಾನದಲ್ಲಿ ದೀಡ್‌ ನಮಸ್ಕಾರ ಹಾಕಿ ಪ್ರಾರ್ಥನೆ ಸಲ್ಲಿಸಿದರು.
Vijaya Karnataka Web hello to the survival of the government
ಸರಕಾರ ಉಳಿವಿಗೆ ದೀಡ್‌ ನಮಸ್ಕಾರ


ಕುಮಾರಸ್ವಾಮಿ ನೇತೃತ್ವ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ಮೇಲೆ ರೈತರ ಸಾಲ ಮನ್ನಾ ಮಾಡಿದ್ದಾರೆ. ಹಲವಾರು ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಹೈದ್ರಾಬಾದ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಸಾವಿರಾರು ಕೋಟಿ ರೂ. ಅನುದಾನ ನೀಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಬಿಜೆಪಿಯ ಕುತಂತ್ರದಿಂದ ಶಾಸಕರ ರಾಜೀನಾಮೆ ಕೊಡಿಸಿ ಸರಕಾರ ಬೀಳಿಸಲು ಯತ್ನಿಸಿರುವ ಕಾರ್ಯ ಯಶಸ್ವಿಯಾಗದಂತೆ ಮಾಡು ದೇವರೇ ಎಂದು ಪ್ರಾರ್ಥನೆ ಮಾಡಿದರು.

ಈ ವೇಳೆಯಲ್ಲಿ ಚನಮಲ್ಲಯ್ಯ ಹಿರೇಮಠ, ಮಲ್ಕಣ್ಣ ಜನಿವಾರ, ಅಮೃತ ಪೂಜಾರಿ, ವಿಜಯಕುಮಾರ ಹಿರೇಮಠ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ