ಆ್ಯಪ್ನಗರ

ಹೆಲ್ಮೆಟ್‌ ಇದ್ರೆ ಮಾತ್ರ ಪೆಟ್ರೋಲ್‌, ಅಭಿಯಾನ ಇಂದಿನಿಂದ

ಬೈಕ್‌ ಸವಾರರ ಅಮೂಲ್ಯ ಪ್ರಾಣ ರಕ್ಷಣೆಗೆ ಒತ್ತು ನೀಡುವ ಭಾಗವಾಗಿ ಹೆಲ್ಮೆಟ್‌ ಧರಿಸದೆ ಬರುವ ವ್ಯಕ್ತಿಗಳ ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್‌ ಬಂಕ್‌ಗಳಲ್ಲಿಪೆಟ್ರೋಲ್‌ ಹಾಕಬಾರದು ಎಂದು ಕಲಬುರಗಿ ಪೊಲೀಸ್‌ ಕಮಿಷನರ್‌ ಎಂ.ಎನ್‌.ನಾಗರಾಜ ನಿರ್ದೇಶನ ನೀಡಿದರು.

Vijaya Karnataka 22 Sep 2019, 5:00 am
ಕಲಬುರಗಿ:ಬೈಕ್‌ ಸವಾರರ ಅಮೂಲ್ಯ ಪ್ರಾಣ ರಕ್ಷಣೆಗೆ ಒತ್ತು ನೀಡುವ ಭಾಗವಾಗಿ ಹೆಲ್ಮೆಟ್‌ ಧರಿಸದೆ ಬರುವ ವ್ಯಕ್ತಿಗಳ ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್‌ ಬಂಕ್‌ಗಳಲ್ಲಿಪೆಟ್ರೋಲ್‌ ಹಾಕಬಾರದು ಎಂದು ಕಲಬುರಗಿ ಪೊಲೀಸ್‌ ಕಮಿಷನರ್‌ ಎಂ.ಎನ್‌.ನಾಗರಾಜ ನಿರ್ದೇಶನ ನೀಡಿದರು.
Vijaya Karnataka Web helmetis the only petrol campaign from today
ಹೆಲ್ಮೆಟ್‌ ಇದ್ರೆ ಮಾತ್ರ ಪೆಟ್ರೋಲ್‌, ಅಭಿಯಾನ ಇಂದಿನಿಂದ


ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿಶನಿವಾರ ಸಂಜೆ ಪೆಟ್ರೋಲ್‌ ಬಂಕ್‌ ಮಾಲೀಕರ ಸಭೆಯಲ್ಲಿಮಾತನಾಡಿದ ಅವರು, ಮುಂದಿನ ವಾರದಿಂದ ಈ ನಿಯಮವನ್ನು ಕಡ್ಡಾಯವಾಗಿ ಜಾರಿಗೆ ತರಲಾಗುವುದು. ಹೀಗಾಗಿ, ಆರಂಭಿಕ ಹಂತದಲ್ಲಿಹೆಲ್ಮೆಟ್‌ ಧರಿಸದೆ ಬೈಕ್‌ ಸವಾರಿ ಮಾಡುವ ವ್ಯಕ್ತಿಗಳಿಗೆ ಮೊದಲು ಜಾಗೃತಿ ಮೂಡಿಸುವ ಕೆಲಸವನ್ನು ಬಂಕ್‌ ಮಾಲೀಕರು ಮಾಡಬೇಕು. ಅದರಲ್ಲೂ, ಮನಸ್ಸಿಗೆ ನಾಟುವಂತೆ ಜಾಗೃತಿ ಮೂಡಿಸಲು ಬೈಕ್‌ ಸವಾರರಿಗೆ ಒಂದೆರಡು ಬಾರಿ ಹೂ ಕೊಟ್ಟು ಅರಿವು ಮೂಡಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿಪೆಟ್ರೋಲ್‌ ಬಂಕ್‌ ಮಾಲೀಕರು ಪೊಲೀಸ್‌ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಕಮಿಷನರ್‌ ನಾಗರಾಜ ಮನವಿ ಮಾಡಿದರು.

ಇಂಥದ್ದೊಂದು ನಿಯವವನ್ನು ಈಗಾಗಲೇ ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿಪೆಟ್ರೋಲ್‌ ಬಂಕ್‌ ಮಾಲೀಕರು ಸಾಮಾಜಿಕ ಹೊಣೆಗಾರಿಕೆ ಎಂಬಂತೆ ನಿಭಯಿಸುತ್ತಿದ್ದಾರೆ. ಇಂಥದ್ದೇ ನೈತಿಕ ಹೊಣೆಗಾರಿಕೆಯನ್ನು ಕಲಬುರಗಿ ನಗರದ ಬಂಕ್‌ ಮಾಲೀಕರು ಸಹ ಪ್ರದರ್ಶಿಸಬೇಕೆಂದು ಅವರು ಮನವಿ ಮಾಡಿದರು.

ಡಿಸಿಪಿ ಕಿಶೋರ್‌ಬಾಬು ಸೇರಿದಂತೆ ಸಂಚಾರಿ ಪೊಲೀಸ್‌ ಠಾಣೆಗಳ ಪೊಲೀಸ್‌ ಅಧಿಕಾರಿಗಳು, ನಗರದ ಎಲ್ಲಪೆಟ್ರೋಲ್‌ ಬಂಕ್‌ಗಳ ಮಾಲೀಕರು ಹಾಗೂ ನಿರ್ವಾಹಕರು ಸಭೆಯಲ್ಲಿಪಾಲ್ಗೊಂಡಿದ್ದರು.

ಹಂತ ಹಂತವಾಗಿ ಅನುಷ್ಠಾನಕ್ಕೆ


ಕಲಬುರಗಿ ನಗರದಲ್ಲಿಸಂಚಾರಿ ಸಿಗ್ನಲ್‌ಗಳನ್ನು ಪರಿಣಾಮಕಾರಿಯಾಗಿ ಬಳಕೆ ಮಾಡುವ ನಿಟ್ಟಿನಲ್ಲಿಹಂತ ಹಂತವಾಗಿ ಕಾರ್ಯಯೋಜನೆ ರೂಪಿಸಲಾಗುವುದು ಎಂದು ಪೊಲೀಸ್‌ ಕಮಿಷನರ್‌ ಎಂ.ಎನ್‌.ನಾಗರಾಜ ಭರವಸೆ ನೀಡಿದರು.

ಪೆಟ್ರೋಲ್‌ ಬಂಕ್‌ ಮಾಲೀಕರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟಾರೆ ಜನರ ಪ್ರಾಣರಕ್ಷಣೆಯೇ ಪೊಲೀಸ್‌ ಇಲಾಖೆಯ ಮೊದಲ ಆದ್ಯತೆ ಎಂದರು.

ಸಂಚಾರಿ ಸಿಗ್ನಲ್‌ಗಳಲ್ಲಿಕೇವಲ ವಾಹನ ಸವಾರರು ಸುಗಮವಾಗಿ ಹಾದು ಹೋಗಲು ಅನುಕೂಲ ಮಾಡಿಕೊಡಲಾಗುತ್ತಿದೆಯೇ ಹೊರತು; ಪಾದಚಾರಿಗಳ ಹಿತ ಕಾಪಾಡುವ ಕೆಲಸ ಆಗುತ್ತಿಲ್ಲಎಂಬ ಸುದ್ದಿಗಾರರ ಪ್ರಶ್ನೆಗೆ ಅವರು ಸಹನೆಯಿಂದ ಪ್ರತಿಕ್ರಿಯಿಸಿದರು. ತಾವು ನಗರಕ್ಕೆ ಬಂದು ಕೇವಲ 9 ದಿನಗಳಾಗಿವೆ. ಹೀಗಾಗಿ, ಎಲ್ಲವನ್ನೂ ಖುದ್ದಾಗಿ ಪರಿಶೀಲಿಸಿದ ಬಳಿಕ ಒಂದೊಂದಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ವಾಗ್ದಾನ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ