ಆ್ಯಪ್ನಗರ

ಮೊದಲ ವಿಮಾನ ಹಾರಾಟ ನ.22ರಿಂದ

ಇಲ್ಲಿನ ಬಹುನಿರೀಕ್ಷಿತ ಕಲಬುರಗಿ ಏರ್‌ಪೋರ್ಟ್‌ ಕಾರ್ಯಾರಂಭಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಇದಕ್ಕೆ ಪೂರಕವಾಗಿ ಮಂಗಳವಾರ ಇಂಟರ್‌ ನ್ಯಾಷನಲ್‌ ಏರ್‌ ಟ್ರಾನ್ಸ್‌ಪೋರ್ಟ್‌ ಅಸೋಸಿಯೇಷನ್‌ (ಐಎಟಿಎ) ಅನುಮತಿ ಸಹ ಲಭಿಸಿದೆ.

Vijaya Karnataka 14 Nov 2019, 5:00 am
ವಿಕ ವಿಶೇಷ ಕಲಬುರಗಿ:ಇಲ್ಲಿನ ಬಹುನಿರೀಕ್ಷಿತ ಕಲಬುರಗಿ ಏರ್‌ಪೋರ್ಟ್‌ ಕಾರ್ಯಾರಂಭಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಇದಕ್ಕೆ ಪೂರಕವಾಗಿ ಮಂಗಳವಾರ ಇಂಟರ್‌ ನ್ಯಾಷನಲ್‌ ಏರ್‌ ಟ್ರಾನ್ಸ್‌ಪೋರ್ಟ್‌ ಅಸೋಸಿಯೇಷನ್‌ (ಐಎಟಿಎ) ಅನುಮತಿ ಸಹ ಲಭಿಸಿದೆ.
Vijaya Karnataka Web iata license granted for commercial flight
ಮೊದಲ ವಿಮಾನ ಹಾರಾಟ ನ.22ರಿಂದ


ಜಗತ್ತಿನ 117 ರಾಷ್ಟ್ರಗಳ ಸದಸ್ಯತ್ವ ಹೊಂದಿರುವ ಈ ಅಸೋಸಿಯೇಷನ್‌ 290 ವೈಮಾನಿಕ ಸಂಸ್ಥೆಗಳ ಕಾರ್ಯ ನಿರ್ವಹಣೆಯ ಮೇಲೆ ತನ್ನ ನಿಗಾ ಇರಿಸುತ್ತದೆ. ಮೇಲಾಗಿ, ಪ್ರಯಾಣಿಕರ ಸಾಗಣೆ ಜೊತೆಗೆ ಕೈಗಾರಿಕಾ ನೀತಿ ಮತ್ತು ಅವುಗಳ ಗುಣಮಟ್ಟ ಹೇಗಿರಬೇಕು ಎಂಬುದನ್ನು ನಿರ್ಧರಿಸುತ್ತದೆ. ಹೀಗಾಗಿ, ಕಮರ್ಷಿಯಲ್‌ ಹಾರಾಟಕ್ಕೆ ಅಗತ್ಯವಿರುವ ಸಂಪೂರ್ಣ ಅನುಮತಿ ಕಲಬುರಗಿ ಏರ್‌ಪೋರ್ಟಿಗೆ ಲಭಿಸಿದಂತಾಗಿದೆ.

ಮೊದಲ ಹಾರಾಟ 22ಕ್ಕೆ

ಈ ಮಧ್ಯೆ, ಕಲಬುರಗಿ ಏರ್‌ಪೋರ್ಟ್‌ನಿಂದ ಇದೇ ನ.22ರಿಂದ ವೈಮಾನಿಕ ಹಾರಾಟ ಅಧಿಕೃತವಾಗಿ ಆರಂಭಗೊಳ್ಳಲಿದ್ದು, ಈ ನಿಟ್ಟಿನಲ್ಲಿಸ್ಟಾರ್‌ ಎಂಬ್ರರ್‌ ಇಆರ್‌ ಜಿ-145 ವಿಮಾನ ಆರಂಭಿಕ 150 ಪ್ರಯಾಣಿಕರಿಗೆ ಆನ್‌ಲೈನ್‌ ಮೂಲಕ ಟಿಕೆಟ್‌ಗಳನ್ನು ಒದಗಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಈ ಪೈಕಿ ಕಲಬುರಗಿ ಸಂಸದ ಡಾ.ಉಮೇಶ್‌ ಜಾಧವ, ಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಸಿ.ಪಾಟೀಲ್‌ ಮೊದಲ ದಿನದ ಪ್ರಯಾಣದ ಖುಷಿ ಅನುಭವಿಸಲು ಈಗಾಗಲೇ ತಮ್ಮ ಪಾಲಿನ ಟಿಕೆಟ್‌ಗಳನ್ನು ಖರೀಸಿದ್ದಾರೆ.

ನ.22ರಂದು ಮಧ್ಯಾಹ್ನ 12.20ಕ್ಕೆ ಬೆಂಗಳೂರಿನಿಂದ ಹಾರಾಟ ಆರಂಭಿಸುವ ವಿಮಾನ ಮಧ್ಯಾಹ್ನ 1.35ಕ್ಕೆ ಕಲಬುರಗಿ ಏರ್‌ಪೋರ್ಟ್‌ ತಲುಪಲಿದೆ. ಪುನಃ ಮಧ್ಯಾಹ್ನ 1.55 ಕಲಬುರಗಿಯಿಂದ ಟೇಕಾಫ್‌ ಆಗುವ ವಿಮಾನ ಮಧ್ಯಾಹ್ನ 3ಕ್ಕೆ ಬೆಂಗಳೂರು ತಲುಪಲಿದೆ. ಆರಂಭದಲ್ಲಿಕೇವಲ ವಾರದಲ್ಲಿಮೂರು ಬಾರಿ ಮಾತ್ರ ವಿಮಾನ ಹಾರಾಟ ನಡೆಯಲಿದ್ದು, ಮುಂಬರುವ ದಿನಗಳಲ್ಲಿನಿತ್ಯ ಹಾರಾಟ ಆರಂಭಗೊಳ್ಳಲಿದೆ.

ಇನ್ನು ಆರಂಭಿಕ ಸಂತಸದ ಕ್ಷಣಗಳನ್ನು ಅನುಭವಿಸಲು ಇಚ್ಛಿಸುವವರೇ ಹೆಚ್ಚಾಗಿ ಸದ್ಯಕ್ಕೆ ಟಿಕೆಟ್‌ ಬುಕಿಂಗ್‌ ಕೈಗೊಂಡಿದ್ದು, ಮೊದಲ ದಿನದ ಹಾರಾಟಕಕ್ಕಾಗಿ ಸುಮಾರು ರೂ.5000 ದಿಂದ 6000ವರೆಗೆ ಟಿಕೆಟ್‌ ಮಾರಾಟಗೊಂಡಿವೆ. ಇನ್ನೊಂದೆಡೆ, ವಾಪಸ್‌ (ಡೌನ್‌ ) ಪ್ರಯಾಣದ ಗರಿಷ್ಠ ದರ ರೂ.8000ವರೆಗೆ ತಲುಪಿದೆ ಎಂದು ಹೇಳಲಾಗಿದೆ.

ನೋ ಪ್ರಾಬ್ಲಂ ನಾವಿದ್ದೀವಿ ಎಂದ ಎಚ್‌ಕೆಸಿಸಿಐ

ಕಲಬುರಗಿ ಏರ್‌ಪೋರ್ಟ್‌ನಿಂದ ವಿಮಾನ ಹಾರಾಟ ಆರಂಭಿಸುವ ಸ್ಟಾರ್‌ ಎಂಬ್ರಾರ್‌ ಇಆರ್‌ಜಿ-145 ವಿಮಾನದ ಮೂಲಕ ಬೆಂಗಳೂರು ಮತ್ತು ಕಲಬುರಗಿ ಮಧ್ಯೆ ಪ್ರಯಾಣಕ್ಕಾಗಿ ಮುಂದಿನ ಮೂರು ತಿಂಗಳ ಅವಧಿಗೆ ಗರಿಷ್ಠ ಟಿಕೆಟ್‌ಗಳನ್ನು ಖರೀದಿಸುವುದಾಗಿ ಎಚ್‌ಕೆಸಿಸಿಐ ಭರವಸೆ ನೀಡಿದೆ.

ಈ ಕುರಿತು ಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಸಿ.ಪಾಟೀಲ್‌ ಅವರು ವಿಜಯ ಕರ್ನಾಟಕ ಪ್ರತಿನಿಧಿಯೊಂದಿಗೆ ಮಾತನಾಡಿ, ಆರಂಭಿಕ ದಿನಗಳಲ್ಲಿಪ್ರಯಾಣಿಕರ ಕೊರತೆ ಕಾಡಬಹುದು ಎಂಬ ಭೀತಿ ವಿಮಾನ ಸಂಸ್ಥೆಗೆ ಸಹಜವಾಗಿಯೇ ಕಾಡಿದ್ದಿದೆ. ಹೀಗಾಗಿ, ಎಚ್‌ಕೆಸಿಸಿಐ ವತಿಯಿಂದ ಪ್ರತಿ ಪ್ರಯಾಣಕ್ಕೆ ಗರಿಷ್ಠ ಟಿಕೆಟ್‌ ಖರೀದಿಸುವ ಭರವಸೆ ನೀಡಿರುವುದಾಗಿ ಹೇಳಿದರು.

ಕಲಬುರಗಿ ಮತ್ತು ಬೆಂಗಳೂರು ಮಧ್ಯೆ ನಿತ್ಯ ಸಾಕಷ್ಟು ಸಂಖ್ಯೆಯ ಉದ್ಯಮಿಗಳು, ಹಿರಿಯ ಬ್ಯಾಂಕ್‌ ಅಧಿಕಾರಿಗಳು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಹಿರಿಯ ಸರಕಾರಿ ಅಧಿಕಾರಿಗಳು ಹೆಚ್ಚು ಪ್ರಯಾಣಿಸುತ್ತಾರೆ. ಹೀಗಾಗಿ, ಪ್ರಯಾಣಿಕರ ಅಭಾವ ಕಾಡುವುದು ಸಾಧ್ಯವಿಲ್ಲ. ಆದರೆ, ವಿಮಾನಯಾನ ಸಂಸ್ಥೆಗಳು ಆದಷ್ಟು ಬೆಳಗ್ಗೆ ಮತ್ತು ಸಂಜೆ ಹೊತ್ತಿಗೆ ವಿಮಾನ ಹಾರಾಟ ನಡೆಸುವುದಕ್ಕೆ ಒತ್ತು ನೀಡಬೇಕು. ಈಗಿನ ಲೆಕ್ಕಾಚಾರದಲ್ಲಿಮಧ್ಯಾಹ್ನ 2ಕ್ಕೆ ಕಲಬುರಗಿಯಿಂದ ಹೊರಟು 3.30ರ ಹೊತ್ತಿಗೆ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲಪಿದರೂ, ಬೆಂಗಳೂರು ಸಿಟಿ ತಲುಪಲು ಪುನಃ ಒಂದು ತಾಸು ಬೇಕಾಗುತ್ತದೆ. ಈ ಹೊತ್ತಿಗಾಗಲೇ ಸರಕಾರಿ ಕಚೇರಿಗಳ ಸಮಯ ಭಾಗಶಃ ಮುಗಿಯುವ ಹಂತಕ್ಕೆ ಬಂದಿರುತ್ತದೆ. ಈ ನಿಟ್ಟಿನಲ್ಲಿವಿಮಾನ ಯಾನ ಸಂಸ್ಥೆಗಳು ಯೋಚಿಸಬೇಕಿದೆ ಎಂದು ಪಾಟೀಲ್‌ ಸಲಹೆ ನೀಡುತ್ತಾರೆ.

ಕಲಬುರಗಿ ವಿಮಾನ ನಿಲ್ದಾಣದ ಕಾರ್ಯಾಚರಣೆಯಿಂದ ಉದ್ಯಮಗಳ ಬೆಳವಣಿಗೆಗೆ ಸಾಕಷ್ಟು ಅನುಕೂಲ ಆಗುತ್ತದೆ. ಮೇಲಾಗಿ, ಉದ್ಯಮಿಗಳು, ಹಿರಿಯ ಸರಕಾರಿ ಅಧಿಕಾರಿಗಳು, ಬ್ಯಾಂಕ್‌ ಮತ್ತು ಇತರ ಹಣಕಾಸು ಸಂಸ್ಥೆಗಳ ಮುಖ್ಯಸ್ಥರು ಸಮಯಕ್ಕೆ ಹೆಚ್ಚು ಮಹತ್ವ ನೀಡಬೇಕಾಗುತ್ತದೆ. ಈ ನಿಟ್ಟಿನಲ್ಲಿಕಲಬುರಗಿ ಏರ್‌ಪೋರ್ಟ್‌ ಸಾಕಷ್ಟು ಅನುಕೂಲಕ್ಕೆ ಹಾದಿ ಮಾಡಲಿದೆ.

-ಉಮಾಕಾಂತ ನಿಗ್ಗುಡಗಿ, ಮಾಜಿ ಅಧ್ಯಕ್ಷರು, ಎಚ್‌ಕೆಸಿಸಿಐ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ