ಆ್ಯಪ್ನಗರ

ಸಂಘಟಿತ ಕಾರ್ಯ ಯಶಸ್ಸಿಗೆ ಕಾರಣ

ಪೊಲೀಸ್‌ ಇಲಾಖೆಯ ಇಡೀ ಸಿಬ್ಬಂದಿಯ ಸಂಘಟಿತ ಕಾರ್ಯದಿಂದಲೇ ಒಂದು ಅತ್ಯುತ್ತಮ ಯಶಸ್ಸು ಗಳಿಸುವುದು ಸಾಧ್ಯವಾಗುತ್ತದೆಯೇ ಹೊರತು; ಕೇವಲ ಮೇಲಧಿಕಾರಿಗಳೇ ಎಂದು ಭಾವಿಸುವಂತಿಲ್ಲ ಎಂದು ವರ್ಗಾವಣೆಗೊಂಡಿರುವ ಈಶಾನ್ಯ ವಲಯ ಐಜಿಪಿ ಮುರುಗನ್‌ ನುಡಿದರು.

Vijaya Karnataka 8 Aug 2018, 5:49 pm
ಕಲಬುರಗಿ : ಪೊಲೀಸ್‌ ಇಲಾಖೆಯ ಇಡೀ ಸಿಬ್ಬಂದಿಯ ಸಂಘಟಿತ ಕಾರ್ಯದಿಂದಲೇ ಒಂದು ಅತ್ಯುತ್ತಮ ಯಶಸ್ಸು ಗಳಿಸುವುದು ಸಾಧ್ಯವಾಗುತ್ತದೆಯೇ ಹೊರತು; ಕೇವಲ ಮೇಲಧಿಕಾರಿಗಳೇ ಎಂದು ಭಾವಿಸುವಂತಿಲ್ಲ ಎಂದು ವರ್ಗಾವಣೆಗೊಂಡಿರುವ ಈಶಾನ್ಯ ವಲಯ ಐಜಿಪಿ ಮುರುಗನ್‌ ನುಡಿದರು.
Vijaya Karnataka Web igp murugan farewell ceremony
ಸಂಘಟಿತ ಕಾರ್ಯ ಯಶಸ್ಸಿಗೆ ಕಾರಣ


ಇಲ್ಲಿನ ಪೊಲೀಸ್‌ ಭವನದಲ್ಲಿ ಪೊಲೀಸ್‌ ಇಲಾಖೆ ವತಿಯಿಂದ ಏರ್ಪಡಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು. ಸಾಮಾನ್ಯವಾಗಿ ಯಾವುದೇ ಅತ್ಯುತ್ತಮ ಸಾಧನೆ ಆದಲ್ಲಿ ಮೇಲಧಿಕಾರಿಗಳನ್ನು ಮಾತ್ರ ಪ್ರಶಂಸೆಗೆ ಪಾತ್ರರಾಗುತ್ತಾರೆ. ಆದರೆ, ಕೆಳ ಹಂತದ ಸಿಬ್ಬಂದಿಯನ್ನು ಬದಿಗಿಟ್ಟು ಯಾವುದೇ ಸಾಧನೆ ಸಾಧ್ಯವಾಗುವುದಿಲ್ಲ. ಹೀಗಾಗಿ, ಇಲಾಖೆಯ ಪ್ರತಿಯೊಬ್ಬ ಸಿಬ್ಬಂದಿಗೂ ಸಾಧನೆಗೆ ಪ್ರಶಂಸೆ ಸಲ್ಲಬೇಕಾಗುತ್ತದೆ ಎಂದರು.

ಪೊಲೀಸ್‌ ಇಲಾಖೆ ಜನರಿಗಾಗಿ ಕಾರ್ಯನಿರ್ವಹಿಸುವಂತಾಗಬೇಕು. ಈ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆಯ ಬಗ್ಗೆ ಸಾರ್ವಜನಿಕರಲ್ಲಿ ಗೌರವ ಮೂಡುವಂತಾಗಬೇಕು. ಅಂದಾಗಲೇ ಜನಸ್ನೇಹಿ ಪೊಲೀಸ್‌ ವ್ಯವಸ್ಥೆ ಎನಿಸಿಕೊಳ್ಳುವುದು ಸಾಧ್ಯವಿದೆ ಎಂದು ಕಿವಿಮಾತು ಹೇಳಿದರು.

ಯಾದಗಿರಿ ಎಸ್ಪಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ಬಳ್ಳಾರಿಯ ಎಸ್ಪಿ ಅರುಣ್‌ ರಂಗರಾಜನ್‌, ಕಲಬುರಗಿ ಗ್ರಾಮೀಣ ಡಿವೈಎಸ್ಪಿ ಎಸ್‌.ಎಸ್‌.ಹುಲ್ಲೂರು, ಚಿತ್ತಾಪುರ ಸಿಪಿಐ ಶಂಕರಗೌಡ ಪಾಟೀಲ್‌ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕಲಬುರಗಿ ಎಸ್ಪಿ ಎನ್‌.ಶಶಿಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸೇಡಂ ಠಾಣೆಯ ಸಿಪಿಐ ಪಂಚಾಕ್ಷರಿ ಸಾಲಿಮಠ ನಿರೂಪಿಸಿದರು. ರಾಯಚೂರು ಎಸ್ಪಿ ಕಿಶೋರ್‌ ಕುಮಾರ್‌ ವಂದಿಸಿದರು.

ಮುರುಗನ್‌ ಅವರ ಪತ್ನಿ ಶುಭಾ ಮುರುಗನ್‌, ಹೆಚ್ಚುವರಿ ಎಸ್ಪಿ ಜಯಪ್ರಕಾಶ್‌, ಎ ಉಪ ವಿಭಾಗದ ಎಎಸ್ಪಿ ಲೋಕೇಶ್‌ ಜಗಲಸಾರ ಸೇರಿದಂತೆ ಜಿಲ್ಲೆಯ ಎಲ್ಲ ಠಾಣೆಗಳ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಅವರು ನಗೆ ಚಟಾಕಿ ಕಾರ್ಯಕ್ರಮ ನಡೆಸಿಕೊಟ್ಟರು.

ಜೀಪ್‌ ಎಳೆದು ಪ್ರೀತಿ ತೋರಿದರು...

ಈಶಾನ್ಯ ವಲಯ ಐಜಿಪಿ ಆಗಿದ್ದ ಎಸ್‌.ಮುರುಗನ್‌ ವರ್ಗಾವಣೆಗೊಂಡ ಪ್ರಯುಕ್ತ ಅವರಿಗಾಗಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದ ನಂತರ ಮುರುಗನ್‌ ದಂಪತಿ ಇದ್ದ ತೆರೆದ ಜೀಪ್‌ಗೆ ಬೃಹತ್‌ ಸೈಜಿನ ಹಗ್ಗ ಕಟ್ಟಿ ಎಳೆಯುವ ಮೂಲಕ ಪೊಲೀಸ್‌ ಅಧಿಕಾರಿಗಳು ಗೌರವ ಸೂಚಿಸಿದರು.

ಐಪಿಎಸ್‌ ಅಧಿಕಾರಿಗಳು ಸೇರಿದಂತೆ ಡಿವೈಎಸ್ಪಿಗಳು, ಸಿಪಿಐ ಸೇರಿದಂತೆ ಎಲ್ಲ ರಾರ‍ಯಂಕಿನ ಅಧಿಕಾರಿಗಳು ಹಗ್ಗ ಹಿಡಿದೆಳೆಯುವ ಮೂಲಕ ಸಂಭ್ರಮಿಸುತ್ತಲೇ ತಮ್ಮ ನೆಚ್ಚಿನ ಅಧಿಕಾರಿಗಳು ತೋರಿದ ಪ್ರೀತಿಗೆ ಋುಣಿ ಎಂಬಂತೆ ಮುರುಗನ್‌ ದಂಪತಿಗಳು ಮುಗುಳ್ನಗುತ್ತಲೇ ಅಭಿನಂದನೆ ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ