ಆ್ಯಪ್ನಗರ

ನೆರೆ ಸಂತ್ರಸ್ತರಿಗೆ ಅನ್ಯಾಯ, ಬಿಎಸ್ಪಿ ಪ್ರತಿಭಟನೆ

ಉತ್ತರ ಕರ್ನಾಟಕದ 22 ಜಿಲ್ಲೆಗಳಲ್ಲಿನೆರೆ ಪರಿಸ್ಥಿತಿಯಿಂದ ಜನರು ಕಂಗಾಲಾಗಿದ್ದರೂ ಕೇಂದ್ರ ಸರಕಾರ ತನ್ನ ಪಾಲಿನ ಪರಿಹಾರ ಬಿಡುಗಡೆ ಮಾಡುವಲ್ಲಿವಿಳಂಬ ನೀತಿ ಅನುಸರಿಸಿದೆ ಎಂದು ಬೇಸರ ವ್ಯಕ್ತಪಡಿಸಿ ಬಹುಜನ ಸಮಾಜ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಶನಿವಾರ ಕಲಬುರಗಿ ನಗರದಲ್ಲಿಪ್ರತಿಭಟನೆ ನಡೆಸಿದರು.

Vijaya Karnataka 6 Oct 2019, 9:26 pm
ಕಲಬುರಗಿ:ಉತ್ತರ ಕರ್ನಾಟಕದ 22 ಜಿಲ್ಲೆಗಳಲ್ಲಿನೆರೆ ಪರಿಸ್ಥಿತಿಯಿಂದ ಜನರು ಕಂಗಾಲಾಗಿದ್ದರೂ ಕೇಂದ್ರ ಸರಕಾರ ತನ್ನ ಪಾಲಿನ ಪರಿಹಾರ ಬಿಡುಗಡೆ ಮಾಡುವಲ್ಲಿವಿಳಂಬ ನೀತಿ ಅನುಸರಿಸಿದೆ ಎಂದು ಬೇಸರ ವ್ಯಕ್ತಪಡಿಸಿ ಬಹುಜನ ಸಮಾಜ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಶನಿವಾರ ಕಲಬುರಗಿ ನಗರದಲ್ಲಿಪ್ರತಿಭಟನೆ ನಡೆಸಿದರು.
Vijaya Karnataka Web injustice to neighboring victims bsp protest
ನೆರೆ ಸಂತ್ರಸ್ತರಿಗೆ ಅನ್ಯಾಯ, ಬಿಎಸ್ಪಿ ಪ್ರತಿಭಟನೆ


ನೆರೆಯಿಂದಾಗಿ 87 ಜನರು ಸಾವಿಗೀಡಾಗಿದ್ದಾರೆ. 2,30,000 ಮನೆಗಳಿಗೆ ಹಾನಿಯಾಗಿದೆ. 1,79,000 ಮನೆಗಳು ಸಂಪೂರ್ಣ ನಾಶಗೊಂಡಿವೆ. 7,82,000 ಹೆಕ್ಟೇರ್‌ ಬೆಳೆ ಹಾಳಾಗಿದೆ. 5000 ಹೆಕ್ಟೇರ್‌ ಕೃಷಿ ಭೂಮಿ ಸಂಪೂರ್ಣ ಹಾಳಾಗಿದೆ. 35,000 ಕಿಲೋ ಮೀಟರ್‌ ರಸ್ತೆ ಹಾಳಾಗಿದ್ದು, ಈ ಪೈಕಿ 2828 ಸೇತುವೆಗಳು ಕೊಚ್ಚಿ ಹೋಗಿವೆ. ಇಷ್ಟೆಲ್ಲಾನಷ್ಟ ಸಂಭವಿಸಿದ್ದರಿಂದ ಅಂದಾಜು ರೂ.38,451 ಕೋಟಿಯಷ್ಟು ನಷ್ಟ ಉಂಟಾಗಿದೆ ಎಂದು ಸ್ವತಃ ಸರಕಾರವೇ ವರದಿ ಸಲ್ಲಿಸಿದೆ. ಇಷ್ಟೆಲ್ಲಾಆದಾಗ್ಯೂ, ಕೇಂದ್ರ ಸರಕಾರ ಕೇವಲ ರೂ. 1200 ಕೋಟಿ ಬಿಡುಗಡೆ ಮಾಡಿ ಕೈ ತೊಳೆದುಕೊಂಡಿದೆ. ಈ ನಿಟ್ಟಿನಲ್ಲಿಸಕ್ರಿಯವಾಗಿ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕಿದ್ದ ರಾಜ್ಯ ಬಿಜೆಪಿಯ 25 ಸಂಸದರು ವಿಫಲರಾಗಿದ್ದಾರೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಎಲ್ಲದಕ್ಕೂ ಮುಖ್ಯವಾಗಿ ಗೃಹ ಸಚಿವ ಅಮಿತ್‌ ಶಾ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಖುದ್ದಾಗಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟು ಸಾಕ್ಷಾತ್‌ ಸ್ಥಿತಿ ನೋಡಿದ್ದಾರೆ. ಇಷ್ಟಾದರೂ ಕೇಂದ್ರ ಸರಕಾರ ನೆರೆ ಪೀಡಿತರ ಪರವಾಗಿ ಸ್ಪಂದಿಸುವಲ್ಲಿವಿಫಲಗೊಂಡಿದೆ. ದುರಂತವೆಂದರೆ, ರಾಜ್ಯದಲ್ಲಿಯೂ ಬಿಜೆಪಿ ಸರಕಾರವೇ ಆಡಳಿತ ನಡೆಸುತ್ತಿದ್ದಾಗ್ಯೂ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವಲ್ಲಿಬಿಜೆಪಿಯ ಎಲ್ಲ25 ಸಂಸದರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಆ ಮೂಲಕ ಬಿಜೆಪಿ ತಾನು ಜನವಿರೋಧಿ ಪಕ್ಷ ಎಂಬುದನ್ನು ಸಾಬೀತುಪಡಿಸಿದೆ ಎಂದು ಪ್ರತಿಭಟನಾಕಾರರು ಟೀಕಿಸಿದರು.

ಕೇಂದ್ರದಿಂದ ಸಮರ್ಪಕ ಪ್ರಮಾಣದ ಪರಿಹಾರ ತರುವಲ್ಲಿವಿಫಲಗೊಂಡಿರುವ ರಾಜ್ಯದ ಎಲ್ಲಬಿಜೆಪಿ ಸಂಸದರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ನಿಂಬಾಳಕರ್‌, ವಿಭಾಗೀಯ ಸಂಯೋಜಕ ಹಣಮಂತ ಬೋಧನಕರ್‌, ಜಿಲ್ಲಾಧ್ಯಕ್ಷ ಮಹ್ಮದ್‌ ಅಫಜಲ್‌ ಅನ್ಸಾರಿ, ಜಿಲ್ಲಾಸಂಯೋಜಕರಾದ ಪರಶುರಾಮ ವಾಲಿ, ಲಾಲ್‌ ಪಟೇಲ್‌, ಜೈಭೀಮ ಶಿಂಧೆ, ಜಿಲ್ಲಾಉಪಾಧ್ಯಕ್ಷರಾದ ಪ್ರಕಾಶ್‌ ಸಾಗರ್‌, ಮಲ್ಲಿಕಾರ್ಜುನ ಕೋಡ್ಲಿ, ಜಿಲ್ಲಾಕಾರ್ಯದರ್ಶಿ ಶಿವಪುತ್ರ ಸೀತನೂರ, ಜಿಲ್ಲಾಪ್ರಧಾನ ಕಾರ್ಯದರ್ಶಿ ಅನಿಲ್‌ ಟೆಂಗಳಿ, ಜಿಲ್ಲಾಖಜಾಂಚಿ ಯಲ್ಲಪ್ಪ ಛಲವಾದಿ, ಕಾರ್ಯಕಾರಿ ಸಮಿತಿ ಸದಸ್ಯ ಹುಚ್ಚಪ್ಪ ವಠಾರ, ಮೈಲಾರಿ ಶೆಳ್ಳಗಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ