ಆ್ಯಪ್ನಗರ

ಚೆಕ್‌ ಪೋಸ್ಟ್‌ಗಳಲ್ಲಿಸಿಸಿ ಕ್ಯಾಮರಾ ಅಳವಡಿಕೆಗೆ ಸೂಚನೆ

ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಎಲ್ಲಚೆಕ್‌ ಪೋಸ್ಟ್‌ಗಳು ಹಾಗೂ ಕೊಧಿರೊಧಿನಾ ವೈರೆಸ್‌ ಖಚಿತವಾದ ರೋಗಿಗಳ ವಾರ್ಡ್‌ಗಳ ಬ್ಯಾರಿಕೇಡ್‌ ಬಳಿ ಸಿಸಿ ಟಿವಿ ಅಳವಡಿಸಲು ಕ್ರಮವಹಿಸುವಂತೆ ಎಂಪಿ ಡಾ.ಉಮೇಶ ಜಾಧವ ಜಿಲ್ಲಾಪೊಲೀಸ್‌ ಇಲಾಖೆಗೆ ಸೂಚಿಸಿದರು.

Vijaya Karnataka 19 Apr 2020, 8:24 pm
ಕಲಬುರಗಿ: ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಎಲ್ಲಚೆಕ್‌ ಪೋಸ್ಟ್‌ಗಳು ಹಾಗೂ ಕೊಧಿರೊಧಿನಾ ವೈರೆಸ್‌ ಖಚಿತವಾದ ರೋಗಿಗಳ ವಾರ್ಡ್‌ಗಳ ಬ್ಯಾರಿಕೇಡ್‌ ಬಳಿ ಸಿಸಿ ಟಿವಿ ಅಳವಡಿಸಲು ಕ್ರಮವಹಿಸುವಂತೆ ಎಂಪಿ ಡಾ.ಉಮೇಶ ಜಾಧವ ಜಿಲ್ಲಾಪೊಲೀಸ್‌ ಇಲಾಖೆಗೆ ಸೂಚಿಸಿದರು.
Vijaya Karnataka Web insertion of camera into check posts
ಚೆಕ್‌ ಪೋಸ್ಟ್‌ಗಳಲ್ಲಿಸಿಸಿ ಕ್ಯಾಮರಾ ಅಳವಡಿಕೆಗೆ ಸೂಚನೆ


ಕೆಧಿಕೆಧಿಆರ್‌ಡಿಬಿ ಸಭಾಂಗಣದಲ್ಲಿಶುಕ್ರವಾರ ಕರೆದಿದ್ದ ನಗರದ ಪೊಲೀಸ್‌ ಅಧಿಕಾರಿಗಳ ಸಭೆಯಲ್ಲಿಮಾತನಾಡಿದರು. ಎಲ್ಲಚೆಕ್‌ಪೋಸ್ಟ್‌ಗಧಿಳಿಗೆ ಭೇಟಿ ನೀಧಿಡಿಧಿದಾಗ ಕೆಧಿಲಧಿವೊಂದು ಚೆಕ್‌ಪೋಸ್ಟ್‌ಗಳು ಹೊರುತುಪಡಿಸಿ ಎಲ್ಲಚೆಕ್‌ ಪೋಸ್ಟ್‌ಗಳು ಚುರುಕಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದಧಿರು.

ಕೊಧಿರೊಧಿನಾ ತಗುಲಿದ ರೋಗಿಯ ಖಚಿತ ಮಾಹಿತಿ ತ್ವರಿತವಾಗಿ ಪೊಲೀಸ್‌ ಇಲಾಖೆಗೆ ತಿಳಿಸುವಂತೆ ಡಿಧಿಎಚ್‌ಒ ಡಾ. ಎಂ.ಎ.ಜಬ್ಬಾರ್‌ಗೆ ಸೂಚಿಸಿದರು. ಮಾಹಿತಿ ಪಡೆದ ಪೊಲೀಸ್‌ ಇಲಾಖೆಯೂ ಎರಡು ಗಂಟೆಯೊಳಗಾಗಿ ವೈಧಿರಸ್‌ ಖಚಿತ ರೋಗಿಯ ಕಾಲೊನಿ ಸುತ್ತ ಬ್ಯಾರಿಕೇಡ್‌ ಹಾಗೂ ಸಿ.ಸಿ.ಕ್ಯಾಮರಾಗಳನ್ನು ಅಳವಡಿಸುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದರು.

ಶಾಧಿಸಕ ದತ್ತಾತ್ರೆಯ ಸಿ.ಪಾಟೀಲ್‌ ರೇವೂರ ಮಾತನಾಡಿ, ದೇಶದಲ್ಲಿಲಾಕ್‌ಡೌನ್‌ ಆಗುವ ಮುಂಚೆಯೇ ಜಿಲ್ಲೆ12 ದಿನ ಹಿಂದೆಯೇ ಲಾಕ್‌ಡೌನ್‌ ಆಗಿದೆ. ಆದರೂ ಜಿಲ್ಲೆಯಲ್ಲಿಕೊಧಿರೊಧಿನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿಯೊಂದು ವಾರ್ಡ್‌ಗಳ ರಸ್ತೆಗಧಿಳಲ್ಲಿಬ್ಯಾರಿಕೇಡ್‌ ಹಾಕಿ, ಹೊರಗಡೆ ಹೋಗಲು ಒಂದೇ ದಾರಿ ವ್ಯವಸ್ಥೆ ಮಾಡಬೇಕು. ಒಬ್ಬ ಪೊಲೀಸ್‌ ಪೇದೆ, ಮಹಾನಗರ ಪಾಲಿಕೆಯಿಂದ ಧಿಒಬ್ಬ ಎಂಜಿಧಿನಿಧಿಯರ್‌ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ನಿಯೋಜಿಸಬೇಕೆಂದರು.

ಈ ಕುರಿತು ವಾಟ್ಸ್‌ ಆ್ಯಪ್‌ಗ್ರೂಪ್‌ ರಚಿಸಿಕೊಂಡು ತಂಡ ಕಾರ್ಯನಿರ್ವಹಿಸಬೇಕು. ವಾರ್ಡ್‌ಗಳಿಂದ ಹೊರಗಡೆ ಹೋಗುವ ಸಾರ್ವಜನಿಕರನ್ನು ತಡೆದು ಮನೆಯಲ್ಲೇ ಇರಲು ತಿಳಿಸಿ ಅವರ ಮನೆ ವಿಳಾಸ ಪಡೆದು ಬೇಕಿಧಿರುವ ದವಸ ಧಾನ್ಯ, ತರಕಾರಿ ಹಾಗೂ ರೋಗಿಗಳಿಗೆ ಮಾತ್ರೆ ಸೇರಿ ಎಲ್ಲಸೌಕರ್ಯಗಳನ್ನು ಮೂರರಿಂದ ನಾಲ್ಕು ಗಂಟೆಯೊಳಗೆ ಅವರ ಮನೆ ಬಾಗಲಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಸೂಚಿಸಿದರು.

ಪೊಲೀಸರು ಕಾನೂನು ಪಾಲನೆ ಜೊತೆಗೆ ಕೊಧಿರೊಧಿನಾ ವೈರಸ್‌ ಹರಡದಂತೆ ಕ್ರಮಗಳ ಬಗ್ಗೆ ಬೀದಿನಾಟಕ, ಧ್ವನಿ ವರ್ಧಕಗಳ ಮೂಲಕ ಜಾಗೃತಿ ಮಾಡಿಸುತ್ತಿದ್ದು, ಇದಕ್ಕೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಹಾಗೂ ಕೆಧಿಕೆಧಿಆರ್‌ಡಿಬಿ ಕಾರ್ಯದರ್ಶಿ ಡಾ.ಎನ್‌.ವಿ ಪ್ರಸಾದ, ನಗರ ಪೊಲೀಸ್‌ ಆಯುಕ್ತ ಸತೀಶ ಕುಮಾರ, ಮಹಾನಗರ ಪಾಲಿಕೆ ಆಯುಕ್ತ ರಾಹುಲ್‌ ಪಾಂಡ್ವೆ, ಡಿಸಿಪಿ ಕಿಶೋರ ಬಾಬು, ಎಂಎಲ್‌ಸಿ ಬಿ.ಜಿ.ಪಾಟೀಲ್‌ ಸೇರಿ ಪೊಲೀಸ್‌ ಅಧಿಕಾರಿಗಳು ಉಪಸ್ಥಿತರಿದ್ದರು.

ಪಿಪಿಇ ಕಿಟ್‌ ನೀಡಿಕೆ

ಇದೇ ಸಂದರ್ಭದಲ್ಲಿಪಿಪಿಇ ಕಿಟ್‌ ಕಲಬುರಗಿ ರೋಟರಿ ಕ್ಲಬ್‌ ಅಧ್ಯಕ್ಷ ಕಿರಣಕುಮಾರ ಶೆಟ್ಟಕಾರ್‌ 10 ಪಿಪಿಇ ಕಿಟ್‌ ಹಾಗೂ 1000 ಮಾಸ್ಕ್‌ಗಳನ್ನು ನಗರ ಪೊಲೀಸ್‌ ಆಯುಕ್ತರ ಕಚೇರಿಗೆ ದೇಣಿಗೆಯಾಗಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ