ಆ್ಯಪ್ನಗರ

ಜೆಡಿಎಸ್‌-ಕಾಂಗ್ರೆಸ್‌ ಮದುವೆಗೆ ಮತದಾರ ಅಕ್ಷತೆ ಹಾಕಿಲ್ಲ: ಯತ್ನಾಳ್‌

ತತ್ವ ಸಿದ್ಧಾಂತ ಇಲ್ಲದ ಜೆಡಿಎಸ್‌ ಕಾಂಗ್ರೆಸ್‌ ಮೈತ್ರಿ ಜಬರದಸ್ತಿ ಮದುವೆಯಾಗಿದೆ. ಆದರೆ ರಾಜ್ಯ ಜನ ಅಕ್ಷತೆ ಹಾಕಿರಲಿಲ್ಲ ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌ ವ್ಯಂಗ್ಯವಾಡಿದರು.

Vijaya Karnataka 14 May 2019, 5:00 am
ಕಲಬುರಗಿ : ತತ್ವ ಸಿದ್ಧಾಂತ ಇಲ್ಲದ ಜೆಡಿಎಸ್‌ ಕಾಂಗ್ರೆಸ್‌ ಮೈತ್ರಿ ಜಬರದಸ್ತಿ ಮದುವೆಯಾಗಿದೆ. ಆದರೆ ರಾಜ್ಯ ಜನ ಅಕ್ಷತೆ ಹಾಕಿರಲಿಲ್ಲ ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌ ವ್ಯಂಗ್ಯವಾಡಿದರು.
Vijaya Karnataka Web jds congress not voter turnout yatnal
ಜೆಡಿಎಸ್‌-ಕಾಂಗ್ರೆಸ್‌ ಮದುವೆಗೆ ಮತದಾರ ಅಕ್ಷತೆ ಹಾಕಿಲ್ಲ: ಯತ್ನಾಳ್‌


ಒಂದು ಗಂಡ ಕಳೆದುಕೊಂಡ ಹೆಣ್ಣು, ಇನ್ನೊಂದು ಹೆಂಡತಿ ಕಳೆದುಕೊಂಡ ಗಂಡು ಇಬ್ಬರೂ ಸೇರಿ ಮದುವೆಯಾಗಿದ್ದಾರೆ. ಈ ಸಂಸಾರ ಇಷ್ಟು ದಿನ ನಡೆದಿದ್ದೇ ದೊಡ್ಡ ಸಾಧನೆ. ಇನ್ನು ಮುಂದೆ ಬಹಳ ದಿನ ನಡೆಯಲ್ಲ ಎಂದರು.

ಸಿದ್ದರಾಮಯ್ಯ ಬಗ್ಗೆ ಹೆಚ್‌ ವಿಶ್ವನಾಥ್‌ ಹೇಳಿಕೆ ನೂರಕ್ಕೆ ನೂರರಷ್ಟು ಸತ್ಯವಾಗಿದೆ. ದೇವೇಗೌಡ -ಕುಮಾರಸ್ವಾಮಿ ಇಬ್ಬರೂ ಕೂಡಿ ಸಿದ್ರಾಮಯ್ಯಗೆ ಸಿಎಂ ಮಾಡೋದು ಸಾಧ್ಯವೇ ಇಲ್ಲ. ಇದೇ ಸ್ಥಿತಿ ಹಿಂದೆ ಬಂದಾಗ ಧರ್ಮಸಿಂಗ್‌ಗೆ ದೇವೇಗೌಡರು ಸಿಎಂ ಮಾಡಿದ್ದರು. ಈಗ ಸಿದ್ದರಾಮಯ್ಯ ಮುಂದಿನ ನಾಲ್ಕು ವರ್ಷದವರೆಗೆ ಸಿಎಂ ಕನಸ್ಸು ಬಿಟ್ಟು ಬಿಡಬೇಕು. ಕಾಂಗ್ರೆಸ್‌ ಪಕ್ಷ ಉಳಿಯಬೇಕಾದರೆ ಮೊದಲು ಜೆಡಿಎಸ್‌ಗೆ ನೀಡಿರುವ ಬೆಂಬಲ ವಾಪಸ್‌ ಪಡೆದುಕೊಳ್ಳಬೇಕು ಎಂದರು.

ಡಿಕೆ ಶಿವಕುಮಾರ ಈ ಸರಕಾರದಲ್ಲಿ ಲೂಟಿಗೆ ಇಳಿದಿದ್ದಾರೆ. ಲೂಟಿ ಬಂದ್‌ ಆಗುತ್ತದೆ ಎಂದು ಕಣ್ಣೀರು ಹಾಕುತ್ತಿದ್ದಾರೆ ಹೊರತು ಶಿವಳ್ಳಿ ಮೃತರಾಗಿದ್ದಕ್ಕೆ ಅತ್ತಿಲ್ಲ. ಎಲೆಕ್ಷನ್‌ನಲ್ಲಿ ಹೇಗೆ ಅಳಬೇಕು ಎನ್ನುವುದನ್ನು ಡಿಕೆಶಿ ದೇವೇಗೌಡರಿಂದಲೇ ತರಬೇತಿ ಪಡೆದಿದ್ದಾರೆ ಎಂದು ಟಾಂಗ್‌ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ