ಕಲಬುರಗಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸನ್ಮಾನ ಮಾಡಿದ್ದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವುದು ಶುಕ್ರವಾರ ದೃಢಪಟ್ಟಿದೆ. ಇದರಿಂದ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಿಗೆ ಈಗ ಕೊರೊನಾ ಆತಂಕ ಶುರುವಾಗಿದೆ.
ಆಗಸ್ಟ್ 4ರಂದು ಇಲ್ಲಿಗೆ ಸಮೀಪದ ಚೌಡಾಪುರ ಕ್ರಾಸ್ ಬಳಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಸನ್ಮಾನಿಸಿದ್ದ ಜೆಎಂ ಕೊರಬು ಅವರ ಕೋವಿಡ್ ವರದಿ ಪಾಸಿಟಿವ್ ಬಂದಿದೆ. ಹೀಗಾಗಿ ಆ ದಿನ ಸನ್ಮಾನ ಸ್ವೀಕರಿಸಿದ್ದ ಡಿಕೆ ಶಿವಕುಮಾರ್ ಹಾಗೂ ಅವರ ಸುತ್ತಲೂ ನೆರೆದಿದ್ದ ಜನರಿಗೆ ಈಗ ಭಯ ಆರಂಭವಾಗಿದೆ.
ಜೆ.ಎಂ.ಕೊರಬು ಜೆಎಂ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷರು. ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಚೌಡಾಪುರ ಕ್ರಾಸ್ ಮೂಲಕ ಡಿಕೆ ಶಿವಕುಮಾರ್ ದೇವಲಗಾಣಗಾಪುರದ ಶ್ರೀದತ್ತನ ದರ್ಶನಕ್ಕೆ ತೆರಳುತ್ತಿದ್ದಾಗ ಕೊರಬು ಮಾಸ್ಕ್ ಸಹ ಧರಿಸದೆ ಡಿಕೆಶಿ ಅವರಿಗೆ ಪೇಟ ತೊಡಿಸಿ ಶಾಲು ಹೊದಿಸಿ ಸನ್ಮಾನಿಸಿದ್ದರು.
ಮಾಜಿ ಎಂಎಲ್ಸಿ ಐವನ್ ಡಿಸೋಜ ಅವರಿಗೆ ಪಾಸಿಟಿವ್: ಕಾಂಗ್ರೆಸ್ ಮುಖಂಡರಿಗೆ ಆತಂಕ!
ಈ ಹಿಂದೆ ಮಂಗಳೂರಿನಲ್ಲಿ ಡಿಕೆ ಶಿವಕುಮಾರ್ ಅವರ ಜೊತೆ ಇಡೀ ದಿನ ಓಡಾಟ ನಡೆಸಿದ್ದ ಮಾಜಿ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಆದರೆ ಡಿಕೆ ಶಿವಕುಮಾರ್ ಸೋಂಕಿನಿಂದ ಬಚಾವಾಗಿದ್ದರು.
ಮಧ್ಯೆ, ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಸಂಪರ್ಕದಲ್ಲಿದ್ದರೂ ಡಿಕೆ ಶಿವಕುಮಾರ್ ಸೋಂಕಿತರಾಗಿರಲಿಲ್ಲ. ಅವರು ಹೋಮ್ ಕ್ವಾರಂಟೈನ್ಗೂ ಒಳಗಾಗದೆ ಇತ್ತೀಚೆಗೆ ಕಲಬುರಗಿ ಜಿಲ್ಲೆಯ ಪ್ರವಾಸ ಕೈಗೊಂಡಿದ್ದರು.
ಪ್ರವಾಸದ ವೇಳೆ ಗಾಣಗಾಪುರದ ದತ್ತಾತ್ರೇಯ ದೇಗುಲ, ಕಲಬುರಗಿ ನಗರದ ಐತಿಹಾಸಿಕ ಶ್ರೀ ಶರಣಬಸವೇಶ್ವರ ಗುಡಿ ಹಾಗೂ ಖ್ವಾಜಾ ಬಂದೇ ನವಾಜ್ ದರ್ಗಾಕ್ಕೆ ಸಹ ಶಿವಕುಮಾರ್ ಭೇಟಿ ನೀಡಿದ್ದರು. ಕಾಂಗ್ರೆಸ್ ನಾಯಕರು ಹಾಗೂ ಸಾವಿರಾರು ಕಾರ್ಯಕರ್ತರು ಅವರಿಗೆ ಸಾಥ್ ನೀಡಿದ್ದರು. ಹೀಗಾಗಿ ಈಗ ಜೆಎಂ ಕೊರಬು ಅವರ ಸಂಪರ್ಕಕ್ಕೆ ಬಂದಿದ್ದ ಅನೇಕರಿಗೆ ಕೊರೊನಾ ಟೆನ್ಷನ್ ಶುರುವಾಗಿದೆ.
ಆಗಸ್ಟ್ 4ರಂದು ಇಲ್ಲಿಗೆ ಸಮೀಪದ ಚೌಡಾಪುರ ಕ್ರಾಸ್ ಬಳಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಸನ್ಮಾನಿಸಿದ್ದ ಜೆಎಂ ಕೊರಬು ಅವರ ಕೋವಿಡ್ ವರದಿ ಪಾಸಿಟಿವ್ ಬಂದಿದೆ. ಹೀಗಾಗಿ ಆ ದಿನ ಸನ್ಮಾನ ಸ್ವೀಕರಿಸಿದ್ದ ಡಿಕೆ ಶಿವಕುಮಾರ್ ಹಾಗೂ ಅವರ ಸುತ್ತಲೂ ನೆರೆದಿದ್ದ ಜನರಿಗೆ ಈಗ ಭಯ ಆರಂಭವಾಗಿದೆ.
ಜೆ.ಎಂ.ಕೊರಬು ಜೆಎಂ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷರು. ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಚೌಡಾಪುರ ಕ್ರಾಸ್ ಮೂಲಕ ಡಿಕೆ ಶಿವಕುಮಾರ್ ದೇವಲಗಾಣಗಾಪುರದ ಶ್ರೀದತ್ತನ ದರ್ಶನಕ್ಕೆ ತೆರಳುತ್ತಿದ್ದಾಗ ಕೊರಬು ಮಾಸ್ಕ್ ಸಹ ಧರಿಸದೆ ಡಿಕೆಶಿ ಅವರಿಗೆ ಪೇಟ ತೊಡಿಸಿ ಶಾಲು ಹೊದಿಸಿ ಸನ್ಮಾನಿಸಿದ್ದರು.
ಮಾಜಿ ಎಂಎಲ್ಸಿ ಐವನ್ ಡಿಸೋಜ ಅವರಿಗೆ ಪಾಸಿಟಿವ್: ಕಾಂಗ್ರೆಸ್ ಮುಖಂಡರಿಗೆ ಆತಂಕ!
ಈ ಹಿಂದೆ ಮಂಗಳೂರಿನಲ್ಲಿ ಡಿಕೆ ಶಿವಕುಮಾರ್ ಅವರ ಜೊತೆ ಇಡೀ ದಿನ ಓಡಾಟ ನಡೆಸಿದ್ದ ಮಾಜಿ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಆದರೆ ಡಿಕೆ ಶಿವಕುಮಾರ್ ಸೋಂಕಿನಿಂದ ಬಚಾವಾಗಿದ್ದರು.
ಮಧ್ಯೆ, ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಸಂಪರ್ಕದಲ್ಲಿದ್ದರೂ ಡಿಕೆ ಶಿವಕುಮಾರ್ ಸೋಂಕಿತರಾಗಿರಲಿಲ್ಲ. ಅವರು ಹೋಮ್ ಕ್ವಾರಂಟೈನ್ಗೂ ಒಳಗಾಗದೆ ಇತ್ತೀಚೆಗೆ ಕಲಬುರಗಿ ಜಿಲ್ಲೆಯ ಪ್ರವಾಸ ಕೈಗೊಂಡಿದ್ದರು.
ಪ್ರವಾಸದ ವೇಳೆ ಗಾಣಗಾಪುರದ ದತ್ತಾತ್ರೇಯ ದೇಗುಲ, ಕಲಬುರಗಿ ನಗರದ ಐತಿಹಾಸಿಕ ಶ್ರೀ ಶರಣಬಸವೇಶ್ವರ ಗುಡಿ ಹಾಗೂ ಖ್ವಾಜಾ ಬಂದೇ ನವಾಜ್ ದರ್ಗಾಕ್ಕೆ ಸಹ ಶಿವಕುಮಾರ್ ಭೇಟಿ ನೀಡಿದ್ದರು. ಕಾಂಗ್ರೆಸ್ ನಾಯಕರು ಹಾಗೂ ಸಾವಿರಾರು ಕಾರ್ಯಕರ್ತರು ಅವರಿಗೆ ಸಾಥ್ ನೀಡಿದ್ದರು. ಹೀಗಾಗಿ ಈಗ ಜೆಎಂ ಕೊರಬು ಅವರ ಸಂಪರ್ಕಕ್ಕೆ ಬಂದಿದ್ದ ಅನೇಕರಿಗೆ ಕೊರೊನಾ ಟೆನ್ಷನ್ ಶುರುವಾಗಿದೆ.