ಆ್ಯಪ್ನಗರ

ಜೆಒಸಿ ನೌಕರರಿಗೆ ಸೇವಾ ಭದ್ರತೆಗೆ ಆಗ್ರಹ

ವೃತ್ತಿ ಶಿಕ್ಷಣ(ಜೆಒಸಿ)ಇಲಾಖೆಯಿಂದ ವಿವಿಧ ಇಲಾಖೆಗಳಲ್ಲಿವಿಲೀನಗೊಂಡ ನೌಕರರಿಗೆ ಸೇವಾ ಭದ್ರತೆ ಹಾಗೂ ಪಿಂಚಣಿ ಸೌಲಭ್ಯ ಒದಗಿಸಬೇಕೆಂದು ಸಂಘದ ಅಧ್ಯಕ್ಷ ಮಲ್ಲಿನಾಥ ಕಳಸ್ಕರ ಆಗ್ರಹಿಸಿದ್ದಾರೆ.

Vijaya Karnataka 30 Sep 2019, 10:18 pm
ಕಲಬುರಗಿ:ವೃತ್ತಿ ಶಿಕ್ಷಣ(ಜೆಒಸಿ)ಇಲಾಖೆಯಿಂದ ವಿವಿಧ ಇಲಾಖೆಗಳಲ್ಲಿವಿಲೀನಗೊಂಡ ನೌಕರರಿಗೆ ಸೇವಾ ಭದ್ರತೆ ಹಾಗೂ ಪಿಂಚಣಿ ಸೌಲಭ್ಯ ಒದಗಿಸಬೇಕೆಂದು ಸಂಘದ ಅಧ್ಯಕ್ಷ ಮಲ್ಲಿನಾಥ ಕಳಸ್ಕರ ಆಗ್ರಹಿಸಿದ್ದಾರೆ.
Vijaya Karnataka Web joc demands service security for employees
ಜೆಒಸಿ ನೌಕರರಿಗೆ ಸೇವಾ ಭದ್ರತೆಗೆ ಆಗ್ರಹ


ಈ ಕುರಿತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿರುವ ಅವರು, 20-30 ಷರ್ವಗಳಿಂದ ಸೇವೆ ಸಲ್ಲಿಸಿದ ನೌಕರರು ಕಾಯಂಗೊಂಡಿದ್ದಾರೆ. ಆದರೆ, ಅವರಿಗೆ ಸೇವಾ ಭದ್ರತೆ ಇಲ್ಲ. ಪಿಂಚಣಿ ಸೌಲಭ್ಯವೂ ಇಲ್ಲಂದಾಗಿದೆ. ಅವರ ವಿದ್ಯಾರ್ಹತೆಗೆ ತಕ್ಕಂತೆ ಹುದ್ದೆಗಳು ದೊರೆಯುತ್ತಿಲ್ಲ. ಕೆಲವರಿಗೆ ಕಾಯಂಗೊಂಡಿರುವ ಕುರಿತು ಆದೇಶ ಪತ್ರ ಬಂದಿದೆ. ಆದರೆ, ಖಾಸಗಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರು ಕರ್ತವ್ಯಕ್ಕೆ ಹಾಜರಾಗಲು ಅನುಮತಿ ಕೊಟ್ಟಿಲ್ಲ. ಹೀಗಾಗಿ ಅವರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಇನ್ನೂ ಕೆಲವರಿಗೆ ಇಲಾಖೆಯ ತೊಂದರೆಯಿಂದಾಗಿ ಸಂಬಳ ದೊರೆಯುತಿಲ್ಲ. ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿವಿಲೀನಗೊಂಡ ಉಪನ್ಯಾಸಕರಿಗೆ ಬಿಇಡಿ ವಿನಾಯಿತಿ ದೊರೆಯುತ್ತಿಲ್ಲ. ಸರಕಾರಿ ಇಲಾಖೆಯಲ್ಲಿಸೇವೆ ಸಲ್ಲಿಸಿದ ಸಿಬ್ಬಂದಿಗಳಂತೆ ಖಾಸಗಿ ಸಂಸ್ಥೆಗಳಲ್ಲಿಸೇವೆ ಸಲ್ಲಿಸಿದ ಸಿಬ್ಬಂದಿಗೆ ನೇಮಕಾತಿಯಲ್ಲಿಆನ್ಯಾಯ ಸರಿಪಡಿಸಿಲ್ಲಎಂದು ಪತ್ರದಲ್ಲಿಬೇಸರ ವ್ಯಕ್ತಪಡಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ