ಆ್ಯಪ್ನಗರ

ಮಮತೆಯ ತೊಟ್ಟಿಲು ತೂಗಿದ ನ್ಯಾಯಾಧೀಶರು

ಹೆತ್ತಮ್ಮ ತನ್ನ ಕರುಳಿನ ಕುಡಿಯನ್ನು ಬೇಡ ಎಂದರೆ, ಅಂತಹ ಮಗುವನ್ನು ಹಾದಿ ಬೀದಿಯಲ್ಲಿ ಬಿಟ್ಟು ಹೋಗುವುದಕ್ಕಿಂತ ಮಮತೆಯ ತೊಟ್ಟಿಲಿಗೆ ತಂದು ಹಾಕಿ. ಸರಕಾರ ಮತ್ತು ಅಧಿಕಾರಿಗಳು ಅದಕ್ಕೊಂದು ಚೆಂದದ ಬದುಕು ಕಟ್ಟಿಕೊಡುತ್ತಾರೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಎಸ್‌.ಆರ್‌.ಮಾಣಿಕ್ಯ ಅಭಿಪ್ರಾಯಪಟ್ಟರು.

Vijaya Karnataka 30 Nov 2018, 5:00 am
ಕಲಬುರಗಿ:ಹೆತ್ತಮ್ಮ ತನ್ನ ಕರುಳಿನ ಕುಡಿಯನ್ನು ಬೇಡ ಎಂದರೆ, ಅಂತಹ ಮಗುವನ್ನು ಹಾದಿ ಬೀದಿಯಲ್ಲಿ ಬಿಟ್ಟು ಹೋಗುವುದಕ್ಕಿಂತ ಮಮತೆಯ ತೊಟ್ಟಿಲಿಗೆ ತಂದು ಹಾಕಿ. ಸರಕಾರ ಮತ್ತು ಅಧಿಕಾರಿಗಳು ಅದಕ್ಕೊಂದು ಚೆಂದದ ಬದುಕು ಕಟ್ಟಿಕೊಡುತ್ತಾರೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಎಸ್‌.ಆರ್‌.ಮಾಣಿಕ್ಯ ಅಭಿಪ್ರಾಯಪಟ್ಟರು.
Vijaya Karnataka Web judge weighing on the cradle
ಮಮತೆಯ ತೊಟ್ಟಿಲು ತೂಗಿದ ನ್ಯಾಯಾಧೀಶರು


ನಗರದ ಬಾಲಕಿಯರ ಬಾಲಮಂದಿರದಲ್ಲಿ ಗುರುವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಅಂಗವಾಗಿ ಜಾಥಾ, ಮಕ್ಕಳ ಹಬ್ಬ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಮಮತೆಯ ತೊಟ್ಟಿಲು ಅನಾಥ ಮಕ್ಕಳಿಗೆ ರಕ್ಷಣೆ ನೀಡುತ್ತದೆ. ಬಾಲಕಿಯರ ಬಾಲ ಮಂದಿರದ ಗೋಡೆಯಲ್ಲಿರುವ ಈ ತೊಟ್ಟಿಲಿಗೆ ಎಲ್ಲಾದರೂ ಅನಾಥ ಮಗು ಸಿಕ್ಕರೆ ತಂದು ಹಾಕಿ. ಯಾರೂ ಬೇಕಾದರೂ ಹಾಕಬಹುದು. ಇಲ್ಲದೆ ಹೋದರೆ ಮಕ್ಕಳು ಪ್ರಾಣಿಗಳಿಗೆ ಆಹಾರವಾಗಬಹುದು. ಆದ್ದರಿಂದ ನಾಗರಿಕ ಸಮಾಜ ಸಹಕಾರ ನೀಡಬೇಕು ಎಂದರು.

ಅಧ್ಯಕ್ಷತೆವಹಿಸಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಿದಾಗ ಮಕ್ಕಳು ತುಂಬಾ ಯಶಸ್ಸು ಸಾಧಿಸಿ ಉತ್ತಮ ಜೀವನ ರೂಪಿಸಿಕೊಳ್ಳುತ್ತಾರೆ. ಅನಾಥ ಮಕ್ಕಳಿಗೆ ಅಧಿಕಾರಿಗಳೇ ತಾಯಿ, ತಂದೆ ಆಗಿದ್ದರಿಂದ ಅಂತಹ ಮಕ್ಕಳ ಕುರಿತು ಹೆಚ್ಚಿನ ಕಾಳಜಿ ಮಾಡಬೇಕು. ಅಲ್ಲದೆ, ಕೆಲವು ಸಂದರ್ಭದಲ್ಲಿ ನಡೆಯುವ ಘಟನೆಗಳನ್ನು ಎಚ್ಚರಿಕೆಯಿಂದ ನಿಭಾಯಿಸಬೇಕೆ ವಿನಃ ಇಲ್ಲದೆ, ಅಪವಾದಗಳಿಗೆ ಗುರಿಯಾಗಬಾರದು ಎಂದರು.

ಬಾಲ ವಿಕಾಸ ಅಕಾಡೆಮಿ ಸದಸ್ಯರು ಹಾಗೂ ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ್‌, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಚಂದ್ರಕಾಂತ ಬಿರಾದಾರ, ಸೂರ್ಯಕಾಂತ ಎಂ.ಕೆ. ಸುಧಾ ಪಾಳಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಭೀಮರಾಯ ಇದ್ದರು. ಕು. ಆಕಾಶ, ಕು. ಶಿವಮ್ಮ, ಕು.ನಾಗವೇಣಿ ಮಕ್ಕಳ ಪ್ರತಿನಿಧಿಯಾಗಿ ವೇದಿಕೆಯಲ್ಲಿದ್ದರು. ಬಳಿಕ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಜಾಥಾಕ್ಕೆ ಚಾಲನೆ


ಕಾರ್ಯಕ್ರಮಕ್ಕೂ ಮುನ್ನ ನಾನಾ ಸಂಘಟನೆಗಳು ಹಮ್ಮಿಕೊಂಡಿದ್ದ ಮಕ್ಕಳ ಜಾಗೃತಿ ಜಾಥಾಕ್ಕೆ ಸುಧಾ ಪಾಳಾ ಚಾಲನೆ ನೀಡಿದರು. ಈ ವೇಳೆಯಲ್ಲಿ ಡಾನ್‌ ಬೋಸ್ಕೋ, ವಿಶ್ವ ಸೇವಾ ಮಿಷನ್‌, ವಿಶ್ವ ಭಾರತಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಬಾಲ ಮಂದಿರ, ಬಾಲಕಿಯರ ಮಂದಿರ ಮಕ್ಕಳು ಜಾಥಾದಲ್ಲಿ ಪಾಲ್ಗೊಂಡಿದ್ದರು. ಜಾಥಾ ಆಳಂದ ವೃತ್ತದಿಂದ ಬಾಲಮಂದಿರವರೆಗೆ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ