ಆ್ಯಪ್ನಗರ

ಕಲಬುರಗಿ: ಪೊಲೀಸರ ಜೊತೆ ಜನರ ಘರ್ಷಣೆ, ಆಂಬ್ಯುಲೆನ್ಸ್‌ ಜಖಂ, ಆರೋಗ್ಯ ಸಿಬ್ಬಂದಿಗೆ ಗಾಯ

ಕೋಲ್ಕುಂದಾ ದೊಡ್ಡ ತಾಂಡಾದ 17 ವರ್ಷದ ಯುವತಿಗೆ ಕೊರೊನಾ ವೈರಸ್‌ ತಗುಲಿರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಆಕೆಯನ್ನು ಕೋವಿಡ್‌ ಆಸ್ಪತ್ರೆಗೆ ದಾಖಲು ಮಾಡುವ ಸಲುವಾಗಿ ಕರೆದುಕೊಂಡು ಬರಲು ಹೋದಾಗ ಈ ಘರ್ಷಣೆ ನಡೆದಿದೆ.

Vijaya Karnataka 19 Jun 2020, 2:25 pm

ಕಲಬುರಗಿ: ಸೇಡಂ ತಾಲೂಕಿನ ಕೋಲ್ಕುಂದಾ ದೊಡ್ಡ ತಾಂಡಾದಲ್ಲಿ ತಾಂಡಾ ಜನರು ಮತ್ತು ಪೊಲೀಸರ ಮಧ್ಯೆ ಘರ್ಷಣೆ ಶುಕ್ರವಾರ ಘರ್ಷಣೆ ನಡೆದಿದೆ. ಕೊರೊನಾ ವೈರಸ್‌ ಸೋಂಕಿತರ ಯುವತಿಯನ್ನು ಕರೆದೊಯ್ಯಲು ಪೊಲೀಸರು ಮತ್ತು ಆರೋಗ್ಯ ಸಿಬ್ಬಂದಿ ತೆರಳಿದ್ದ ವೇಳೆ ಈ ಘರ್ಷಣೆ ನಡೆದಿದೆ.
Vijaya Karnataka Web Coronavirus
ಸಾಂದರ್ಭಿಕ ಚಿತ್ರ


ಕೋಲ್ಕುಂದಾ ದೊಡ್ಡ ತಾಂಡಾದ 17 ವರ್ಷದ ಯುವತಿಗೆ ಕೊರೊನಾ ವೈರಸ್‌ ತಗುಲಿರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಆಕೆಯನ್ನು ಕೋವಿಡ್‌ ಆಸ್ಪತ್ರೆಗೆ ದಾಖಲು ಮಾಡುವ ಸಲುವಾಗಿ ಕರೆದುಕೊಂಡು ಬರಲು ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಶುಕ್ರವಾರ ಸ್ಥಳಕ್ಕೆ ತೆರಳಿದ್ದರು.

ಯುವತಿಯನ್ನು ಕರೆದೊಯ್ಯುವ ವೇಳೆ ಪೊಲೀಸರು ಮತ್ತು ಗ್ರಾಮಸ್ಥರ ಮಧ್ಯೆ ಮಾತಿನ ಚಕಮಕಿ ಆರಂಭವಾಗಿದೆ. ಈ ವೇಳೆ ಗ್ರಾಮಸ್ಥನ ಮೇಲೆ ಪೊಲೀಸರಿಂದ ಹಲ್ಲೆ ಆರೋಪ ಕೇಳಿ ಬಂದಿದ್ದು, ಮಾತಿಗೆ ಮಾತು ಬೆಳೆದು ಬಿರುಸಿನ ಘರ್ಷಣೆ ಏರ್ಪಟ್ಟಿದೆ.
ಕೊರೊನಾ ಕೇಸ್‌: ಪೊಲೀಸ್ ಜೊತೆ ಮಾರಾಮಾರಿ, ಆಂಬ್ಯುಲೆನ್ಸ್ ಜಖಂ, ವೈದ್ಯಕೀಯ ಸಿಬ್ಬಂದಿಗೆ ಗಾಯ!

ಈ ವೇಳೆ ಗ್ರಾಮಸ್ಥರು ಪೊಲೀಸರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಯ ಮೇಲೆ ದೊಣ್ಣೆ, ಕಲ್ಲಿನಿಂದ ದಾಳಿ ನಡೆಸಿದ್ದಾರೆ. ಘರ್ಷಣೆಯಲ್ಲಿ ಇಬ್ಬರು ಪೊಲೀಸರು ಮತ್ತು ಆರೋಗ್ಯ ಸಿಬ್ಬಂದಿಯೊಬ್ಬರಿಗೆ ಗಾಯವಾಗಿದೆ. ಆಂಬ್ಯಲೆನ್ಸ್‌ ಮೇಲೆಯೂ ಕಲ್ಲು ತೂರಾಟ ನಡೆಸಿದ್ದರಿಂದ ವಾಹನದ ಗಾಜುಗಳು ಪುಡಿಯಾಗಿವೆ.

ಸ್ಥಳಕ್ಕೆ ಸೇಡಂ ತಹಸೀಲ್ದಾರ್ ಭೇಟಿ ನೀಡಿದ್ದು, ಹೆಚ್ಚಿನ ಪೊಲೀಸರನ್ನು ಸ್ಥಳಕ್ಕೆ ರವಾನಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ