ಆ್ಯಪ್ನಗರ

ಕಲಬುರಗಿ: ಕನ್ಹಯ್ಯ ಕುಮಾರ್ ಭೇಟಿ ರದ್ದು ಪಡಿಸದಿರಲು ಆಗ್ರಹಿಸಿ ಹೋರಾಟ

ಕಲಬುರಗಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿರುವ ಕನ್ಹಯ್ಯ ಸಂವಿಧಾನ, ಯುವಜನತೆ ಹೊಣೆಗಾರಿಕೆ ಕುರಿತು ಉಪನ್ಯಾಸಗಳನ್ನು ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

Vijaya Karnataka Web 14 Oct 2019, 2:37 pm
ಕಲಬುರಗಿ: ಎಡಪಂಥೀಯಧಾರೆಯ ಹೋರಾಟಗಾರ ಕನ್ಹಯ್ಯಕುಮಾರ್ ನಾಳೆ ಗುಲ್ಬಗ೯ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುವುದನ್ನು ತಡೆಯದಂತೆ ದಲಿತಪರ ಸಂಘಟನೆಗಳು ಹಾಗೂ ಎಡಪಕ್ಷಗಳ ಮುಖಂಡರು ಇಲ್ಲಿನ ವಿವಿ ಆಡಳಿತ ಭವನದ ಎದುರು ಹೋರಾಟ ನಡೆಸುತ್ತಿದ್ದಾರೆ.
Vijaya Karnataka Web ಕನ್ಹಯ್ಯ ಕುಮಾರ್


ಕನ್ಹಯ್ಯ ಭೇಟಿಗೆ ಅವಕಾಶ ನೀಡದಂತೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ, ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಅವರು ಹಂಗಾಮಿ ಕುಲಪತಿ ಡಾ.ಪರಿಮಳಾ ಅಂಬೇಕರ್ ಅವರಿಗೆ ದೂರವಾಣಿ ಕರೆ ಮಾಡಿ ತಾಕೀತು ಮಾಡಿರುವ ಬೆನ್ನಲ್ಲಿಯೇ, ಈ ಕುರಿತು ನಿಣ೯ಯ ಕೈಗೊಳ್ಳಲು ಸಿಂಡಿಕೇಟ್ ಸಭೆ ಸಹ ನಡೆಯುತ್ತಿದೆ.

ಹೀಗಾಗಿ ಶತಾಯಗತಾಯ ಕನ್ಹಯ್ಯ ಭೇಟಿಗೆ ನಿರಾಕರಿಸಬಾರದು ಎಂದು ಹೋರಾಟಗಾರರು ಘೋಷಣೆಗಳನ್ನು ಕೂಗುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ